ಖಾಸಗಿ ಕಂಪನಿ ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸರ್ಕಾರಕ್ಕೆ ಒತ್ತಡ ಹಾಕುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್ " ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದ್ದರೆ ರಾಜ್ಯವು ಹೆದರುವ ಅಗತ್ಯವಿಲ್ಲ ಏಕೆಂದರೆ ಸುಪ್ರೀಂ ಕೋರ್ಟ್ ಮನುಷ್ಯರನ್ನು ತಿನ್ನುವ ಹುಲಿಗಳಲ್ಲ ಎಂದು ವ್ಯಾಖ್ಯಾನಿಸಿದೆ.
ಸರಕಾರ ಕಳೆದ ವಾರ 328 ಔಷಧಿಗಳನ್ನು ನಿಷೇಧಿಸಿದ ಬಳಿಕ ಸಾರಿಡಾನ್ ಮತ್ತು ಇನ್ನಿತರ ಔಷಧಗಳನ್ನು ಮಾರಾಟ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಔಷಧ ತಯಾರಕರು ಸಲ್ಲಿಸಿದ ಮನವಿಯ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಇದೇ ಅಕ್ಟೋಬರ್ 2 ರಂದು ಸುಪ್ರೀಂಕೋರ್ಟ್ ನಿಂದ ನಿವೃತ್ತಿ ಹೊಂದಲಿದ್ದಾರೆ.ಆದರೆ ತಿಂಗಳಿಗೂ ಕಡಿಮೆ ಕಾಲಾವಧಿ ಇರುವ ಈ ಸಂದರ್ಭದಲ್ಲಿ ಇನ್ನು ಹಲವು ಮಹತ್ವದ ವಿಷಯಗಳ ಕುರಿತಾದ ತೀರ್ಪುಗಳು ಬಾಕಿ ಇವೆ.ಈ ತೀರ್ಪುಗಳು ದೇಶದ ಸಂವಿಧಾನದ ಮತ್ತು ರಾಜಕೀಯ ಚಿತ್ರಣವನ್ನೇ ಬದಲಿಸಲಿವೆ ಎಂದು ಹೇಳಬಹುದು. ಆದ್ದರಿಂದ ಅಂತ ಇನ್ನು ಕಾಯ್ದಿರಿಸಿರುವ ತೀರ್ಪುಗಳತ್ತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಆಧಾರದ ಕಾನೂನು ಮಾನ್ಯತೆ
ಸುಪ್ರೀಂಕೋರ್ಟ್ ಮಂಗಳವಾರದಂದು ತಮಿಳುನಾಡು ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ವೇದಾಂತ ಗ್ರೂಪ್ ಗೆ ಸ್ಥಗೀತಗೊಂಡಿರುವ ಮುಖ್ಯ ಸ್ಟೇರ್ಲೈಟ್ ತಾಮ್ರ ಘಟಕವನ್ನು ನಿರ್ವಹಿಸಲು ನೀಡಿರುವ ಅವಕಾಶವನ್ನು ಪ್ರಶ್ನಿಸಿ ತುರ್ತು ಅರ್ಜಿ ವಿಚಾರಣೆ ನಡೆಸಲು ಕೋರಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ.
ಐವರು ಮಾನವ ಹಕ್ಕು ಹೋರಾಟಗಾರ ಬಂಧನವನ್ನು ಪ್ರಶ್ನಿಸಿ ರೋಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಸತೀಶ್ ದೇಶಪಾಂಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಪ್ರತಿರೋಧ ಎನ್ನುವುದು ಪ್ರಜಾಪ್ರಭುತ್ವದ ರಕ್ಷಾ ಕವಚ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.