Vastu Plant: ಮನೆಯ ಸರಿಯಾದ ದಿಕ್ಕಿನಲ್ಲಿ ಈ ಚಿಕ್ಕ ಗಿಡ ನೆಟ್ಟರೆ ಹಣದ ಸುರಿಮಳೆಯಾಗಲಿದೆ!

ವಾಸ್ತುಶಾಸ್ತ್ರದಲ್ಲಿ ಅನೇಕ ಸಸ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಇವುಗಳನ್ನು ನೆಡುವ ಮೂಲಕ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಬಹುದಾಗಿದೆ. ತುಳಸಿ ಗಿಡದಂತೆ ಬಿದಿರಿನ ಗಿಡವೂ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.  

Written by - Puttaraj K Alur | Last Updated : Dec 6, 2022, 02:52 PM IST
  • ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುವ ಸ್ಥಳದಲ್ಲಿ ಬಿದಿರಿನ ಗಿಡವನ್ನು ನೆಡಬೇಕು
  • ಬಿದಿರಿನ ಗಿಡವನ್ನು ನೆಡುವು ಸರಿಯಾದ ದಿಕ್ಕು ಉತ್ತರವೆಂದು ವಾಸ್ತು ತಜ್ಞರು ಹೇಳಿದ್ದಾರೆ
  • ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸದಿದ್ದರೆ ಮನೆಯಲ್ಲಿ ಬಿದಿರಿನ ಗಿಡವನ್ನು ನೆಡಬೇಕು
Vastu Plant: ಮನೆಯ ಸರಿಯಾದ ದಿಕ್ಕಿನಲ್ಲಿ ಈ ಚಿಕ್ಕ ಗಿಡ ನೆಟ್ಟರೆ ಹಣದ ಸುರಿಮಳೆಯಾಗಲಿದೆ! title=
ಬಿದಿರಿನ ಗಿಡದ ಪ್ರಯೋಜನಗಳು

ನವದೆಹಲಿ: ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ. ಮನೆಯಲ್ಲಿ ನೆಟ್ಟ ಮರಗಳು ಮತ್ತು ಗಿಡಗಳು ಸಂತೋಷ, ಸಮೃದ್ಧಿ ಮತ್ತು ಪ್ರಗತಿಯನ್ನು ತರುತ್ತವೆ ಎಂದು ನಂಬಲಾಗಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶಮಾಡಲು, ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಸಸ್ಯಗಳನ್ನು ನೆಡುವುದು ಅವಶ್ಯಕ. ವಾಸ್ತು ತಜ್ಞರ ಪ್ರಕಾರ, ಕೆಲವು ಗಿಡಗಳನ್ನು ಮನೆಯೊಳಗೆ ಮತ್ತು ಕೆಲವು ಗಿಡಗಳನ್ನು ಮನೆಯ ಹೊರಗೆ ನೆಡಬೇಕಂತೆ. ಹಾಗೆಯೇ ತುಳಸಿ ಗಿಡದ ವಿಶೇಷ ಮಹತ್ವವನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ತುಳಸಿ ಗಿಡದ ಹೊರತಾಗಿ ಮನೆಯ ವಾಸ್ತುವನ್ನು ಗುಣಪಡಿಸುವ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುವ ಸಸ್ಯವೂ ಇದೆ. ಇದನ್ನು ಬಿದಿರು ಸಸ್ಯ ಎಂದೂ ಕರೆಯುತ್ತಾರೆ. ಇದನ್ನು ಮನೆಯಲ್ಲಿ ನೆಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಮನೆಯಲ್ಲಿ ಬಿದಿರಿನ ಗಿಡವನ್ನು ನೆಡುವುದರಿಂದ ಸಿಗು ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಇದನ್ನೂ ಓದಿ: ಈ ದಿನಾಂಕದಲ್ಲಿ ಜನಿಸಿದವರ ಪಾಲಿಗೆ ಸಿಹಿಯನ್ನೇ ಹೊತ್ತು ತರಲಿದೆ 2023 .! ಹೆಗಲೇರುವುದು ಯಶಸ್ಸು

ಮನೆಯ ಈ ದಿಕ್ಕಿನಲ್ಲಿ ಬಿದಿರಿನ ಗಿಡ ನೆಡಿ

ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಯಾವುದಾದರೂ ಸರಿಯಾದ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಅದರ ಲಾಭ ದೊರೆಯುತ್ತದೆ. ಮನೆಯಲ್ಲಿ ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತುಕೊಳ್ಳುವ ಸ್ಥಳದಲ್ಲಿ ಬಿದಿರಿನ ಗಿಡವನ್ನು ನೆಡಬೇಕು. ಮನೆಯ ಡ್ರಾಯಿಂಗ್ ರೂಂ, ಹಾಲ್ ಇತ್ಯಾದಿಗಳಲ್ಲಿ ಬಿದಿರು ಗಿಡವನ್ನು ಇಡುವುದು ಉತ್ತಮವೆಂದು ಹೇಳಲಾಗಿದೆ. ಇದನ್ನು ಇಡಲು ಉತ್ತಮವಾದ ದಿಕ್ಕು ಉತ್ತರ ಎಂದು ಹೇಳಲಾಗಿದೆ.

  • ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಬಿದಿರಿನ ಗಿಡವನ್ನು ನೆಟ್ಟರೆ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ. ಮನೆಯ ಸದಸ್ಯರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
  • ವ್ಯಕ್ತಿಯ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಗಳು ಕಂಡುಬಂದರೆ, ಬಿದಿರಿನ ಕಾಂಡವನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಸುತ್ತಿ ಗಾಜಿನ ಪಾತ್ರೆಯಲ್ಲಿ ಇಡುವುದು ಪ್ರಯೋಜನಕಾರಿ. ಆದರೆ ಈ ಬಿದಿರಿನ ಕಾಂಡವು ಒಣಗಿರಬಾರದು.      
  • ಯಾವುದೇ ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸದಿದ್ದರೆ, ಅವರು ಮನೆಯಲ್ಲಿ ಬಿದಿರಿನ ಗಿಡವನ್ನು ನೆಡಬೇಕು. ಮನೆಯಲ್ಲಿ ಬಿದಿರಿನ ಗಿಡವನ್ನು ನೆಟ್ಟರೆ ಧನಲಾಭದ ಸಾಧ್ಯತೆಗಳಿವೆ.
  • ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸಲು ಮನೆಯಲ್ಲಿ ಬಿದಿರಿನ ಗಿಡವನ್ನು ನೆಡಲು ಸಲಹೆ ನೀಡಲಾಗುತ್ತದೆ. ಓದುತ್ತಿರುವ ಮಗುವಿನ ಕೋಣೆಯಲ್ಲಿ 4 ಚಿಕ್ಕ ಗಿಡಗಳನ್ನು ನೆಟ್ಟರೆ ಮಕ್ಕಳ ಮನಸ್ಸು ಅಧ್ಯಯನದಿಂದ ವಿಚಲಿತವಾಗುವುದಿಲ್ಲವಂತೆ.

ಇದನ್ನೂ ಓದಿ: ಇನ್ನು ಹತ್ತು ದಿನಗಳ ನಂತರ ತಪ್ಪಿಯೂ ಈ ಕೆಲಸ ಮಾಡಬೇಡಿ.! ಎದುರಾಗುವುದು ನಷ್ಟ

ಮನೆಯ ಸರಿಯಾದ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ನೆಟ್ಟರೆ ನಿಮಗೆ ಹಲವಾರು ರೀತಿಯ ಪ್ರಯೋಜನಗಳು ದೊರೆಯುತ್ತವೆ. ಧನಾತ್ಮಕ ಶಕ್ತಿಯಿಂದ ಮುಕ್ತಿ ದೊರೆಯುವುದರ ಜೊತೆಗೆ ನಿಮ್ಮ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News