ಮಹಾರಾಷ್ಟ್ರದಲ್ಲಿ ಕರೋನಾ ಪಾಸಿಟಿವ್ ರೋಗಿಗಳ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಸರ್ಕಾರ ಲಾಕ್ಡೌನ್ ಅವಧಿಯನ್ನು ಡಿಸೆಂಬರ್ 31 ಮಧ್ಯರಾತ್ರಿಯವರೆಗೆ ವಿಸ್ತರಿಸಿದೆ.
ಕರೋನಾದಿಂದ ಸಾರ್ವಜನಿಕರನ್ನು ರಕ್ಷಿಸಲು ಮೋದಿ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಕರೋನಾ ಲಸಿಕೆ ಹಾಕುವ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬಹುದು. ಈ ನಿಟ್ಟಿನಲ್ಲಿ ಸರ್ಕಾರ ಒಂದು ಯೋಜನೆಯನ್ನು ಸಿದ್ಧಪಡಿಸಿದೆ ಮತ್ತು ಅದನ್ನು ಶೀಘ್ರದಲ್ಲೇ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
ಚೀನಾದಲ್ಲಿ ಮತ್ತೆ ಕರೋನಾ ಸೋಂಕು ವೇಗವಾಗಿ ಹೆಚ್ಚಾಗುವ ಸಾಧ್ಯತೆ ಇದ್ದು ಇದಕ್ಕಾಗಿಯೇ ಬೀಜಿಂಗ್ನ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಕ್ಸಿನ್ಫಾಡಿಯಲ್ಲಿ ಶೀತ-ಸರಪಳಿ ಮತ್ತು ಜಲ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹವನ್ನು ಸರ್ಕಾರ ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಈ ಮಾರುಕಟ್ಟೆಯಿಂದ ಕರೋನಾವೈರಸ್ ಪ್ರಪಂಚದಾದ್ಯಂತ ಹರಡಿತು ಎಂದು ನಂಬಲಾಗಿದೆ.
ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು 8 ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ಸಭೆ ನಡೆದಿದೆ. ಈ ಸಭೆಯ ನಂತರ, ರಾಜ್ಯಗಳು Coronavirus Vaccination Plan ಸಿದ್ಧತೆಗಳನ್ನು ಪ್ರಾರಂಭಿಸಿವೆ.
71 ವರ್ಷದ ಅಹ್ಮದ್ ಪಟೇಲ್ ಕಳೆದ ತಿಂಗಳು ಕರೋನಾವೈರಸ್ ಪಾಸಿಟಿವ್ ಆದ ಬಳಿಕ ಚಿಕಿತ್ಸೆಗೆ ಒಳಗಾಗಿದ್ದರು. ಅಕ್ಟೋಬರ್ 1 ರಂದು ಮಾಡಿದ ಟ್ವೀಟ್ನಲ್ಲಿ ತನ್ನೊಂದಿಗೆ ಸಂಪರ್ಕಕ್ಕೆ ಬಂದವರನ್ನು ಸ್ವಯಂ ಪ್ರತ್ಯೇಕಿಸಲು ವಿನಂತಿಸಿದ್ದರು.
ಕೋವಿಡ್ ಲಸಿಕೆ ವಿತರಣೆಗೆ ರಾಜ್ಯಗಳು ಯಾವ ರೀತಿಯ ವ್ಯವಸ್ಥೆ ಮತ್ತು ತಯಾರಿ ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಿ. ಲಸಿಕೆ ವಿತರಣೆ ಬಗ್ಗೆ ದೇಶಾದ್ಯಂತ ಸಾಮಾನ್ಯವಾದ ವ್ಯವಸ್ಥೆಯೊಂದನ್ನು ಮಾಡಿಕೊಳ್ಳೋಣ.
ಮಹಾರಾಷ್ಟ್ರದಲ್ಲಿ ಕರೋನಾದ ಹೆಚ್ಚುತ್ತಿರುವ ವೇಗ ಎಲ್ಲರನ್ನೂ ಚಿಂತೆಗೀಡು ಮಾಡಿದ್ದು ರಾಜ್ಯದಲ್ಲಿ ಲಾಕ್ಡೌನ್ 2.0 ಅನ್ನು ವಿಧಿಸಬಹುದು ಎಂಬ ಮಾತು ಕೇಳಿಬರುತ್ತಿದೆ. ಈ ಮಧ್ಯೆ ಜನರ ನಿರ್ಲಕ್ಷ್ಯದ ಬಗ್ಗೆ ಉಪಮುಖ್ಯಮಂತ್ರಿ ಅಜಿತ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಬಹಳ ಪ್ರಮುಖವಾಗಿ ರಾಜ್ಯ ಸರ್ಕಾರಕ್ಕೆ ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿಯು ನೀಡಿದ್ದ 'ಡಿಸೆಂಬರ್ ತಿಂಗಳಲ್ಲಿ ಶಾಲೆಗಳನ್ನು (Schools) ತೆರೆಯುವುದು ಕೂಡ ಸೂಕ್ತವಲ್ಲ" ಎಂಬ ಶಿಫಾರಸ್ಸಿನ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ನವೆಂಬರ್ 22ರಂದು ಕೋವಿಡ್ 19 ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು ಸಭೆಯಲ್ಲಿ ಶಾಲೆಗಳನ್ನು (Schools) ಪುನರಾರಂಭಿಸುವ ಕುರಿತು ಗಂಭೀರವಾದ ಚರ್ಚೆಯಾಗಿದೆ.
ಭಾರತದಲ್ಲಿ ಕರೋನಾ ಸೋಂಕು ಮತ್ತೆ ತನ್ನ ಕಾಲುಗಳನ್ನು ಚಾಚಲು ಪ್ರಾರಂಭಿಸಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ನಾವು ಕರೋನಾ ಲಸಿಕೆಯ ವಿಷಯದಲ್ಲಿ ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ಮುಂದುವರೆಯುತ್ತಿದ್ದೇವೆ.
ಸಾಮಾನ್ಯವಾಗಿ ಜನರು ಮೂರು ರೀತಿಯ ಮಾಸ್ಕ್ಗಳನ್ನು ಬಳಸುತ್ತಾರೆ. ಮೊದಲನೆಯದು ಶಸ್ತ್ರಚಿಕಿತ್ಸೆಯ ಅಂದರೆ ಸರ್ಜಿಕಲ್ ಮಾಸ್ಕ್ಗಳು, ಈ ನೀಲಿ ಬಣ್ಣದ ಮಾಸ್ಕ್ಗಳನ್ನು 2 ರಿಂದ 10 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಒಮ್ಮೆ ಬಳಸಿದ ನಂತರ ಜನರು ಅದನ್ನು ಎಸೆಯುತ್ತಾರೆ. ಇದರಿಂದ ಜನರು ಸೋಂಕಿಗೆ ಒಳಗಾಗುವುದಿಲ್ಲ ಎಂದು ಭಾವಿಸುತ್ತಾರೆ.
ದೇಶದಲ್ಲಿ ಕೊರೊನಾವೈರಸ್ ವೇಗ ನಿಧಾನವಾಗಿದ್ದರೂ, ರಾಜಧಾನಿ ದೆಹಲಿಯಲ್ಲಿ ಈ ವೇಗವು ನಿಯಂತ್ರಿಸಲಾಗದಂತಾಗಿದೆ. ಶುಕ್ರವಾರ ದೆಹಲಿಯ ಅಂಕಿ ಅಂಶಗಳ ಭರಾಟೆ ಮತ್ತೆ ಕಂಡುಬಂದಿತು. ದೆಹಲಿಯಲ್ಲಿ ಶುಕ್ರವಾರ 6 ಸಾವಿರದ 608 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ದೆಹಲಿಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಈಗ 5 ಲಕ್ಷ 17 ಸಾವಿರ 238ಕ್ಕೆ ಏರಿದೆ.
ಆರೋಗ್ಯ ಸೇತು ಆ್ಯಪ್ 'ಬ್ಯಾಕೆಂಡ್ ಕೋಡ್' ಅನ್ನು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ, ಇದು ಕೋವಿಡ್ -19 ಸೋಂಕುಗಳ ಪತ್ತೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್ನ ಕಾರ್ಯಾಚರಣೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳ ಬಗ್ಗೆ ತಿಳಿಯಲು ಜನರಿಗೆ ಸಹಾಯ ಮಾಡುತ್ತದೆ.
ಹೆಚ್ಚುತ್ತಿರುವ ಕರೋನಾವೈರಸ್ ಪ್ರಕರಣಗಳಿಂದಾಗಿ ಅಹಮದಾಬಾದ್ನಲ್ಲಿ ಕರ್ಫ್ಯೂ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆವರೆಗೆ ಇಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಶುಕ್ರವಾರದಿಂದ ಕರ್ಫ್ಯೂ ಜಾರಿಗೆ ಬರಲಿರುವ ರಾಗ್ತ್ರಿ ಕರ್ಫ್ಯೂ ಅನಿರ್ದಿಷ್ಟ ಅವಧಿಯವರೆಗೆ ಮುಂದುವರೆಯಲಿದೆ.
ಅಧ್ಯಯನದ ಪ್ರಕಾರ, ಮಕ್ಕಳು ಈ ಮಾರಕ SARS COV-2 ನ ರೋಗನಿರೋಧಕ ಸಾಮರ್ಥ್ಯವನ್ನು ವೈರಸ್ಗೆ ಒಡ್ಡಿಕೊಳ್ಳದೆ ಅಭಿವೃದ್ಧಿಪಡಿಸಬಹುದು, ಇದು ಮಕ್ಕಳ ರೋಗನಿರೋಧಕ ಸಾಮರ್ಥ್ಯವು ಕರೋನಾ ಸೋಂಕಿನಿಂದ ರಕ್ಷಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.