Place of worship: ಪೂಜೆ ಮಾಡುವ ಸ್ಥಳದಲ್ಲಿ ಅಥವಾ ಮನೆಯಲ್ಲಿ ಒಂದೇ ದೇವರ ವಿಗ್ರಹ ಅಥವಾ ಚಿತ್ರ ಒಂದಕ್ಕಿಂತ ಹೆಚ್ಚು ಇರಬಾರದು. ಮನೆ ದೇವಸ್ಥಾನದಲ್ಲಿ ಪೂರ್ವಜರ ಚಿತ್ರಗಳನ್ನು ಇಡಬಾರದು. ಅಲ್ಲದೆ ಭೈರವ, ಶನಿದೇವ ಮತ್ತು ಕಾಳಿ ಮಾತೆಯ ವಿಗ್ರಹಗಳನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ.
ಕೋಪವು ಸಾಮಾನ್ಯ ಮತ್ತು ಆರೋಗ್ಯಕರ ಭಾವನೆ ಎಂದು ಹೇಳಲಾಗಿದೆ. ಕೋಪವು ತನ್ನದೇಯಾದ ಶಕ್ತಿಯನ್ನು ಹೊಂದಿದ್ದು, ಆ ಶಕ್ತಿಯನ್ನು ಎದುರಿಸಲು ನಕಾರಾತ್ಮಕ ಮತ್ತು ಧನಾತ್ಮಕ ಮಾರ್ಗಗಳಿವೆ. ಕೋಪಗೊಳ್ಳುವುದು ಸರ್ವೇಸಾಮಾನ್ಯ ಸಂಗತಿ. ಆದರೆ ನೀವು ಕಂಟ್ರೋಲ್ ತಪ್ಪಿದರೆ ಅದನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಏಕೆಂದರೆ ಇದು ಕುಟುಂಬ ಮತ್ತು ವೃತ್ತಿಪರ ಜೀವನ ಸೇರಿದಂತೆ ಜೀವನದ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರಬಹುದು.
Vastu Tips for House: ಬೂಟು ಮತ್ತು ಚಪ್ಪಲಿಗಳನ್ನು ಮಲುಗುವ ಕೋಣೆಗೆ ಅಪ್ಪಿತಪ್ಪಿಯೂ ತರಬಾರದು. ಇವುಗಳನ್ನು ನಿಮ್ಮ ತಲೆಯ ಬಳಿ ಅಥವಾ ಹಾಸಿಗೆಯ ಕೆಳಗೆ ಎಂದಿಗೂ ಇಡಬಾರದು. ಇದು ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.
Vastu Tips for House: ಸ್ನಾನದ ಮಾಡಿದ ನಂತರ ಮನೆಯ ಮುಖ್ಯದ್ವಾರಕ್ಕೆ ಅರಿಶಿನವನ್ನು ಹಚ್ಚಿ ಪೂಜೆ ಮಾಡಬೇಕು. ಇದರಿಂದ ನಕರಾತ್ಮಕ ಶಕ್ತಿ ಮನೆಯೊಳಗೆ ಬರುವುದಿಲ್ಲವೆಂದು ಹೇಳಲಾಗಿದೆ.
ಫೆಂಗ್ ಶೂಯಿ ಭಾರತದ ಪ್ರಾಚೀನ ವಿಜ್ಞಾನವಾಗಿದ್ದು, ಇದನ್ನು ಮನೆ ಮತ್ತು ಕೆಲಸದ ಸ್ಥಳವನ್ನು ವಿನ್ಯಾಸಗೊಳಿಸಲು ಬಳಸಲಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಬಹುದು. ಆದ್ದರಿಂದ ಭಾರತೀಯ ನಂಬಿಕೆಗಳಲ್ಲಿ ಫೆಂಗ್ ಶೂಯಿಯನ್ನು ಅನುಸರಿಸಲು ಹೇಳಲಾಗುತ್ತದೆ.
ದೀಪವನ್ನು ಹಚ್ಚುವುದರ ಪ್ರಯೋಜನಗಳು: ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ಆರಾಧನೆಯ ಸಮಯದಲ್ಲಿ ದೀಪವನ್ನು ಹಚ್ಚುವುದು ಮುಖ್ಯ. ದೀಪದ ಬೆಳಕನ್ನು ಜ್ಞಾನದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಇದು ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಮತ್ತು ಶುದ್ಧತೆಯನ್ನು ತರುತ್ತದೆ. ವಿವಿಧ ರೀತಿಯಲ್ಲಿ ಮಾಡಿದ ದೀಪಗಳನ್ನು ಬೆಳಗಿಸುವುದು ವಿವಿಧ ರೀತಿಯ ಸಮಸ್ಯೆಗಳು ಮತ್ತು ಮಂಗಳಕರವಾಗಿದೆ.
Tulsi Vastu Tips: ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಕೆಲವು ಗಿಡಗಳನ್ನು ಇಡಬಾರದು. ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡರೆ ನಿಮ್ಮ ಮನೆಯ ಶಕ್ತಿಯನ್ನು ಧನಾತ್ಮಕವಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಜೀವನವು ಸಂತೋಷದಿಂದ ಕೂಡಿರುತ್ತದೆ.
Vastu Tips for House: ಮನೆ ಕಟ್ಟುವಾಗ ಅದು ಎಲ್ಲಾ ರೀತಿಯಿಂದಲೂ ನಮಗೆ ಶುಭವಾಗಿರಬೇಕೆಂದು ಬಯಸುತ್ತೇವೆ. ಹೀಗಾಗಿ ಮನೆ ಕಟ್ಟಬೇಕಾದರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ವಾಸ್ತು ಶಾಸ್ತ್ರದ ಸಲಹೆಗಳು: ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮನೆಯಲ್ಲಿ ಕರ್ಪೂರವನ್ನು ಹಚ್ಚಿದರೆ ನಕಾರಾತ್ಮಕ ಶಕ್ತಿ ಮನೆಯಿಂದ ದೂರವಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಉರಿಸಬೇಕು ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ಪೂಜೆ, ಧಾರ್ಮಿಕ ವಿಧಿವಿಧಾನಗಳಲ್ಲಿ ಮಣಿಕಟ್ಟಿನ ಮೇಲೆ ಕೆಂಪು ಅಥವಾ ಹಳದಿ ದಾರವನ್ನು ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಣಿಕಟ್ಟಿನ ಮೇಲೆ ಕಟ್ಟಲಾದ ಈ ದಾರವನ್ನು ರಕ್ಷಾಸೂತ್ರವೆಂದು ಕರೆಯಲಾಗುತ್ತದೆ. ಇದನ್ನು ಧರಿಸುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಸುತ್ತಲೂ ಹರಡುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.
Vastu Tips for Home: ವ್ಯಕ್ತಿ ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ. ಇದನ್ನು ಮಾಡದಿದ್ದರೆ, ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ಲಭಿಸುವುದಿಲ್ಲ. ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಮನೆಯನ್ನು ಕಟ್ಟುವಾಗ ಅಥವಾ ಮನೆಯಲ್ಲಿ ವಸ್ತುಗಳನ್ನು ಇಡುವಾಗ, ಕೋಣೆಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಬೇಕು ಅಥವಾ ಮಾಡಬೇಕು.
ವಾಸ್ತುಶಾಸ್ತ್ರದಲ್ಲಿ ಅನೇಕ ಸಸ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಇವುಗಳನ್ನು ನೆಡುವ ಮೂಲಕ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಬಹುದಾಗಿದೆ. ತುಳಸಿ ಗಿಡದಂತೆ ಬಿದಿರಿನ ಗಿಡವೂ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ವಾಸ್ತುಶಾಸ್ತ್ರದಲ್ಲಿ ಅನೇಕ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡಲಾಗಿದೆ. ಈ ಸಲಹೆಗಳನ್ನು ಪಾಲಿಸಿದ್ರೆ ವ್ಯಕ್ತಿ ಅದೃಷ್ಟವು ಬೆಳಗಲಿದ್ದು, ಕೋಟ್ಯಾಧಿಪತಿಯಾಗಿ ಐಷಾರಾಮಿ ಜೀವನ ನಡೆಸಬಹುದು. ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದು ವ್ಯಕ್ತಿಯ ಪ್ರಗತಿಯ ದಾರಿ ತೆರೆಯುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧ ಸಹ ಮನೆಗೆ ಸಮೃದ್ಧಿಯನ್ನು ತರುತ್ತದೆ. ಅದೇ ರೀತಿ ಅದನ್ನು ತಪ್ಪಾದ ಸ್ಥಳದಲ್ಲಿ ಇಡುವುದು ಹಾನಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಲಾಫಿಂಗ್ ಬುದ್ಧನ ಸಹಾಯದಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತಿನ ಹರಿವು ಇರುತ್ತದೆ.
Benefits Of Lighting Camphor: ಮನೆಯಲ್ಲಿ ಕರ್ಪೂರ ಬೆಳಗುವುದರ ಹಲವು ಲಾಭಗಳಿವೆ. ದೇವರಿಗೆ ಪ್ರಸನ್ನಗೊಳಿಸಿ ಕೃಪೆ ಪಡೆಯುವುದರಿಂದ ಹಿಡಿದು ಮನೆ ವಾಸ್ತು ದೋಷ ನಿವಾರಿಸುವುದರೆ ಜೊತೆಗೆ ಪತಿ-ಪತ್ನಿಯರ ನಡುವಿನ ಸಂಬಂಧವನ್ನ ಕೂಡ ಸುಧಾರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.