Fake Bill Scams: ಸಿಎಂ, ಡಿಸಿಎಂ ಕಿತ್ತಾಟದಲ್ಲಿ ಕಾಂಗ್ರೆಸ್ ಶಾಸಕರು ಅಂತೂ ಅನಾಥರಾಗಿದ್ದಾರೆ. ಯಾವುದೇ ಕ್ಷೇತ್ರವಿರಲಿ #ATMSarkaraಕ್ಕೆ ಕಮಿಷನ್ ಗ್ಯಾರಂಟಿ ಆದ್ರೆ ಮಾತ್ರ ಅನುದಾನಕ್ಕೆ ಪರ್ಮಿಷನ್..! ಎಂದು ಬಿಜೆಪಿ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರವು ಶಕ್ತಿ ಯೋಜನೆಯನ್ನು ಅಸಮರ್ಪಕವಾಗಿ ಜಾರಿ ಮಾಡಿ ತಪ್ಪನ್ನು ನೌಕರರ ತಲೆಗೆ ಕಟ್ಟಲು ಮುಂದಾಗಿದೆ. ಮಹಿಳಾ ಪ್ರಯಾಣಿಕರ ಸಂಚಾರದ ಬಗ್ಗೆ ಸಾರಿಗೆ ಸಿಬ್ಬಂದಿಗಳು ಅಕ್ರಮವೆಸಗುತ್ತಿದ್ದಾರೆಂದು ಅವರಿಗೆ ಎಚ್ಚರಿಕೆಯ ನೋಟಿಸ್ ನೀಡಿದೆ ಎಂದು ಬಿಜೆಪಿ ಟೀಕಿಸಿದೆ.
Bhuvaneshwari Devi statue: ನಾಡದೇವಿ ಭುವನೇಶ್ವರಿಗೆ ಪ್ರತಿಮೆ ನಿರ್ಮಾಣ ಮಾಡುವ ಯೋಜನೆ ಎಲ್ಲಾ ಅನುಮತಿಯೂ ಪಡೆದು ಅನುದಾನ ಬಿಡುಗಡೆಯಷ್ಟೇ ಬಾಕಿ ಎಂದಾಗ ಕಾಂಗ್ರೆಸ್ ಸರ್ಕಾರ ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲ ಎನ್ನುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯಾಧ್ಯಕ್ಷ ಹುದ್ದೆಗೆ ರೇಸ್ ಅಂತ ಕಾಂಪಿಟೇಶನ್ ಇಟ್ಟಿಲ್ಲ. ಹಾಗಾಗಿ, ರೇಸ್ ಪ್ರಶ್ನೆ ಇಲ್ಲ. ಕಾಂಪಿಟೇಶನ್ ಇದ್ದಾಗ ರೇಸ್ನಲ್ಲಿ ಇರಬೇಕಾಗುತ್ತೆ. ಹಾಗಾಂತ, ನಾನು ರೇಸ್ನಲ್ಲಿ ಇದ್ದೇನೆ ಎಂದು ಭಾವಿಸಬೇಡಿ. ನಾನು ರೇಸ್ನಲ್ಲಿ ಇಲ್ಲ ಎಂದು ಚಿಕ್ಕಮಗಳೂರು ಮಾಜಿ ಶಾಸಕ ಸಿ.ಟಿ.ರವಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
Congress Guarantee Schemes: ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ರಾಜ್ಯಾದ್ಯಂತ ಹಾಡುಹಗಲೇ ಹಣ ಪಡೆಯಲಾಗುತ್ತಿದೆ. ಕಾಂಗ್ರೆಸ್ಗೆ ವೋಟು ಹಾಕಿದ ತಪ್ಪಿಗೆ, ಈಗ ರಾಜ್ಯದ ಮಹಿಳೆಯರು ಗೃಹಲಕ್ಷ್ಮಿ ಗಾರಂಟಿಯ ಹಣ ಪಡೆಯಲು ಹಣ ನೀಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ಟೀಕಿಸಿದೆ.
Karnataka BJP Slams Congress Government: ಈ ಬಗ್ಗೆ ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಂಪೂರ್ಣ ಬಹುಮತ ಬಂದರೂ ಮುಖ್ಯಮಂತ್ರಿಯ ಆಯ್ಕೆಗೆ ಹೈಡ್ರಾಮಾ ನಡೆಸುವ ಮೂಲಕ ಆರಂಭಗೊಂಡ ಕಾಂಗ್ರೆಸ್ನ ಈ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ’ವೆಂದು ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ದೊಡ್ಡ ವಿವಾದ ಸೃಷ್ಟಿಸಿರುವ ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಯುವತಿಯರ ಅರೆನಗ್ನ ವಿಡಿಯೋ ಸೆರೆ ಹಿಡಿದಿರುವ ಪ್ರಕರಣ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಹಲವಾರು ವಿಧ್ವಂಸಕ ಕೃತ್ಯ ನಡೆಸಿ, ಅಮಾಯಕರನ್ನು ಬಲಿ ಪಡೆದ ಭಯೋತ್ಪಾದಕ ಮಸೂದ್ ಅಜರ್ನನ್ನು, ರಾಹುಲ್ ಗಾಂಧಿ ಮಸೂದ್"ಜೀ" ಎಂದು ಕರೆಯುವ ಮೂಲಕ ಉಗ್ರರ ಬಗ್ಗೆ ತಮಗಿರುವ ಆಂತರಿಕ ಪ್ರೇಮವನ್ನು ವ್ಯಕ್ತಪಡಿಸಿದ್ದರು ಎಂದು ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯದ ಸಾವಿರಾರು ಯುವಕರ ಭವಿಷ್ಯ ಕಸಿದ, ಬಿಜೆಪಿ ಅವಧಿಯಲ್ಲಿ ನಡೆದ PSI ನೇಮಕಾತಿ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿದೆ ನಮ್ಮ ಸರ್ಕಾರ. ಈಗ ಹಗರಣದ ಇಂಚಿಂಚೂ ತನಿಖೆಗೆ ಒಳಪಡಲಿದೆ ಎಂದು ಕಾಂಗ್ರೆಸ್ ಎಚ್ಚರಿಕೆ ಸಂದೇಶ ನೀಡಿದೆ.
Congress Vs BJP: ಬಿಜೆಪಿಯ ಕಮಿಷನ್ ಸರ್ಕಾರದ ಆಡಳಿತದಲ್ಲಿ ಗುತ್ತಿಗೆ ಪಡೆದು ಕಳಪೆ ಮೊಟ್ಟೆ ಪೂರೈಕೆ ಮಾಡಿದ ಸರಬರಾಜುದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ನಮ್ಮ ಸರ್ಕಾರ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬುದನ್ನು ನಿರೂಪಿಸಿದೆ.
Karnataka BJP Slams CM Siddaramaiah: ರಾಜ್ಯದಲ್ಲಿ ನೂರಕ್ಕೆ ನೂರು ಜಾರಿಯಾದ ಏಕೈಕ ಗ್ಯಾರಂಟಿ ಯಾವುದೆಂದು ನೂರೈವತ್ತರ ಗಡಿ ಗಾಟಿದ ಟೊಮೆಟೊ-ಬದನೆಗಳೇ ತೋರಿಸಿಕೊಡುತ್ತಿವೆ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದ ಜನರ ಜೀವನೋಪಾಯಕ್ಕೆ #ATMSarkara ಕೊಳ್ಳಿ ಇಟ್ಟಿದೆ. ಒಂದು ಕಡೆ ಜನತೆ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದರೆ, ಇನ್ನೊಂದೆಡೆ ತರಕಾರಿ ಬೆಲೆ ಕೇಳಿದರೆ ಗ್ರಾಹಕರು ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಹೈಕಮಾಂಡ್ನಿಂದ ಫೈನಲ್ ಆಗದ ʻಸೂತ್ರಧಾರʼನ ಹೆಸರು ʻಸಾರಥಿʼಯೇ ಇಲ್ಲದೇ ಸದನಕ್ಕೆ ಇಂದು ಕಮಲ ಕಲಿಗಳ ಎಂಟ್ರಿ ಕಗ್ಗಂಟು ಇತ್ಯರ್ಥಕ್ಕೆ ರಾಜ್ಯಕ್ಕೆ ಬರಲಿದ್ದಾರೆ ಇಬ್ಬರು ವೀಕ್ಷಕರು ಜಾತಿ ಲೆಕ್ಕಾಚಾರ ಹಾಕಿ ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ ಶಾಸಕರ ಜೊತೆ ಚರ್ಚೆ ನಡೆಸಿ ವರದಿ ನೀಡಲಿರುವ ವೀಕ್ಷಕರು
BJP vs Congress: ಬಹುಮತ ದೊರೆತರೂ, ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವಲ್ಲಿ ಕಾಂಗ್ರೆಸ್ ನಡೆಸಿದ ಹಗ್ಗಜಗ್ಗಾಟವನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಇವರಿಂದ ಹೇಳಿಸಿಕೊಂಡು ಬುದ್ದಿ ಕಲಿಯುವ ಪರಿಸ್ಥಿತಿ ಯಾರಿಗೂ ಬಂದಿಲ್ಲವೆಂದು ಬಿಜೆಪಿ ಕುಟುಕಿದೆ.
ಡ್ಯಾಮೇಜ್ ಕಂಟ್ರೋಲ್ಗೆ ಇಂದು ಬಿಜೆಪಿ ಮಹತ್ವದ ಮೀಟಿಂಗ್ ಪಕ್ಷದ ವಿರುದ್ಧ ಮಾತಾಡಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಬಿಜೆಪಿ ಇಂದಿನ ಮೀಟಿಂಗ್ಗೆ ಬರಲು ಸೂಚಿಸಿರುವ ಶಿಸ್ತು ಸಮಿತಿ ಅಧ್ಯಕ್ಷರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.