ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ, ಅಭಿಮಾನಿಗಳಿಗೆ ಬಿಸಿ ರಾಗಿ ಮುದ್ದೆ ಮಟನ್ ಊಟ ಆಯೋಜನೆ ಮಾಡಿದ್ರು. ಚುನಾವಣೆಯ ಪೂರ್ವ ತಯಾರಿಯಲ್ಲಿ ಸಂಪಂಗಿ ಮಟನ್ ಊಟ ವ್ಯವಸ್ಥೆ ಮಾಡಿದ್ರು.
ಕೋಲಾರ ಜಿಲ್ಲೆಯ ಕೆಜಿಎಫ್ ನ ನಾಗಶೆಟ್ಟಿಹಳ್ಳಿಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಗೆ ಮಾಂಸದೂಟ ಮತ್ತು ರಾಗಿ ಮುದ್ದೆ ಊಟ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಮನರಂಜನೆ ಕಾರ್ಯಕ್ರಮದಲ್ಲಿ ನೃತ್ಯ ತಂಡಗಳು ಭಾಗಿಯಾಗಿದ್ದವು. ಮಾಜಿ ಶಾಸಕ ವೈ.ಸಂಪಂಗಿಗೆ ಈಗ 51ರ ಸಂಭ್ರಮದಲ್ಲಿ ಸಚಿವ ಮುನಿರತ್ನ ಸೇರಿದಂತೆ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಕೋಡಿಹಳ್ಳಿ ಮಂಜುನಾಥ್ ಭಾಗಿಯಾಗಿದ್ದರು.
ಕೆಜಿಎಫ್ 2 ಚಿತ್ರವು ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ ಸಾರ್ವಕಾಲಿಕ ಹಿಟ್ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ, ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ಇನ್ನು ಕೆಲವೇ ದಿನಗಳಲ್ಲಿ 50 ದಿನಗಳ ಬಾಕ್ಸ್ ಆಫೀಸ್ ಯಾನವನ್ನು ಪೂರೈಸಲಿದೆ.ಇದೆ ಸಂದರ್ಭದಲ್ಲಿ ಈಗ ಅಭಿಮಾನಿಗಳು ತಮ್ಮ ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತವಾಗಿ ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಬಹುದಾಗಿದೆ.
ಜಮುಯಿ ಜಿಲ್ಲೆಯಲ್ಲಿ ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಅನ್ವೇಷಿಸಲು ಬಿಹಾರ ಸರ್ಕಾರವು ಅನುಮತಿ ನೀಡಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಜಮುಯಿ ಜಿಲ್ಲೆಯಲ್ಲಿ 37.6 ಟನ್ ಖನಿಜಯುಕ್ತ ಅದಿರು ಸೇರಿದಂತೆ ಸುಮಾರು 222.88 ಮಿಲಿಯನ್ ಟನ್ಗಳಷ್ಟು ಚಿನ್ನದ ನಿಕ್ಷೇಪವಿದೆ.
ಕೆಜಿಎಫ್ ಫ್ರಾಂಚೈಸಿನ ಮೊದಲ ಎರಡು ಅಧ್ಯಾಯಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಈಗ ಮೂರನೇ ಚಾಪ್ಟರ್ ನಲ್ಲಿ ರಾಣಾ ದಗ್ಗುಬಟಿ ನಟಿಸಲಿದ್ದಾರೆ ಎನ್ನುವ ಸುದ್ದಿ ಈಗ ಹರಿದಾಡುತ್ತಿದೆ.ಈಗಾಗಲೇ ಕೆಜಿಎಫ್ 2 ಚಿತ್ರದಲ್ಲಿ ಅಧೀರಾ ಪಾತ್ರ ಸತ್ತಿರುವುದರಿಂದ ಮುಂಬರುವ ಕೆಜಿಎಫ್ 3 ನಲ್ಲಿ ರಾಣಾ ದಗ್ಗುಬಟಿ ಪ್ರಮುಖ ಖಳನಾಯಕನ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.
ಮೋಹನ್ ಜುನೇಜ ಸಿನಿಮಾದಲ್ಲಿದ್ದಾರೆ ಅಂದ್ರೆ ಸಿನಿಮಾ ಮುಗಿಯುವವರೆಗೂ ಹೊಟ್ಟೆ ಹುಣ್ಣಾಗಿಸುವಷ್ಟು ನಗಬಹುದು. ಆದ್ರೆ ಇದೀಗ ವಿಧಿಯಾಟವೇ ಬೇರೆಯಾಗಿತ್ತು. ಇನ್ನೂ ಮೋಹನ್ ಜುನೇಜ ಕೇವಲ ನೆನಪು ಮಾತ್ರ.
ಅದೊಂದು ಕಾಲವಿತ್ತು. ಕನ್ನಡ ಚಿತ್ರಗಳನ್ನ ಪರಭಾಷಿಕರು ನೋಡದೇ ಇರುವ ಪರಿಸ್ಥಿತಿ ಇತ್ತು. ಆದರೆ ಅದೆಲ್ಲಾ ಇದೀಗ ಬದಲಾಗಿ ಹೋಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಜಗತ್ತಿನಾದ್ಯಂತ ಮಿರಮಿರನೆ ಮಿಂಚುತ್ತಿದೆ. ಅದರಲ್ಲೂ ಕನ್ನಡ ಸಿನಿ ರಂಗದ ಪ್ಯೂರ್ ಗೋಲ್ಡ್ 'ಕೆಜಿಎಫ್' ಚಿತ್ರ ಸ್ಯಾಂಡಲ್ವುಡ್ನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸುತ್ತಿದೆ.
ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ ಕೆಜಿಎಫ್ ಎಲ್ಲೆಲ್ಲೂ ಸದ್ದು ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ಮಾಡಿದ ಮೋಡಿಗೆ ಇಡೀ ಜಗತ್ತೇ ಫಿದಾ ಆಗಿದ್ದು, ಎಲ್ಲರೂ ನಮ್ಮ ಹೆಮ್ಮೆಯ ಕನ್ನಡದ ಚಿತ್ರವನ್ನ ಕೊಂಡಾಡುತ್ತಿದ್ದಾರೆ. ಅದರಲ್ಲೂ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ ಕೆಜಿಎಫ್ ಚಾಪ್ಟರ್ 2 ಹೊಸ ದಾಖಲೆ ನಿರ್ಮಿಸಿದ್ದು, ಅಧಿಕೃತ ಘೋಷಣೆಯೊಂದೇ ಈಗ ಬಾಕಿ ಎನ್ನಲಾಗ್ತಿದೆ.
ಎಲ್ಲೆಲ್ಲೂ ಕೆಜಿಎಫ್ ಜಪ.. ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾಗಿ 2 ವಾರ ಕಳೆದರೂ ರಾಕಿ ಭಾಯ್ ಹವಾ ಮಾತ್ರ ಇನ್ನೂ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬಾಕ್ಸ್ ಆಫೀಸ್ನಲ್ಲಿ ರಾಕಿ ಸುಲ್ತಾನನ ರೀತಿ ಮೆರೆಯುತ್ತಿದ್ದಾರೆ.
ಚಾಮುಂಡೇಶ್ವರಿ ಸನ್ನಿದಿಯಲ್ಲಿ ನಿರ್ದೇಶಕ ಪ್ರೇಮ್ರ ಹೊಸ ಚಿತ್ರ ಮುಹೂರ್ತ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿರ್ದೇಶಕ ಪ್ರೇಮ್ ಕಾಂಬಿನೇಷನ್ನಲ್ಲಿ ಸಿನಿಮಾ. #KVN4 ಹೆಸರಿನ ಚಿತ್ರಕ್ಕೆ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ. ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಚಿತ್ರತಂಡ. ಪೂಜೆ ನಂತರ ದೇವಸ್ಥಾನದ ಮುಂಭಾಗ ಕ್ಲ್ಯಾಪಿಂಗ್.
ಬಾಲಕ ಹಾರ ಹಾಕಿದಕ್ಕೆ ಧ್ರುವ ಸರ್ಜಾ ಮಾಡಿದ್ದೇನು..! ಧ್ರುವ ಸರ್ಜಾಗೆ ಹಾರ ಹಾಕಿದ ಪುಟ್ಟ ಪೋರ..! ನಟ ಧ್ರುವ ಸರ್ಜಾ ಹೊಸ ಚಿತ್ರ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಮೂರ್ತ ನೆರವೇರಿತು.ಈ ವೇಳೆ ಧ್ರುವ ಸರ್ಜಾಗೆ ಪುಟ್ಟ ಬಾಲಕ ಹೂವಿನ ಹಾರವನ್ನು ಹಾಕಲು ಬಂದ ಆ ವೇಳೆ ಅದೇ ಹಾರವನ್ನು ತೆಗದು ಧ್ರುವ ಸರ್ಜಾ ಪುಟ್ಟ ಬಾಲಕನ ಕೊರಳಿಗೆ ಹಾಕಿ ಸಂಭ್ರಮಿಸಿದ್ರು..
ಬಾಲಕ ಹಾರ ಹಾಕಿದಕ್ಕೆ ಧ್ರುವ ಸರ್ಜಾ ಮಾಡಿದ್ದೇನು..! ಧ್ರುವ ಸರ್ಜಾಗೆ ಹಾರ ಹಾಕಿದ ಪುಟ್ಟ ಪೋರ..! ನಟ ಧ್ರುವ ಸರ್ಜಾ ಹೊಸ ಚಿತ್ರ ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಿತ್ರದ ಮೂರ್ತ ನೆರವೇರಿತು.ಈ ವೇಳೆ ಧ್ರುವ ಸರ್ಜಾಗೆ ಪುಟ್ಟ ಬಾಲಕ ಹೂವಿನ ಹಾರವನ್ನು ಹಾಕಲು ಬಂದ ಆ ವೇಳೆ ಅದೇ ಹಾರವನ್ನು ತೆಗದು ಧ್ರುವ ಸರ್ಜಾ ಪುಟ್ಟ ಬಾಲಕನ ಕೊರಳಿಗೆ ಹಾಕಿ ಸಂಭ್ರಮಿಸಿದ್ರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.