ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಗೆ ಸಮೀಪವಿರುವ ಯಾರ್ಲುಂಗ್ ಜಾಂಗ್ಬೋ ನದಿಯ ಕೆಳಭಾಗದಲ್ಲಿ ಅಣೆಕಟ್ಟು ನಿರ್ಮಿಸುವುದು ತನ್ನ ನ್ಯಾಯಸಮ್ಮತ ಹಕ್ಕಿನಲ್ಲಿದೆ ಎಂದು ಚೀನಾ ಗುರುವಾರ ಹೇಳಿದೆ, ಆದರೆ ಜಲವಿದ್ಯುತ್ ಯೋಜನೆಯು ಕೆಳಗಿರುವ ಭಾರತ ಮತ್ತು ಬಾಂಗ್ಲಾದೇಶದಂತಹ ದೇಶಗಳ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಭರವಸೆ ನೀಡಿದೆ.
ಕೋವಿಡ್ -19 ಹಾಗೂ ಎಲ್ ಎ ಸಿಯಲ್ಲಿ ಯಥಾಸ್ಥಿತಿಯನ್ನು ಸ್ಥಿತಿಗತಿಯನ್ನು ಬದಲಾಯಿಸುವ ಚೀನಾದ ಕ್ರಮವು ಭದ್ರತಾ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದೆ.ಭಾರತೀಯ ನೌಕಾಪಡೆ ತನ್ನ ಪಿ -8 ಪೋಸಿಡಾನ್ ವಿಮಾನ ಮತ್ತು ಹೆರಾನ್ ಡ್ರೋನ್ಗಳನ್ನು ಉತ್ತರದ ಗಡಿನಾಡುಗಳ ಮೇಲೆ ಕಣ್ಗಾವಲುಗಾಗಿ ನಿಯೋಜಿಸಿದೆ ಎಂದು ನೌಕಾ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಗುರುವಾರ ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿಯೆಟ್ನಾಂನ ರಕ್ಷಣಾ ಸಚಿವ ಜನರಲ್ ಜುವಾನ್ ಲಿಚ್ ನಡುವೆ ವರ್ಚ್ಯುವಲ್ ಸಭೆ ನಡೆದಿದೆ. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಿತು.
ಭಯೋತ್ಪಾದನೆಯನ್ನು ನಿಭಾಯಿಸಲು ಭಾರತ ತಂದಿರುವ ನೀತಿ ಬದಲಾವಣೆಗಳು, ಲಡಾಖ್ನಲ್ಲಿ ಗಡಿ ನಿಲುಗಡೆ ಬಗೆಹರಿಸಲು ಚೀನಾದೊಂದಿಗೆ ಮಾತುಕತೆ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯ 18 ನೇ ಆವೃತ್ತಿಯಲ್ಲಿ ಮಾತನಾಡಿದ್ದಾರೆ.
ಚೀನಾದಲ್ಲಿ ಮತ್ತೆ ಕರೋನಾ ಸೋಂಕು ವೇಗವಾಗಿ ಹೆಚ್ಚಾಗುವ ಸಾಧ್ಯತೆ ಇದ್ದು ಇದಕ್ಕಾಗಿಯೇ ಬೀಜಿಂಗ್ನ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಕ್ಸಿನ್ಫಾಡಿಯಲ್ಲಿ ಶೀತ-ಸರಪಳಿ ಮತ್ತು ಜಲ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹವನ್ನು ಸರ್ಕಾರ ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಈ ಮಾರುಕಟ್ಟೆಯಿಂದ ಕರೋನಾವೈರಸ್ ಪ್ರಪಂಚದಾದ್ಯಂತ ಹರಡಿತು ಎಂದು ನಂಬಲಾಗಿದೆ.
ಸೋಶಿಯಲ್ ಮೀಡಿಯಾ ದೈತ್ಯ ಟ್ವಿಟರ್ ತನ್ನ ಜಿಯೋ-ಲೊಕೇಶನ್ ಸೇವೆಯಲ್ಲಿ ಲೇಹ್ ಅನ್ನು ಚೀನಾದ ಭಾಗವಾಗಿ ತೋರಿಸುವ ಮೂಲಕ ಭಾರತದ ಜನರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಸಂಸದೀಯ ಸಮಿತಿಯೊಂದಕ್ಕೆ ಲಿಖಿತ ಕ್ಷಮೆಯಾಚಿಸಿದೆ ಎಂದು ಬಿಜೆಪಿ ಸಂಸದ ಮೀನಾಕ್ಷಿ ಲೆಖಿ ಬುಧವಾರ ಹೇಳಿದ್ದಾರೆ.
ಚೀನಾದೊಂದಿಗಿನ ಲಡಾಖ್ನಲ್ಲಿ ಮುಖಾಮುಖಿಗೆ ಯಾವುದೇ ರೀತಿಯ ಕೊರತೆಯಾಗಬಾರದು ಹಾಗೂ ಚಳಿಗಾಲದಲ್ಲಿ ಉಷ್ಣತೆಯ ತೀವ್ರ ಕುಸಿತದ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ಇಲ್ಲಿ ಬೀಡುಬಿಟ್ಟಿರುವ ಸಾವಿರಾರು ಸೈನಿಕರಿಗೆ ಆಧುನಿಕ ಸೌಕರ್ಯಗಳನ್ನು ಒದಗಿಸಿದೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ರಷ್ಯಾ 12ನೇ ಬ್ರಿಕ್ಸ್ ಸಮಿತ್ ಅನ್ನು ಆಯೋಜಿಸುತ್ತಿದೆ. ಇದು ನರೇಂದ್ರ ಮೋದಿ ಮತ್ತು ಕ್ಸಿ ಜಿನ್ ಪಿಂಗ್ ಒಂದೇ ವೇದಿಕೆಗೆ ಬರಲು ಅವಕಾಶ ಮಾಡಿಕೊಟ್ಟಿದೆ.
ಕಳೆದ 8 ತಿಂಗಳುಗಳಿಂದ ಅಂದರೆ ಮಾರ್ಚ್ನಲ್ಲಿ ಲಾಕ್ಡೌನ್ ಜಾರಿಗೆ ಬಂದಾಗಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ನಿಧಾನವಾಗಿ ಟ್ರ್ಯಾಕ್ಗೆ ಮರಳಲು ಪ್ರಾರಂಭಿಸಿದೆ ಎಂದು ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಪ್ರಕ್ಷುಬ್ಧತೆ ಮತ್ತು ಅನಿರೀಕ್ಷಿತತೆಯ ಮಧ್ಯೆ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವೇಗದಲ್ಲಿ ಯಾವುದೇ ಉಲ್ಬಣವು ಯುರೇಷಿಯಾದಲ್ಲಿ ಪ್ರಾದೇಶಿಕ ಅಸ್ಥಿರತೆಯನ್ನು ಮತ್ತಷ್ಟು ಪ್ರಚೋದಿಸುತ್ತದೆ ಮತ್ತು ಘರ್ಷಣೆಯನ್ನು ಇತರ ಆಟಗಾರರು ತಮ್ಮ ಭೌಗೋಳಿಕ-ರಾಜಕೀಯ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದು ರಷ್ಯಾ ಗುರುವಾರ ಹೇಳಿದೆ.
ಭಾರತದೊಂದಿಗೆ ಗಡಿ ತಗಾದೆ ತೆಗೆದಿರುವ ಚೀನಾ (China) ಈಗ ಟಿಬೆಟ್ ನಲ್ಲಿ(Tibet) ಇನ್ನೊಂದು ರಣ ತಂತ್ರ ರೂಪಿಸುತ್ತಿದೆ.ಸಮುದ್ರ ಮಟ್ಟದಿಂದ 3656 ಮೀಟರ್ ಎತ್ತರದಲ್ಲಿರುವ ಟಿಬೆಟ್ ನಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಕೇಂದ್ರವನ್ನು ನಿರ್ಮಿಸುತ್ತಿದೆ. ಹೈ ಅಲ್ಟಿಟ್ಯುಡ್ ಇಲಾಖೆಯಲ್ಲಿ ನಿರ್ಮಿಸುತ್ತಿರುವ ಪ್ರಪಂಚದ ಅತಿ ದೊಡ್ಡ ಕ್ಲೌಡ್ ಕಂಪ್ಯೂಟಿಂಗ್ ಸೆಂಟರ್ ಇದಾಗಲಿದೆ.
ಅಕ್ಟೋಬರ್ 30 ರ ಶುಕ್ರವಾರದಿಂದ ಭಾರತದಲ್ಲಿ ಬಳಕೆದಾರರಿಗೆ ಪ್ರವೇಶವನ್ನು PUBG ಮೊಬೈಲ್ ಕೊನೆಗೊಳಿಸಲಿದೆ. ಸೆಪ್ಟೆಂಬರ್ ಆರಂಭದಲ್ಲಿ ಸರ್ಕಾರವು ತನ್ನ ಜನಪ್ರಿಯ ಹಗುರವಾದ ಆವೃತ್ತಿ PUBG ಮೊಬೈಲ್ ಲೈಟ್ ಮತ್ತು ಇತರ 116 ಅಪ್ಲಿಕೇಶನ್ಗಳನ್ನು ನಿಷೇಧಿಸಿದ ಸುಮಾರು ಎರಡು ತಿಂಗಳ ನಂತರ ಈ ಕ್ರಮವು ಬಂದಿದೆ.
ಪಾಕಿಸ್ತಾನ ಮತ್ತು ಚೀನಾ ಜೊತೆ ದೇಶ ಯಾವಾಗ ಯುದ್ಧ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ವಿವಾದಾತ್ಮಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 3ರಂದು ಅಮೆರಿಕ ಅಧ್ಯಕ್ಷರ ಚುನಾವಣೆ (US Presidential Election 2020) ನಡೆಯಲಿದೆ. ಈ ಹಿನ್ನಲೆಯಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದೇಶದ ಜನತೆಗೆ ಡೊನಾಲ್ಡ್ ಟ್ರಂಪ್ ಮಹತ್ವದ ವಾಗ್ಧಾನವನ್ನು ನೀಡಿದ್ದಾರೆ.
ಕರೋನಾವೈರಸ್ ಸಾಂಕ್ರಾಮಿಕದ ಮಧ್ಯೆ ಚೀನಾದ ಶ್ರೀಮಂತ ಕೈಗಾರಿಕೋದ್ಯಮಿ ಜ್ಯಾಕ್ ಮಾ ಅವರ ಸಂಪತ್ತು ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಇ-ಕಾಮರ್ಸ್ ದೈತ್ಯ ಅಲಿಬಾಬಾ ಸಂಸ್ಥಾಪಕ ಜಾಕ್ ಮಾ ಕೂಡ ಈ ವರ್ಷ ಚೀನಾದ ಶ್ರೀಮಂತ ಕೈಗಾರಿಕೋದ್ಯಮಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.