Viral News - ಲಖನೌ (Lucknow) ಬಳಿ ಇರುವ ಹಳ್ಳಿಯೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಈ ಗ್ರಾಮದ ಹೆಸರು ಕೊರೌನಾ (Corona Village). ಕೊರೊನಾ ವೈರಸ್ (Coronavirus) ಅನ್ನು ಹೋಲುವ ಹೆಸರಿನಿಂದಾಗಿ, ಈ ಗ್ರಾಮದ ಬಗ್ಗೆ ಜನರ ಮನದಲ್ಲಿ ಭೀತಿ ಮನೆಮಾಡಿದೆ ಇದು ದೊಡ್ಡ ವರ್ಗಕ್ಕೆ ತಮಾಷೆಯ ವಿಷಯವಾಗಿದೆ. ಜನರು ಇಲ್ಲಿಗೆ ತಲುಪಿ ವೀಡಿಯೊ ಮತ್ತು ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
South Africa Series: ಟೀಂ ಇಂಡಿಯಾ ಇದೇ ತಿಂಗಳ 26 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಮತ್ತು ನಂತರ ಸಮಾನ ಸಂಖ್ಯೆಯ ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಆದರೆ ಈ ಸರಣಿಯ ಆರಂಭದ ಮುಂಚೆಯೇ, ಅದರ ರದ್ದತಿಯ ಅಪಾಯವಿದೆ.
Omicron: ಬ್ರಿಟನ್ನಲ್ಲಿ ಕೊರೊನಾ ವೈರಸ್ ಮತ್ತೊಮ್ಮೆ ತಲ್ಲಣ ಮೂಡಿಸಿದೆ. ಅಲ್ಲಿ, ಒಂದು ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆ ಇರುವುದು ಸಮಾಧಾನದ ಸಂಗತಿ.
Corona Latest News - ಕೊರೊನಾ ವೈರಸ್ ನ ಹೊಸ ರೂಪಾಂತರಿ ದೇಶದ 11 ರಾಜ್ಯಗಳಿಗೆ ತಲುಪಿದೆ. ನಿತ್ಯ ಓಮಿಕ್ರಾನ್ ಸೋಂಕಿನ ಹೊಸ ಪ್ರಕರಣಗಳು ದೃಢಪಡುತ್ತಿವೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆಯನ್ನು ನೀಡಿದೆ.
ಕರ್ನಾಟಕ ಮತ್ತು ಕೇರಳ ಕ್ರಮವಾಗಿ ಆರು ಮತ್ತು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದ ನಂತರ ಭಾರತದ ಒಮಿಕ್ರಾನ್ ಕೋವಿಡ್ ಸಂಖ್ಯೆ ಶನಿವಾರದಂದು 126 ಕ್ಕೆ ಏರಿದೆ, ಮಹಾರಾಷ್ಟ್ರದಲ್ಲಿ ಇನ್ನೂ ಮೂರು ಜನರು ಸಹ ರೂಪಾಂತರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
Pfizer On COVID-19: 2024 ರವರೆಗೆ ಕರೋನಾ ಸಾಂಕ್ರಾಮಿಕವು ಕೊನೆಗೊಳ್ಳುವುದಿಲ್ಲ ಎಂದು ಫಿಜರ್ ಭವಿಷ್ಯ ನುಡಿದಿದೆ. ಕಳೆದ ತಿಂಗಳು Omicron ರೂಪಾಂತರವು ಕಾಣಿಸಿಕೊಂಡ ಹಿನ್ನೆಲೆ Pfizerನ ಈ ಮುನ್ಸೂಚನೆಯು ಪ್ರಕಟಗೊಂಡಿದೆ.
ಬೆಂಗಳೂರು: ಗುರುವಾರದಂದು ಕರ್ನಾಟಕದಲ್ಲಿ ಕೋವಿಡ್ -19 ರ ಓಮಿಕ್ರಾನ್ ರೂಪಾಂತರದ ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ತಿಳಿಸಿದ್ದಾರೆ.
Five more cases of #Omicron have been detected in Karnataka today:
ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳ ಮಧ್ಯೆ, ಕೋವಿಡ್-19 ಮೂರನೇ ಅಲೆಯು ದೇಶದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಮತ್ತು ಜನರನ್ನು ರಕ್ಷಿಸಲು ಸರ್ಕಾರವು ಬೂಸ್ಟರ್ ಡೋಸ್ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು ಎಂದು ಉನ್ನತ ಆರೋಗ್ಯ ತಜ್ಞರು ಹೇಳಿದ್ದಾರೆ.
Omicron Variant: ಕರೋನಾ ವೈರಸ್ನ ಓಮಿಕ್ರಾನ್ ರೂಪಾಂತರದ ಬಗ್ಗೆ ಪ್ರಪಂಚದಾದ್ಯಂತ ಆತಂಕದ ಮೋಡ ಕವಿದಿದೆ. ಈ ಮಧ್ಯೆ ಲಸಿಕೆಯ ಬೂಸ್ಟರ್ ಡೋಸ್ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಉನ್ನತ ಆರೋಗ್ಯ ತಜ್ಞರು ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ವ್ಯಕ್ತಿಯ ದೇಹದಲ್ಲಿನ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಗುಣವನ್ನು ‘ಒಮಿಕ್ರಾನ್’ ಹೊಂದಿದೆ. ಈ ತಳಿಯು ದೇಹದಲ್ಲಿನ ರೋಗನಿರೋಧಕ ಶಕ್ತಿಯಿಂದಲೂ ತಪ್ಪಿಸಿಕೊಳ್ಳುವುದೇ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.
ಚಿಬಾಬಾಯಿ 72 ಗಂಟೆ ಅವಧಿಯಲ್ಲಿ 2 ಕಡೆ ಕೊರೊನಾ ಟೆಸ್ಟ್ (Corona test) ಮಾಡಿಸಿದ್ದ. ಜಯನಗರದ ಎಸ್.ಆರ್.ಲ್ಯಾಬ್ನಲ್ಲಿ ಪಾಸಿಟಿವ್ ವರದಿ ನೀಡಲಾಗಿತ್ತು. ಹೀಗಾಗಿ ಏರ್ಪೋರ್ಟ್ ರಸ್ತೆಯ ಸಿಂಜಿನ್ ಲ್ಯಾಬ್ನಿಂದ ನಕಲಿ ನೆಗೆಟಿವ್ ವರದಿ ಪಡೆದಿದ್ದ ಆರೋಪ ಚಿಬಾಬಾಯಿ ವಿರುದ್ಧ ಇತ್ತು.
ಚಿಕ್ಕಮಗಳೂರು ಜಿಲ್ಲೆಯ ಶಾಲೆಯೊಂದರಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ COVID-19 ಗೆ ಪರೀಕ್ಷೆಗೆ ಒಳಗಾಗಿದ್ದಾರೆ, ನಂತರ ಶಾಲಾ ಕಟ್ಟಡವನ್ನು ಸೀಲ್ ಮಾಡಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
Omicron in Karnataka: ರಾಜ್ಯದಲ್ಲಿ ಮತ್ತೊಂದು ಓಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು ರಾಜ್ಯದಲ್ಲಿ ಈ ವರೆಗೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಆಫ್ರಿಕಾದಿಂದ ವಾಪಸಾಗಿರುವ 34 ವರ್ಷದ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.