ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಅನುಮತಿ ನೀಡಬೇಕಾಗಿದ್ದು, ಕಳೆದ ವಾರ ಅದು ಔಷಧ ತಯಾರಿಕಾ ಸಂಸ್ಥೆ ಸೆರಂ ಇನ್ಸ್ಟಿಟ್ಯೂಟ್ ನಿಂದ ಕೆಲವು ದತ್ತಾಂಶಗಳನ್ನು ಕೇಳಿತ್ತು. ಭಾರತದ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಕೇಳಿದ್ದ ದತ್ತಾಂಶಗಳನ್ನು ಸೆರಂ ಇನ್ಸ್ಟಿಟ್ಯೂಟ್ ನೀಡಿದೆ. ಆದುದರಿಂದ ಈಗ ಲಸಿಕೆ ತುರ್ತು ಬಳಕೆಗೆ ಮುಂದಿನ ವಾರವೇ ಅನುಮತಿ ಸಿಗಲಿದೆ ಎಂದು ಹೇಳಲಾಗುತ್ತಿದೆ.
Night Curfew: ದೇಶದಲ್ಲಿ ಕರೋನಾದ ಹಾನಿಯ ಮಧ್ಯೆ ಕ್ರಿಸ್ಮಸ್ ಮತ್ತು ಹೊಸ ವರ್ಷದ (New Year 2021) ದೃಷ್ಟಿಯಿಂದ ಅನೇಕ ರಾಜ್ಯಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಈವೆಂಟ್ನಲ್ಲಿ ಆಟಗಾರರ ಸಂಖ್ಯೆ 150 ಕ್ಕಿಂತ ಹೆಚ್ಚಿರಬಾರದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ ಇದರಲ್ಲಿ ಭಾಗವಹಿಸುವವರಿಗೆ COVID-19 ನೆಗೆಟಿವ್ ರಿಪೋರ್ಟ್ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಬ್ರಿಟನ್ನಲ್ಲಿ ಕಂಡುಬಂದಿರುವ ಕೊರೊನಾವೈರಸ್ನ ನೂತನ ಪ್ರಭೇದವು ಭಾರತದಲ್ಲಿ ಹರಡುವುದನ್ನು ತಡೆಯಲು ಮಂಗಳವಾರ ಕೇಂದ್ರ ಸರ್ಕಾರವು ಹೊಸದಾಗಿ ಕಾರ್ಯಾಚರಣಾ ವಿಧಾನಗಳನ್ನು (SOP) ರೂಪಿಸಿದೆ.
ಕೋವಿಡ್ ಸಂದರ್ಭದಲ್ಲಿ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮತ್ತು ಭವಿಷ್ಯದಲ್ಲಿ ಯುವ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಲು ಪ್ರೋತ್ಸಾಹಿಸಲು ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ & ದಂತ ಆರೋಗ್ಯಾಧಿಕಾರಿಗಳಿಗೆ 2020ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.
ಕೆಲವು ಆರೋಗ್ಯ ತಜ್ಞರು ಹೇಳುವ ಪ್ರಕಾರ ಬ್ರಿಟನ್ ನಲ್ಲಿ ಹರಡಲು ಆರಂಭಿಸಿರುವ ಹೊಸ ಬಗೆಯ ಕೋವಿಡ್ ವೈರಾಣು ಹೆಚ್ಚು ಮಾರಕವಾಗಿದೆ ಅಥವಾ ಸಂಭಾವ್ಯ ಲಸಿಕೆಗಳಿಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ.
ಅಕ್ಟೋಬರ್ 2020 ರಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸಚಿನ್ ತೆಂಡೂಲ್ಕರ್ ಅವರ ಸ್ನೇಹಿತ ಅವಿ ಕದಮ್ ಸಹ ನಿಧನರಾದರು. ಈಗ ಈ ಕಾಯಿಲೆಯಿಂದಾಗಿ ಮಾಸ್ಟರ್ ಬ್ಲಾಸ್ಟರ್ ಅವರ ಸ್ನೇಹಿತರೊಬ್ಬರು ಕೂಡ ಅಗಲಿದ್ದಾರೆ.
ದುಬಾರಿ ಶುಲ್ಕ ಪಾವತಿ ಸವಾಲನ್ನು ಪೋಷಕರು ಮತ್ತು ಖಾಸಗಿ ಶಾಲಾ ವ್ಯವಸ್ಥಾಪಕ ಮಂಡಳಿಯವರು ಕುಳಿತು ಚರ್ಚೆ ಮಾಡಬೇಕು. ಇಬ್ಬರೂ ಆರೋಗ್ಯಕರ ಸಹಕಾರ ನೀಡಬೇಕು ಎಂದು ಮನವಿ ಮಾಡಿ ನಯವಾಗಿ ಜವಾಬ್ದಾರಿಯಿಂದ ಜಾರಿಕೊಂಡಿರುವ ಸುರೇಶ್ ಕುಮಾರ್.
"ಮುಂದಿನ ಜನವರಿ ತಿಂಗಳ ಯಾವುದೇ ವಾರದಲ್ಲಿ ಲಸಿಕೆ ಸಿಗುವಂತಾಗಬಹುದೆಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ. ಜನವರಿಯಲ್ಲಿ ಭಾರತದ ಜನರು ತಮ್ಮ ಮೊದಲ ಕೊರೋನಾ ಲಸಿಕೆಯನ್ನು ಪಡೆಯಬಹುದು" ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕರೋನಾವೈರಸ್ನ ಈ ಹೊಸ ರೂಪಾಂತರದ ಬಗ್ಗೆ ಚರ್ಚಿಸಲು ಭಾರತೀಯ ಆರೋಗ್ಯ ಸಚಿವಾಲಯವು ಜಂಟಿ ಮಾನಿಟರಿಂಗ್ ಗ್ರೂಪ್ನೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಅದನ್ನು ಎದುರಿಸುವ ಕಾರ್ಯತಂತ್ರ ರೂಪಿಸುವ ಬಗ್ಗೆ ಕೂಲಂಕುಷವಾಗಿ ಸಮಾಲೋಚನೆ ನಡೆಸಿತು. ಹೊಸ ಅವತಾರದಿಂದಾಗಿ ಬ್ರಿಟನ್ನಲ್ಲಿನ ಕರೋನಾ ಪ್ರಕರಣಗಳು ಮತ್ತೆ ತಾರಕಕ್ಕೇರಿದೆ.
ಖಾಯಿಲೆ ಬರುವುದಕ್ಕಿಂತ ಮುನ್ನ ಅದನ್ನೂ ಬಾರದೇ ಇರುವಂತೆ ನೋಡಿಕೊಳ್ಳವುದು ನಮ್ಮ ಅದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ನಾವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕನಿಷ್ಠ ಆರು ತಿಂಗಳಕಾಲ ಅಭ್ಯಾಸ ಮಾಡಿಕೊಳ್ಳಬೇಕಾಗಿದೆ
ವಿಶ್ವಾದ್ಯಂತ ಕರೋನದ ಹೊಸ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಏತನ್ಮಧ್ಯೆ ಭಾರತದ ಕರೋನಾ ಪ್ರಕರಣಗಳ ಸಂಖ್ಯೆ 1 ಕೋಟಿ ದಾಟಿದೆ. ಆದರೆ ಇದರೊಂದಿಗೆ ಚೇತರಿಸಿಕೆಯ ಪ್ರಮಾಣವೂ ಹೆಚ್ಚಾಗಿದೆ ಎಂಬುದು ನೆಮ್ಮದಿಯ ಸುದ್ದಿ.
ಶಾಲೆಗಳನ್ನು ಆರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯ ಸಲಹೆ ಮೇರೆಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಪತ್ರ ಬರೆದಿದ್ದು ಆರೋಗ್ಯ ಇಲಾಖೆ ವತಿಯಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಕರೋನಾವೈರಸ್ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಹಲವರಲ್ಲಿ 'ಪಾರ್ಶ್ವವಾಯು' ಸಮಸ್ಯೆಗಳು ಕಂಡುಬಂದಿವೆ. ಕರೋನಾ ಬಳಿಕ ಪಾರ್ಶ್ವವಾಯು ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತವೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಡಿಸೆಂಬರ್ 5 ರಂದು ಕರೋನಾವೈರಸ್ ಸೋಂಕಿಗೆ ತುತ್ತಾದ ನಂತರ ಹರಿಯಾಣದ ಆರೋಗ್ಯ ಸಚಿವರಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು PGIMS ರೋಹ್ಟಕ್ಗೆ ದಾಖಲಿಸಲಾಯಿತು.
375 ಜನರ ಪೈಕಿ ಕೋವ್ಯಾಕ್ಸಿನ್ ಲಸಿಕೆ ತೆಗೆದುಕೊಂಡ ಬಳಿಕ ಕೆಲವರು ಇಂಜೆಕ್ಷನ್ ತೆಗೆದುಕೊಂಡ ಜಾಗದಲ್ಲಿ ಸ್ವಲ್ಪ ನೋವು ಉಂಟಾಯಿತು. ಸ್ವಲ್ಪ ಸಮಯದ ನಂತರ ಗುಣವಾಯಿತು. ಲಸಿಕೆಯನ್ನು 2 ರಿಂದ 8 ° Cಗೆ ಸಂಗ್ರಹಿಸಲಾಗಿದೆ ಮತ್ತು ಲಸಿಕೆಯ ಗುಣಮಟ್ಟ ಹಾಗೇ ಉಳಿದಿದೆ.
ಸಚಿವ ಪ್ರಹ್ಲಾದ್ ಜೋಶಿ ಪ್ರಕಾರ, ಕರೋನವೈರಸ್ ಹರಡುವುದನ್ನು ತಡೆಯಲು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಗುತ್ತಿದೆ. ಒಂದೇ ಸಲಕ್ಕೆ ಜನವರಿಯಲ್ಲಿ ಬಜೆಟ್ ಅಧಿವೇಶನವನ್ನು ನಡೆಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.