ದೇಶದಲ್ಲಿ ಕರೋನವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ಜುಲೈ 6 ಮತ್ತು ಜುಲೈ 19 ರ ನಡುವೆ ದೆಹಲಿ, ಮುಂಬೈ, ಚೆನ್ನೈ, ಪುಣೆ, ನಾಗ್ಪುರ ಮತ್ತು ಅಹಮದಾಬಾದ್ಗಳಿಂದ ಕೋಲ್ಕತ್ತಾದಲ್ಲಿ ಯಾವುದೇ ಪ್ರಯಾಣಿಕರ ವಿಮಾನಗಳು ಇಳಿಯುವುದಿಲ್ಲ ಎಂದು ಕೋಲ್ಕತಾ ವಿಮಾನ ನಿಲ್ದಾಣ ಶನಿವಾರ ತಿಳಿಸಿದೆ.
ಮಹಾರಾಷ್ಟ್ರರಾಜ್ಯವು ಕರೋನವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮತ್ತೊಂದು ದೈನಂದಿನ ದಾಖಲೆಯನ್ನು ಸೃಷ್ಟಿಸಿದೆ, 6,330 ಹೊಸ ಸೋಂಕುಗಳು ಗುರುವಾರ ದಾಖಲಾಗಿದ್ದು, ಇದುವರೆಗೆ ದಾಖಲಾದ ಒಟ್ಟು ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 1,86,626 ಕ್ಕೆ ತಲುಪಿದೆ.
ಮಹಾರಾಷ್ಟ್ರ ಗುರುವಾರದಂದು 4,841 ಹೊಸ ಕೋವಿಡ್ 19 ಪ್ರಕರಣಗಳೊಂದಿಗೆ ಅತಿ ಹೆಚ್ಚು ಏಕದಿನ ಸ್ಪೈಕ್ ದಾಖಲಿಸಿದ್ದು, ರಾಜ್ಯದ ಒಟ್ಟು ಕರೋನವೈರಸ್ ಸೋಂಕುಗಳ ಸಂಖ್ಯೆಯನ್ನು 1,47,741 ಕ್ಕೆ ತಲುಪಿದೆ .ಗುರುವಾರದಂದು 192 ಸಾವುಗಳು ವರದಿಯಾಗಿದ್ದು, ಆ ಮೂಲಕ ರಾಜ್ಯದಲ್ಲಿ ಒಟ್ಟು ಸಾವುನೋವುಗಳ ಸಂಖ್ಯೆ 6,931 ಕ್ಕೆ ತಲುಪಿದೆ.
ಪ್ರಸ್ತುತ ಮುಂಬೈಗೆ ಹೋಗಲು ಯಾವುದೇ ಧೈರ್ಯವಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಮುಂಬೈನಲ್ಲಿ ಕೊರೊನಾ ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಅವರ ಹೇಳಿಕೆ ಬಂದಿದೆ.
ಮುಂಬೈನ ಐಕಾನಿಕ್ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು,ಇಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ.ಮಾರುಕಟ್ಟೆಯ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.
ಅರಬ್ಬಿ ಸಮುದ್ರದ ಮೂಲಕ ಆಗಮಿಸಿದ ನಿಸರ್ಗ ಚಂಡಮಾರುತ( Cyclone Nisarga) ಇಂದು ಮಹಾರಾಷ್ಟ್ರ ಕರಾವಳಿಯ ಬಳಿಯ ಅಲಿಬಾಗ್ ಗೆ ಮಧ್ಯಾಹ್ನ 1 ಗಂಟೆಗೆ ಅಪ್ಪಳಿಸಿತು.ಆದರೆ ಇದು ಈಗ ಕೆಲವೇ ಘಂಟೆಗಳಲ್ಲಿ ದುರ್ಬಲಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಅರೇಬಿಯನ್ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ನಿಸರ್ಗ ಚಂಡಮಾರುತ ( cyclone Nisarga ) ಆಳವಾಗಿ ಆವರಿಸಿಕೊಂಡಿದ್ದು, ಬುಧುವಾರದ ವೇಳೆಗೆ ಮುಂಬೈಗೆ ಅಪ್ಪಳಿಸಲಿದೆ ಎನ್ನಲಾಗಿದೆ.
ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಅಹಮದಾಬಾದ್ನಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ ಮುಂಬೈ ಮತ್ತು ದೆಹಲಿಯಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಕಾರಣವಾಗಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರೌತ್ ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.