ವಿಧಾನ ಸಭೆ ಚುನಾವಣೆ ಅಖಾಡ ಬಾರಿ ಜೋರಾಗಿ ಇದೆ. ಈ ಹಿನ್ನಲೆ ಪ್ರಚಾರವೂ ಜೋರು ನಡೆಯುತ್ತಿದೆ. ಈಗಾಗಲೇ ಎಲ್ಲಾ ಪಕ್ಷದ ನಾಯಕರು ಪ್ರಚಾರದ ಬ್ಯೂಸಿಯಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾ ತಾರೆಯರು ರಾಜ್ಯ ನಾಯಕರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನಲೆ ನಟ ಕಿಚ್ಚ ಸುದೀಪ್, ದರ್ಶನ್ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಸ್ಟಾರ್ಸ್ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ..
ಟಿಕೆಟ್ ಆಕಾಂಕ್ಷಿಗಳಲ್ಲೇ ರುದ್ರೇಶ್ ಹೆಚ್ಚು ಪ್ರಬಲವಾಗಿ ಗುರುತಿಸಿಕೊಂಡಿದ್ದರು, ಬಳಿಕ ಬಂಡಾಯ ಬಾವುಟ ಹಾರಿಸಿದ್ದರು. ಸೋಮಣ್ಣ ವಿರುದ್ದ ಸಾಲುಸಾಲು ಆರೋಪ ಮಾಡಿದ್ದರಿಂದ ಗರಂಗೊಂಡ ಅರುಣ್ ಸೋಮಣ್ಣ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ದೂರಿದ್ದರು. ರುದ್ರೇಶ್ಗೆ ಬಿಎಸ್ವೈ ಫೋನಾಯಿಸಿ ಪಕ್ಷ ಸಂಘಟನೆಗೆ ಒಡಕು ಮೂಡಿಸಬಾರದು, ಅಭ್ಯರ್ಥಿ ವಿರುದ್ಧ ಮಾತನಾಡಬಾರದು ಎಂದು ಬುದ್ಧಿ ಹೇಳಿದ್ದಾರೆ ಎನ್ನಲಾಗಿದೆ.
15ನೆ ವಿಧಾನ ಮಂಡಲ ಕೊನೆಯ ಅಧಿವೇಶನದ ಬಜೆಟ್ ಉತ್ತರ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರೋಧ ಪಕ್ಷ (ಕಾಂಗ್ರೆಸ್ ) ವಿರುದ್ಧ ಗುಡುಗಿದ್ದು, ತಕ್ಕ ಉತ್ತರವಿಲ್ಲದೆ ಕಾಂಗ್ರೆಸ್ ಸಿಲಿಕಿದ ಪ್ರಸಂಗ ಇಂದು ನಡೆಯಿತು.
ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಎಸ್ ಸಿ, ಎಸ್ ಟಿ ಮೀಸಲಾತಿ ವಿಧೇಯಕಯನ್ನು ಅಂಗೀಕರಿಸಿದೆ.ರಾಜ್ಯ ಸರ್ಕಾರ ಪ್ರಸ್ತಾಪಿಸಿದ ವಿಧೇಯಕಕ್ಕೆ ಸದನವು ಸಂಪೂರ್ಣ ಬೆಂಬಲ ನೀಡಿದೆ.
ಚಳಿಗಾಲ ಅಧಿವೇಶನದ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಜಾನುವಾರಿನ ಗಂಟು ರೋಗ ವಿಚಾರವಾಗಿ ಪಶು ಸಂಗೋಪನೆ ಇಲಾಖೆ ಕಾರ್ಯನಿರ್ವಾಹಣೆ ಬಗ್ಗೆ ಪ್ರಶ್ನೆ ಮಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪಶು ಸಂಗೋಪನ ಸಚಿವರನ್ನ ಇಕ್ಕಟಿಕೆ ಸಿಲುಕಿಸಿದರು.
10 ದಿನ ನಡೆದ ಮಳೆಗಾಲದ ಅಧಿವೇಶನಕ್ಕೆ ತೆರೆ ಬಿದ್ದಿದೆ. ಭ್ರಷ್ಟಾಚಾರದ ಸದ್ದುಗದ್ದಲದ ನಡುವೆ ಅಧಿವೇಶನ ಅಂತ್ಯವಾಗಿದೆ. ಬಿಎಂಎಸ್ ಟ್ರಸ್ಟ್ ಪರಭಾರೆ ತನಿಖೆಗೆ ದಳಪತಿಗಳು ಪಟ್ಟು ಹಿಡಿದಿದ್ರು. ಪ್ರತಿಭಟನೆ ಮೂಲಕ ಸದನದಲ್ಲಿ ಕೊನೆ ದಿನದ ಹೋರಾಟ ಮಾಡಲಾಯಿತು. ಜೆಡಿಎಸ್ ಪ್ರತಿಭಟನೆ ಹಿನ್ನೆಲೆ ಅನಿರ್ಧಿಷ್ಟವಾಧಿಗೆ ಕಲಾಪ ಮುಂದೂಡಿಕೆಯಾಗಿದೆ.
PSI Scam: ನಾನು ಇವತ್ತು ಬೆಳಗ್ಗೆ ಫ್ರೀಡಂ ಪಾರ್ಕ್ ಗೆ ಹೋಗಿದ್ದೆ. FDA, SDA ಇಂಜಿನಿಯರ್ಸ್, ಪೊಲೀಸ್ ಕಾನ್ ಸ್ಟೇಬಲ್, KPTCL ಮತ್ತು ಪಿಎಸ್ಐ ಪರೀಕ್ಷೆ ಬರೆದು ಸೆಲೆಕ್ಟ್ ಆಗಿದ್ದವರು ಇದ್ರು. ಅವರು ಹೇಳಿದ್ರು ನಮಗೆ ಲಂಚ ಕೊಟ್ಟು ಉದ್ಯೋಗ ತೆಗೆದುಕೊಳ್ಳಲು ಆಗಲ್ಲ. ನಮ್ಮ ತಂದೆ ತಾಯಿಗಳು ಅವರು ಬೆಳೆದಿರುವ ಧವಸ ಧಾನ್ಯಗಳು ಕೊಟ್ಟು ಕಳುಹಿಸಿದ್ದಾರೆ.ಅವರಿಗೆ ಕೊಟ್ಟು ಬಿಡಿ ಎಂದು ಹೇಳಿದ್ರು.
ವಿಧಾನಸಭೆ ಕಲಾಪದ ಚರ್ಚೆಯಲ್ಲಿ ಭಾಗವಹಿಸಿದ ಸಚಿವ ಗೋವಿಂದ್ ಕಾರಜೋಳ ಅವರು ಸಮಾಜದಲ್ಲಿ ನೋವನ್ನು ಅನುಭವಿಸಿ ಬದುಕುತ್ತಿರುವವರನ್ನು ಮೇಲೆತ್ತಲು ಪ್ರಯತ್ನ ಮಾಡಿದವರಲ್ಲಿ ಬ್ರಾಹ್ಮಣರು ಮೊದಲಿಗರು.ಈ ವಿಚಾರವನ್ನು ನಾವು ಒಪ್ಪಲೇ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಿಧಾನಸೌಧದ ಮೂರನೆ ಮಹಡಿಯಲ್ಲಿ ಮಂತ್ರಿಯೊಬ್ಬರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೇ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಂದಿನಿಂದ (ಫೆ.14) ಫೆ. 25ರವರೆಗೆ ಜಂಟಿ ಅಧಿವೇಶನ (Karnataka Assembly Joint session) ನಡೆಯಲಿದೆ. 10 ದಿನಗಳ ಕಾಲ ನಡೆಯುವ ಕಲಾಪವು ಹಲವು ಸದ್ದು-ಗದಲಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಸರ್ಕಾರದ ಇಮೇಜ್ ಡ್ಯಾಮೇಜ್ ಮಾಡೋಕೆ ಪ್ರತಿಪಕ್ಷಗಳು ರೆಡಿಯಾಗಿವೆ.
ದಿ. ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಕೆಂದ್ರ ಸರ್ಕಾರಕ್ಕೆ ಶಿಫಾರಸು ಮಾಡ್ತೇವೆ ಎಂದು ವಿಧಾನಸಭೆಯಲ್ಲಿ ಸಂತಾಪ ಸೂಚನೆ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಅದನ್ನು ಸರಿದಾರಿಗೆ ತರಬೇಕು. ಮುಮ್ನ್ದಿನ ನಾಲ್ಕೈದು ತಿಂಗಳುಗಳಲ್ಲಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ಇದಕ್ಕಾಗಿ ಎಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿಶ್ವಾಸ ಮತಯಾಚನೆಗೂ ಮೊದಲೇ ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು 14 ಬಂಡಾಯ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಅನರ್ಹಗೊಳಿಸಿದ್ದಾರೆ.ಈ ಅನರ್ಹತೆಯೊಂದಿಗೆ, 224 ಸದಸ್ಯರನ್ನು ಒಳಗೊಂಡಿರುವ ವಿಧಾನಸಭೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.