ಸಿಎಂ ಸಿದ್ದರಾಮಯ್ಯನವರೇ ಕುಂಭಕರ್ಣ ನಿದ್ದೆಗೆ ಕೊನೆ ಯಾವಾಗ?: ಬಿಜೆಪಿ ವ್ಯಂಗ್ಯ

ರಾಜ್ಯದ ಜನರ ಜೀವನೋಪಾಯಕ್ಕೆ #ATMSarkara ಕೊಳ್ಳಿ ಇಟ್ಟಿದೆ. ಒಂದು ಕಡೆ ಜನತೆ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದರೆ, ಇನ್ನೊಂದೆಡೆ ತರಕಾರಿ ಬೆಲೆ ಕೇಳಿದರೆ ಗ್ರಾಹಕರು ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.

Written by - Puttaraj K Alur | Last Updated : Jul 4, 2023, 04:19 PM IST
  • ಬರ ಮತ್ತು ಬೆಲೆ ಏರಿಕೆಯಿಂದ ರಾಜ್ಯದ ಜನ-ಜೀವನ ಅಸ್ತವ್ಯಸ್ತವಾಗಿದೆ
  • ಗ್ಯಾರಂಟಿ ಜಾರಿ ವಿಚಾರದಲ್ಲಿಯೂ ಸಹ ರಾಜ್ಯದ ಜನರನ್ನು ನಂಬಿಸಿ ವಂಚಿಸಲಾಗಿದೆ
  • ಸಿಎಂ ಸಿದ್ದರಾಮಯ್ಯನವರೇ ಕುಂಭಕರ್ಣ ನಿದ್ದೆಗೆ ಕೊನೆ ಯಾವಾಗ? ಎಂದು ಪ್ರಶ್ನಿಸಿದ ಬಿಜೆಪಿ
ಸಿಎಂ ಸಿದ್ದರಾಮಯ್ಯನವರೇ ಕುಂಭಕರ್ಣ ನಿದ್ದೆಗೆ ಕೊನೆ ಯಾವಾಗ?: ಬಿಜೆಪಿ ವ್ಯಂಗ್ಯ title=
ಸಿದ್ದರಾಮಯ್ಯನವರೇ ಕುಂಭಕರ್ಣ ನಿದ್ದೆಗೆ ಕೊನೆ ಯಾವಾಗ?

ಬೆಂಗಳೂರು: ಒಂದೆಡೆ ಬರ ಇನ್ನೊಂದೆಡೆ ಬೆಲೆ ಏರಿಕೆಯ ಬರೆ. ಸಿಎಂ ಸಿದ್ದರಾಮಯ್ಯನವರೇ ಕುಂಭಕರ್ಣ ನಿದ್ದೆಗೆ ಕೊನೆ ಯಾವಾಗ? ಎಂದು ಬಿಜೆಪಿ ವ್ಯಂಗ್ಯವಾಡಿದೆ. ‘ಬರ, ಬೆಲೆ ಏರಿಕೆಯಿಂದ ರಾಜ್ಯದ ಜನ-ಜೀವನ ಅಸ್ತವ್ಯಸ್ತವಾಗಿದೆ. ಗ್ಯಾರಂಟಿ ಜಾರಿ ವಿಚಾರದಲ್ಲಿಯೂ ಸಹ ರಾಜ್ಯದ ಜನರನ್ನು ನಂಬಿಸಿ  ವಂಚಿಸಲಾಗಿದೆ. ಆದರೇ ಇದಾವುದರ ಬಗ್ಗೆಯೂ ಕೊಂಚವೂ ತಲೆಕೆಡಿಸಿಕೊಳ್ಳದ #ATMSarkaraದ ಸಿದ್ದರಾಮಯ್ಯ ತನ್ನ ಕುರ್ಚಿಯನ್ನು ಭದ್ರ ಮಾಡಿಕೊಳ್ಳುವ ಸರ್ಕಸ್‌ನಲ್ಲಿ ನಿರತರಾಗಿದ್ದಾರೆ’ ಎಂದು ಟೀಕಿಸಿದೆ.

‘ನಮ್ಮ ಸಂಸ್ಕೃತಿ -ಪರಂಪರೆಗಳೇ ನಮ್ಮ ನಾಡಿನ ಅಸ್ಮಿತೆ ಕಾಪಾಡುವ ಮೂಲ ಬೇರು. ಮತಾಂತರಕ್ಕೆ ಕುಮ್ಮಕ್ಕು ನೀಡುವ ಮೂಲಕ ಆ ಬೇರಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಿರಲ್ಲಾ ಸಿದ್ದರಾಮಯ್ಯನವರೇ. ಒಂದೆಡೆ ಹೈಕಮಾಂಡ್‌ ತೃಪ್ತಿಪಡಿಸಲು ಮಿಷನರಿಗಳನ್ನು ಒಳಬಿಟ್ಟುಕೊಂಡು ಇನ್ನೊಂದೆಡೆ ನಿಮ್ಮ ಪಿಎಫ್‌ಐ ಬಾಂಧವರಿಗೆ ಸಹಾಯ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ರ್ಕಾರಿ ಶಾಲೆಯ ಸೂರು ಅಭದ್ರ: ಮಳೆಯಾದ್ರೇ ಪಾಠ ಬೋಧನೆ ಬಂದ್

‘ಗ್ಯಾರಂಟಿಯೆಂಬ ಸುಳ್ಳಿನ ಸರಮಾಲೆಯನ್ನೇ ಹೆಣೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ಕಿವಿ ಮೇಲೆ ಹೂ ಇಡುತ್ತಿದೆ. ಉಭಯ ಸದನಗಳಲ್ಲೂ ಕಾಂಗ್ರೆಸ್ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸಲಾಗದೆ ತಪ್ಪಿಸಿಕೊಳ್ಳುವ ವಾಮ ಮಾರ್ಗ ಹುಡುಕುತ್ತಿದೆ. ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಂದು ಮೊಂಡಾಟ ಆಡುತ್ತಿದ್ದಾರೆ. ಭಂಡ #ATMSarkaraದ ಮೊಂಡಾಟ ಇನ್ನು ಮುಂದೆ ನಡೆಯುವುದಿಲ್ಲ’ವೆಂದು ಬಿಜೆಪಿ ಟ್ವೀಟ್ ಮಾಡಿದೆ.

‘ರಾಜ್ಯದ ಜನರ ಜೀವನೋಪಾಯಕ್ಕೆ #ATMSarkara ಕೊಳ್ಳಿ ಇಟ್ಟಿದೆ. ಒಂದು ಕಡೆ ಜನತೆ ಬೆಲೆ ಏರಿಕೆಯಿಂದ ರೋಸಿ ಹೋಗಿದ್ದರೆ, ಇನ್ನೊಂದೆಡೆ ತರಕಾರಿ ಬೆಲೆ ಕೇಳಿದರೆ ಗ್ರಾಹಕರು ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ. ಮುಂಗಾರು ಕೈಕೊಟ್ಟ ಪರಿಣಾಮ ಅನ್ನದಾತನ ಕೈಗೆ ತರಕಾರಿ ಬೆಳೆ ಸಿಗದೆ ಕೈ ಕಟ್ಟಿ ಕೂತಿದ್ದಾನೆ. ಸಿದ್ದರಾಮಯ್ಯ ಸರ್ಕಾರ ಕ್ರಮಕೈಗೊಳ್ಳದೆ ನಿದ್ದೆಗೆ ಜಾರಿದ ಪರಿಣಾಮ, ಸಾರ್ವಜನಿಕರ ಜೀವನ ಅಯೋಮಯವಾಗಿದೆ’ ಎಂದು ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸೋತಿದ್ದೇನೆ.. ಇನ್ನೂ ಸತ್ತಿಲ್ಲ: ಪ್ರದೀಪ್ ಈಶ್ವರ್‌ಗೆ ಡಾ.ಕೆ.ಸುಧಾಕರ್ ಸವಾಲು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News