ಐಪಿಎಲ್ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದ್ದು, ಇದೀಗ ಈ ಪಟ್ಟಿಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೆಸರೂ ಸೇರ್ಪಡೆಯಾಗಿದೆ. ಶೀಘ್ರದಲ್ಲೇ ಒಂದು ವರ್ಷದಲ್ಲಿ ಎರಡು ಐಪಿಎಲ್ಗಳನ್ನು ನೋಡಲಾಗುವುದು ಮತ್ತು ಅದು ಖಚಿತ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ 18 ಆಟಗಾರರ ತಂಡವನ್ನು ಭಾರತ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು, ಈ ತಂಡದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಅವರ ಹೆಸರೂ ಸೇರಿದೆ. ವೆಂಕಟೇಶ್ ಅಯ್ಯರ್ ಐಪಿಎಲ್ 2022ರಲ್ಲಿ ಸಂಪೂರ್ಣ ವಿಫಲರಾಗಿದ್ದರು.
ಆರ್ಸಿಬಿ 15 ವರ್ಷಗಳ ನಂತರವೂ ಮೊದಲ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಆರ್ಸಿಬಿ ವಿರುದ್ಧ ಜೋಸ್ ಬಟ್ಲರ್ ಭರ್ಜರಿ ಶತಕ ಸಿಡಿಸಿದ್ದರು. ಆದರೆ ಈ ಪಂದ್ಯದಲ್ಲಿ ಬಟ್ಲರ್ ಕೂಡ ಅಮೋಘ ಜೀವದಾನ ಪಡೆದರು.
Viral Video - ಭಾರತದ ಅನುಭವಿ ಮತ್ತು ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಬಾರಿ ಐಪಿಎಲ್ ಪ್ಲೇ ಆಫ್ ನಿಂದ ಪಂಜಾಬ್ ಕಿಂಗ್ಸ್ ಹೊರಬಿದ್ದಿದೆ ಮತ್ತು ಇದೇ ಕಾರಣದಿಂದ ಸಾಕಷ್ಟು ಸಿಡಿಮಿಡಿಗೊಂಡಿರುವ ಧವನ್ ತಂದೆ, ಧವನ್ ಗೆ ಸಾಕಷ್ಟು ಒದೆತ ನೀಡಿದ್ದಾರೆ. ಈ ವಿಡಿಯೋದಲ್ಲಿ ಶಿಖರ್ ಧವನ್ ಸಾಕಷ್ಟು ಅಸಹಾಯಕರಂತೆ ಕಾಣಿಸಿಕೊಂಡಿದ್ದಾರೆ.
"ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಮುಂದಿನ ವರ್ಷ ಆರ್ಸಿಬಿ ತಂಡಕ್ಕೆ ಖಂಡಿತವಾಗಿಯೂ ಮರಳುತ್ತೇನೆ" ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ ಎಬಿ ಡಿವಿಲಿಯರ್ಸ್ ಸ್ಪಷ್ಟನೆ ನೀಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಗುರುತಿಸಿಕೊಂಡಿದ್ದ ಎಬಿಡಿ ಕಳೆದ ವರ್ಷ ಎಲ್ಲಾ ಪ್ರಕಾರದ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಆರ್ಸಿಬಿಗೆ ಹಿಂತಿರುಗುವುದಾಗಿ ಹೇಳಿಕೆ ನೀಡಿದ್ದು, ಅಭಿಮಾನಿಗಳ ಸಂತಸಕ್ಕೆ ಪಾರವೇ ಇಲ್ಲ ಎಂಬಂತಾಗಿದೆ.
ಈ ಬಾರಿ RCB IPL ಕಪ್ ಜಯಿಸಲಿದೆ ಎಂದು ರಾಯಚೂರು ನಗರದ ಕಿಲ್ಲೇರಮಠದ 1,008 ಶ್ರೀಶ್ರೀ ಶಾಂತಮಲ್ಲ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.. RCB ಸೋತಾಗ ಮತ್ತು ಗೆದ್ದಾಗಲೂ ಪ್ರೋತ್ಸಾಹಿಸಿದ್ದೀರಿ...
ಕಳೆದ 14 ಸೀಸನ್ಗಳಿಂದ ಉತ್ತಮ ಲಯದಲ್ಲಿದ್ದ ತಂಡ 15ನೇ ಆವೃತ್ತಿಯಲ್ಲಿ ಹೀಗೆ ಮಕಾಡೆ ಮಲಗಲು ಕಾರಣವೇನು ಅಂತ ಹುಡುಕಿದ್ರೆ, ಸಿಗೋದು ಆತಂರಿಕ ಕಲಹ. ಹೌದು, ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಕೆಲ ಆಟಗಾರರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿದ್ದು, ಸಾಂಘಿಕ ಪ್ರದರ್ಶನದ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ ಎನ್ನಲಾಗಿದೆ. ಇನ್ನು ರೋಹಿತ್, ಪೋಲಾರ್ಡ್ ಮೇಲೆ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿದ ಒತ್ತಡ ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ.
ಈ ಬಾರಿಯ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಇಂದಿನ ಪಂದ್ಯದಲ್ಲಿ ಯಾವ ರೀತಿ ಪ್ರದರ್ಶನ ನೀಡಿಲಿದೆ ಎಂಬುದನ್ನು ಕಾದುನೋಡಬೇಕಿದೆ.
ಸದ್ಯ ಗುಜರಾತ್ ಟೈಟಾನ್ಸ್ ತಂಡ ಮೊದಲ ಬಾರಿಗೆ ಟೂರ್ನಿ ಪ್ರವೇಶಿಸಿದ್ದರೂ ಸಹ ಅದ್ಭುತ ಪ್ರದರ್ಶನ ನೀಡುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆಲುವು ಸಾಧಿಸಿದ್ದು, ಎರಡಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.
ಸದ್ಯ ಎಲ್ಲೆಲ್ಲೂ ಐಪಿಎಲ್ ಹವಾ ಜೋರಾಗಿದೆ. ಅದರಲ್ಲೂ ಇಂದು ಕರ್ನಾಟಕದ ಆರ್ಸಿಬಿ ತಂಡದ ಮ್ಯಾಚ್ ಇದೆ. ಇದೇ ಕಾರಣಕ್ಕಾಗಿ ಕಿಂಗ್ ಕೊಹ್ಲಿ ಅಭಿಮಾನಿಗಳಿಗೆ ನಿರ್ದೇಶಕ ಸಿಂಪಲ್ ಸುನಿ ಹೊಸ ಆಫರ್ ಘೋಷಿಸಿದ್ದಾರೆ.
IPL 2022: ಕೊರೊನಾ ಕಂಟಕದ ನಡುವೆ 2022ರ IPL ಮ್ಯಾಚ್ಗಳು ಮಹಾರಾಷ್ಟ್ರದ ವಿವಿಧ ಸ್ಟೇಡಿಯಂಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ. ಲೀಗ್ ಪಂದ್ಯಗಳು ಮೇ 22ರಂದು ಮುಕ್ತಾಯಗೊಳ್ಳುತ್ತವೆ. ನಂತರ ಒಂದು ದಿನ ವಿಶ್ರಾಂತಿ ನಂತರ ಮೇ 24ರಿಂದ ಪ್ಲೇ ಆಫ್ ಮ್ಯಾಚ್ಗಳು ಪ್ರಾರಂಭವಾಗುತ್ತವೆ.
ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ತಂಡವು ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎಂಟರಲ್ಲಿ ಗೆಲುವು ಸಾಧಿಸಿದ್ದು, ಒಂದರಲ್ಲಿ ಸೋಲನ್ನಭವಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಟೂರ್ನಿಗೆ ಮೊದಲ ಬಾರಿ ಎಂಟ್ರಿ ಕೊಟ್ಟಿರುವ ಗುಜರಾತ್ ಅದ್ಭುತ ಪ್ರದರ್ಶನ ನೀಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.