ಪಂಜಶೀರ್ ಪ್ರಾಂತ್ಯ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆ(NRFA) ತಾಲಿಬಾನಿಗಳಿಗೆ ದೊಡ್ಡ ಕಂಟಕವಾಗಿದ್ದಾರೆ.
Afghanistan Crisis - ತಾಲಿಬಾನಿಗಳು (Taliban) ತನ್ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆಯೋಬ್ಬರು ಆರೋಪಿಸಿದ್ದಾರೆ. ಈ ಮಹಿಳಾ ಕಾರ್ಯಕರ್ತೆ ಕಾಬೂಲ್ ನಲ್ಲಿ (Kabul) ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರಾಜಕೀಯ ಹಕ್ಕುಗಳಿಗಾಗಿ ನಡೆದ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಈ ಮಹಿಳಾ ಕಾರ್ಯಕರ್ತೆಯ ವಿಡಿಯೋ ಕೂಡ ಪ್ರಕಟಗೊಂಡಿದೆ. ಈ ವಿಡಿಯೋದಲ್ಲಿ ಆಕೆಯ ತಲೆಗೆ ಗಂಭೀರ ಗಾಯವಾಗಿ ಮುಖದ ಮೇಲೆ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ.
ಅಫ್ಘಾನಿಸ್ತಾನದ ಪಂಜ್ಶಿರ್ ಕಣಿವೆಯಲ್ಲಿ ತಾಲಿಬಾನ್ ಮತ್ತು ಪ್ರತಿರೋಧ ಪಡೆಗಳ ನಡುವೆ ಶನಿವಾರ ಹೊಸ ಕಾದಾಟ ವರದಿಯಾಗಿದೆ.ಇದೇ ವೇಳೆ ತಾಲಿಬಾನ್ ನೂತನ ಸರ್ಕಾರ ರಚನೆಗೆ ಸಿದ್ದತೆ ನಡೆಸುತ್ತಿದೆ.
ತಾಲಿಬಾನ್ ಕಾಬೂಲ್ ನಲ್ಲಿ ಇರಾನ್ ರೀತಿಯಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸಲು ಸಜ್ಜಾಗಿದೆ.ತಾಲಿಬಾನ್ನ ಅತಿದೊಡ್ಡ ನಾಯಕ ಮುಲ್ಲಾ ಹೆಬತುಲ್ಲಾ ಅಖುಂಡಜಾದನನ್ನು ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿದ್ದಾರೆ ಎಂದು ತಿಳಿದುಬಂದಿದೆ.
ಅಫ್ಘಾನಿಸ್ತಾನದಲ್ಲಿರುವ ಬಗ್ರಾಮ್ ವಾಯುಪಡೆ ನೆಲೆಯನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಭಾರತವು ಚೀನಾವನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ ಮತ್ತು ಭಾರತದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ಪಾಕಿಸ್ತಾನವನ್ನು ಅದು ಬಳಸಿಕೊಳ್ಳಲು ಮುಂದಾಗುತ್ತಿದೆ ಎಂದು ನಿಕ್ಕಿ ಹ್ಯಾಲೆ ಎಚ್ಚರಿಸಿದ್ದಾರೆ.
ನಿನ್ನೆ ರಾತ್ರಿ ಖವಾಕ್ ಪ್ರದೇಶದ ಮೇಲೆ ದಾಳಿ ಮಾಡಲು ಬಂದ 350 ತಾಲಿಬಾನಿಗಳನ್ನು ಕೊಲ್ಲಲಾಗಿದೆ. ಅಲ್ಲದೆ, 40 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ ಎಂದು Northern Alliance ಟ್ವೀಟ್ ಮೂಲಕ ತಿಳಿಸಿದೆ.
ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯ ಮತ್ತು ನಾವು ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಇದರೊಂದಿಗೆ, ಅನಸ್ ಹಕ್ಕಾನಿ ಪಾಕಿಸ್ತಾನದ ಸಂಪರ್ಕದ ಬಗ್ಗೆಯೂ ಅವರು ಮಾತನಾಡಿದರು.
UNSC: ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ (Taliban) ಆಳ್ವಿಕೆಯ ನಂತರ, ಭಾರತದ ನೇತೃತ್ವದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (United Nations Security Counsil) ಆಫ್ಘಾನ್ ಭೂಮಿಯನ್ನು ಬೇರೆ ಯಾವುದೇ ದೇಶದ ವಿರುದ್ಧ ಬಳಸಬಾರದೆಂಬ ನಿರ್ಣಯವನ್ನು ಅಂಗೀಕರಿಸಿದೆ.
Viral Video: ಅಮೆರಿಕಾದ ರಾಷ್ಟ್ರಾಧ್ಯಕ್ಷ ಜೋ ಬಿಡೆನ್ ಉಗ್ರರಿಗೆ (Terrorist) ನೀಡಿರುವ ಒಂದು ಧಮ್ಕಿಗೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ಥಿಗಳು ಇದು ಬಾಲಿವುಡ್ ನಟರಾಗಿದ್ದ ರಾಜಕುಮಾರ್ (Rajkumar) ಅವರ ಡೈಲಾಗ್ ಡಿಲೆವರಿಯನ್ನು ಕಾಪಿ ಮಾಡಿದ್ದಾರೆ ಎಂದು ಜರಿಯುತ್ತಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಬ್ರಿಟನ್ ಅನ್ನು ಗುರಿಯಾಗಿಸಿಕೊಂಡಿದೆ. ವಿಮಾನ ನಿಲ್ದಾಣದ ಗೇಟ್ ಅನ್ನು ಮುಚ್ಚಬೇಕೆಂದು ಯುಎಸ್ ಬಯಸಿತು, ಆದರೆ ಬ್ರಿಟನ್ ಅದಕ್ಕೆ ಸಿದ್ಧವಿರಲಿಲ್ಲ. ಏಕೆಂದರೆ ಬ್ರಿಟನ್ ತನ್ನ ರಕ್ಷಣಾ ಕಾರ್ಯಾಚರಣೆಯನ್ನು ಆದಷ್ಟು ಬೇಗ ಮುಗಿಸಬೇಕಿತ್ತು. ಈ ಕಾರಣದಿಂದ ಭಯೋತ್ಪಾದಕರಿಗೆ ದಾಳಿ ಮಾಡಲು ಅವಕಾಶ ಸಿಕ್ಕಿತು ಎಂದು ಯುಎಸ್ ಆರೋಪಿಸಿದೆ.
ನವದೆಹಲಿ: Rajnath Singh On Afghanistan Crisis - ಅಫ್ಘಾನಿಸ್ತಾನದ (Afghanistan) ಪ್ರಸ್ತುತ ಬೆಳವಣಿಗೆಗಳು ಭದ್ರತೆಯ ಹೊಸ ಸವಾಲುಗಳನ್ನು ಹುಟ್ಟುಹಾಕಿವೆ ಮತ್ತು ಕೇಂದ್ರ ಸರ್ಕಾರವು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಸೋಮವಾರ ಹೇಳಿದ್ದಾರೆ.
Afghanistan Crisis: ತಾಲಿಬಾನ್ ತನ್ನ ನೆರೆ ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯ ಬಯಸುತ್ತದೆ ಎಂದು ಸ್ಟೈನಿಕಜೈ ಹೇಳಿದ್ದಾನೆ. ಖಾಸಗಿ ಚಾನೆಲ್ ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆತಈ ವಿಷಯವನ್ನು ಹೇಳಿದ್ದಾನೆ.
Afghanistan Crisis News: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾವಳಿ ಮುಂದುವರಿದಿದೆ. ಅಫ್ಘಾನಿಸ್ತಾನದಿಂದ ಹೊರಹೋಗುವ ಭರವಸೆಯಲ್ಲಿ ಹೆಚ್ಚಿನ ಸಂಖ್ಯೆಯ ಅಫಘಾನ್ ಪ್ರಜೆಗಳು ಕಾಬೂಲ್ ವಿಮಾನ ನಿಲ್ದಾಣದ ಬಳಿ ಬೀಡುಬಿಟ್ಟಿದ್ದಾರೆ.
ಯುನೈಟೆಡ್ ಸ್ಟೇಟ್ಸ್ (ಯುಎಸ್) ಮಿಲಿಟರಿ ಪಡೆಗಳು ಭಾನುವಾರ ಕೇವಲ ಎರಡು ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಎರಡನೇ ವೈಮಾನಿಕ ದಾಳಿ ನಡೆಸಿತು ಮತ್ತು ಕಾಬೂಲ್ನ ಹಮದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಸನ್ನಿಹಿತ ಐಸಿಸ್-ಕೆ' ಬೆದರಿಕೆಯನ್ನು ತೆಗೆದುಹಾಕಿದೆ ಎಂದು ಹೇಳಿದೆ.
Rocket Attack Near Kabul Airport - ಕಾಬೂಲ್ ವಿಮಾನ ನಿಲ್ದಾಣದ (Kabul Airport)ಬಳಿ ಮತ್ತೊಮ್ಮೆ ದೊಡ್ಡ ದಾಳಿ (Terror Attack) ನಡೆದಿದೆ. ಈ ಬಾರಿ ಭಯೋತ್ಪಾದಕರು ರಾಕೆಟ್ ನಿಂದ ಮನೆಯೊಂದನ್ನು ಗುರಿಯಾಗಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.
ಕಾಬೂಲ್ನಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ಈ ಎಚ್ಚರಿಕೆಯನ್ನು ನೀಡಲಾಗಿದೆ. ಭಯೋತ್ಪಾದಕ ದಾಳಿಯ ಬಗ್ಗೆ ನಿರ್ದಿಷ್ಟ, ವಿಶ್ವಾಸಾರ್ಹ ಮಾಹಿತಿ ದೊರೆತಿದೆ ಎಂದು ಅಮೆರಿಕ ತನ್ನ ಎಚ್ಚರಿಕೆಯಲ್ಲಿ ತಿಳಿಸಿದೆ.
US Military Airstrike On ISIS- K: ಅಫ್ಘಾನಿಸ್ತಾನದಲ್ಲಿರುವ ಐಸಿಸ್-ಕೆ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ವಾಯುದಾಳಿ ನಡೆಸಿದೆ. ಈ ದಾಳಿಯಲ್ಲಿ ಐಸಿಸ್ ಭಾರೀ ನಷ್ಟವನ್ನು ಅನುಭವಿಸಿದೆ ಎನ್ನಲಾಗಿದೆ.
ತಾಲಿಬಾನ್ ಭಯೋತ್ಪಾದಕರು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್ನ 313 ಬದ್ರಿ ವಿಶೇಷ ಪಡೆಗಳ ಘಟಕವು ಕಾಬೂಲ್ ವಿಮಾನ ನಿಲ್ದಾಣದ ಮಿಲಿಟರಿ ವಿಭಾಗದಲ್ಲಿ ಪ್ರವೇಶ ಪಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.