Solar Eclipse 2024: 2024ರ ಏಪ್ರಿಲ್ 8ರಂದು ಚಂದ್ರ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಿಕೊಳ್ಳಲಿದ್ದಾನೆ. ಈ ಮೂಲಕ ಇದರ ನೆರಳು ಭೂಮಿಯ ಮೇಲೆ ಬೀಳಲಿದ್ದು, ಹಲವು ಅಪರೂಪದ ಘಟನೆಗಳು ಸಂಭವಿಸಲಿವೆ
Mustard Oil Production: ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳು ಇದರ ಸದಸ್ಯರಾಗಿವೆ.
Foreign Minister S Jaishankar: ಮಂಗಳವಾರ, ಸೆಪ್ಟೆಂಬರ್. 26, 2023 ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 78ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭಯೋತ್ಪಾದನೆ ಕುರಿತ ಕೆನಡಾದ ಸೋಮಾರಿತನದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಭಾರತೀಯ ಟೀಕಾಕಾರರು ಭಾವಿಸಿರುವ ಮಟ್ಟಿಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರು ಜಾಗತಿಕವಾಗಿ ಏಕಾಂಗಿಯಾಗಿಲ್ಲ. ಬಲ್ಲ ಮೂಲಗಳ ಪ್ರಕಾರ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್ಗಳ ಪಾತ್ರವಿದೆ ಎಂಬ ಕುರಿತು ಒಂದಷ್ಟು ಮಾಹಿತಿಗಳನ್ನು ಕೆನಡಾಗೆ ಒದಗಿಸಿದ್ದೇ ಅಮೆರಿಕಾ ಎನ್ನಲಾಗಿದೆ.
India Canada dispute: ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ 'ಸಂಭವನೀಯ' ಭಾಗಿತ್ವವನ್ನು ಟ್ರೂಡೊ ಆರೋಪಿಸಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಒಟ್ಟಾವಾ ಮತ್ತು ನವದೆಹಲಿ ನಡುವೆ ಆಯ್ಕೆ ಮಾಡಬೇಕಾದರೆ, ಸಂಬಂಧವು ತುಂಬಾ ಮುಖ್ಯವಾದ ಕಾರಣ ಅದು ಖಂಡಿತವಾಗಿಯೂ ಭಾರತವನ್ನು ಆಯ್ಕೆ ಮಾಡುತ್ತದೆ" ಎಂದು ಮಾಜಿ ಪೆಂಟಗನ್ ಅಧಿಕಾರಿ ಮೈಕೆಲ್ ರೂಬಿನ್, ಹೇಳಿದ್ದಾರೆ.ಜಸ್ಟಿನ್ ಟ್ರುಡೊ ಅವರ ಆರೋಪಗಳು ಭಾರತಕ್ಕಿಂತ ಕೆನಡಾಕ್ಕೆ ಹೆಚ್ಚಿನ ಅಪಾಯಕ್ಕೆ ಕಾರಣವಾಗಿವೆ ಎಂದು ಅವರು ಹೇಳಿದರು.
India-Canada diplomatic row : ಖಲಿಸ್ತಾನಿ ಭಯೋತ್ಪಾದಕನ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ವಿವಾದವಿದೆ ಎಂದು ತಿಳಿದಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ರಾಜತಾಂತ್ರಿಕ ಕಾರ್ಯಗಳಲ್ಲಿ ಕೆನಡಾದ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಸೂಚಿಸಿದೆ.
ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯ ರಾಜತಾಂತ್ರಿಕ ಕಲಹ ತೀವ್ರವಾಗಿ ಉಲ್ಬಣಗೊಂಡಿದ್ದರಿಂದ ಭಾರತದಲ್ಲಿ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಕಡಿಮೆ ಮಾಡಲು ಕೆನಡಾವನ್ನು ಕೇಳಿದೆ. ಭಾರತವು ಕೆನಡಾದಲ್ಲಿ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಗಂಟೆಗಳ ನಂತರ, ಭಾರತಕ್ಕೆ ಪ್ರಯಾಣಿಸಲು ಬಯಸುವ ಸಾವಿರಾರು ಜನರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.
Khalistan movement: ಭಿಂದ್ರನ್ವಾಲೆಯಂಥ ಉಗ್ರರನ್ನು ಪೋಷಿಸುತ್ತಾ, ಅವರಿಗೆ ಆರ್ಥಿಕ ಸಹಾಯವನ್ನು ಸಹ ಕಾಂಗ್ರೆಸ್ ನೀಡುತ್ತಿತ್ತು. ಸಂಜಯ್ ಗಾಂಧಿ ತಂಡದಲ್ಲಿದ್ದ ಕಮಲ್ ನಾಥ್ ಖುದ್ದು ಖಲಿಸ್ಥಾನಿಗಳಿಗೆ ಆರ್ಥಿಕ ಸಂಪನ್ಮೂಲ ಒದಗಿಸಿದ್ದಕ್ಕೆ ಅನೇಕ ಸಾಕ್ಷಿ, ಪುರಾವೆಗಳಿವೆ ಎಂದು ಬಿಜೆಪಿ ಕಿಡಿಕಾರಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಲಹೆಯೊಂದರಲ್ಲಿ ಎಚ್ಚರಿಕೆಯನ್ನು ನೀಡಿದ್ದು,ಕೆನಡಾಕ್ಕೆ ವಾಸಿಸುವ ಅಥವಾ ಪ್ರಯಾಣಿಸುವ ಎಲ್ಲಾ ಭಾರತೀಯ ಪ್ರಜೆಗಳು ಅತ್ಯಂತ ಜಾಗರೂಕರಾಗಿರಲು ಒತ್ತಾಯಿಸಿದೆ.
ಹೆಚ್ಚುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು ಖೈಲ್ಸ್ತಾನ್ ಬೆಂಬಲಿಗರು ತಮ್ಮ ಭೂಮಿಯಲ್ಲಿ ಭಾರತೀಯ ರಾಜತಾಂತ್ರಿಕ ನಿಯೋಗಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ನಿಂದಿಸಿದ ಕೆಲವು ದಿನಗಳ ನಂತರ, ಅಕ್ಟೋಬರ್ನಲ್ಲಿ ಭಾರತಕ್ಕೆ ಯೋಜಿಸಲಾಗಿದ್ದ ವ್ಯಾಪಾರ ಕಾರ್ಯಾಚರಣೆಯನ್ನು ಮುಂದೂಡುವುದಾಗಿ ಕೆನಡಾ ಹೇಳಿದೆ. ಈ ವರ್ಷವೇ ಆರಂಭಿಕ ವ್ಯಾಪಾರ ಒಪ್ಪಂದಕ್ಕೆ ಮುದ್ರೆ ಒತ್ತುವ ಗುರಿಯನ್ನು ಉಭಯ ರಾಷ್ಟ್ರಗಳು ಈ ವರ್ಷದ ಆರಂಭದಲ್ಲಿ ಹೇಳಿದ್ದವು. ಆದಾಗ್ಯೂ, ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಈಗ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ.
Global Liveability Index 2023: ಆಸ್ಟ್ರಿಯಾದ ರಾಜಧಾನಿ ವಿಯೆನ್ನಾ ಗ್ಲೋಬಲ್ ಲಿವಬಿಲಿಟಿ ಇಂಡೆಕ್ಸ್ (GLI) ನಲ್ಲಿ ಮೊದಲ ಸ್ಥಾನದಲ್ಲಿದೆ. ಸತತ 2ನೇ ಬಾರಿಗೆ ಇದು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರ ಎನಿಸಿಕೊಂಡಿದೆ.
ಕೆನಡಾದ ಟೊರೊಂಟೊದಲ್ಲಿ ನಡೆದ ಕಾಳಗದ ವೇಳೆ ವ್ಯಕ್ತಿಯೊಬ್ಬ ತನ್ನ ಸಾಕಿದ ಹೆಬ್ಬಾವನ್ನು ಆಯುಧವಾಗಿ ಬಳಸಿಕೊಂಡು ಮತ್ತೊಬ್ಬರ ಮೇಲೆ ದಾಳಿ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Hindu Temple Vandalised In Canada: ಮಧ್ಯರಾತ್ರಿ 12 ಗಂಟೆ (ಸ್ಥಳೀಯ ಕಾಲಮಾನ) ಸುಮಾರಿಗೆ ಇಬ್ಬರು ಶಂಕಿತರು ಕಟ್ಟಡದ ಗೋಡೆಯನ್ನು ಧ್ವಂಸ ಮಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಗಳ ಮೂಲಕ ಪೊಲೀಸರು ತಿಳಿದುಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ ಹೊರಗೆ ಕಾವಲು ಕಾಯುತ್ತಿರುವುದು ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.
ವೆಂಕಟೇಶ್ ಮತ್ತು ಲಕ್ಷ್ಮಿ ದಂಪತಿ ಬೆಂಗಳೂರಿನವರಾಗಿದ್ದು ಸದ್ಯ ಕೆನಡಾದಲ್ಲಿ ನೆಲೆಸಿದ್ದಾರೆ. ಕಟ್ಟಿಕೊಂಡಿದ್ದ ಹರಕೆಯೊಂದು ಫಲಿಸಿದ ಹಿನ್ನೆಲೆಯಲ್ಲಿ ಗೋವನ್ನು ಮಠಕ್ಕೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸಿದ್ಧ ವ್ಯಾಪಾರ ಸಲಹಾ ಸಂಸ್ಥೆ 'ಆರ್ಎಸ್ಎಂ ಕೆನಡಾ' ಪ್ರಕಾರ, ಕಾರ್ಮಿಕರ ಕೊರತೆಗೆ ಮೂರು ಕಾರಣಗಳಿವೆ. ಕೋವಿಡ್ ಬಿಕ್ಕಟ್ಟಿನ ನಂತರ ಜನರ ಜೀವನ ಆದ್ಯತೆಗಳಲ್ಲಿ ಬದಲಾವಣೆಗಳಾಗಿವೆ. ಇದರಿಂದ ಅನೇಕರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಇನ್ನು ಎರಡನೇ ಕಾರಣ ದೇಶದಲ್ಲಿ ಸಂತಾನೋತ್ಪತ್ತಿ ಪ್ರಮಾಣ. ಇದರ ಜತೆಗೆ ಜನಸಂಖ್ಯೆಯಲ್ಲಿ ವೃದ್ಧರ ಸಂಖ್ಯೆಯೂ ಹೆಚ್ಚುತ್ತಿರುವುದು ಕಾರ್ಮಿಕರ ಕೊರತೆಗೆ ಕಾರಣವಾಗಿದೆ.
NRI News: ಕೆನಡಾದಲ್ಲಿರುವ ಭಗವದ್ಗೀತಾ ಪಾರ್ಕ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಸರ್ಕಾರ ಹೇಳಿಕೆ ನೀಡಿದೆ. ಕೆನಡಾ ಸರ್ಕಾರಿ ಅಧಿಕಾರಿಗಳ ಪ್ರಕಾರ ಉದ್ಯಾನವನವನ್ನು ಧ್ವಂಸಗೊಲಿಸಲಾಗಿಲ್ಲ ಎಂದಿದ್ದು, ದುರುಸ್ತಿ ಸಮಯದಲ್ಲಿ ಖಾಲಿ ಜಾಗ ಬಿಡಲಾಗಿದೆ ಎಂದು ಹೇಳಿದ್ದಾರೆ. ಈ ಘಟನೆಗೆ ಬಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಕ್ದ್ರಮಕ್ಕೆ ಆಗ್ರಹಿಸಿತ್ತು.
NRI News: ಕೆನಡಾದ ಬ್ರಾಂಪ್ಟನ್ ನಲ್ಲಿರುವ 'ಶ್ರೀ ಭಗವದ್ಗೀತಾ ಪಾರ್ಕ್' ಅನ್ನು ಗುರಿಯಾಗಿಸಲಾಗಿದೆ. ಸ್ಥಳೀಯ ಮೇಯರ್ ಆಗಿರುವ ಪ್ಯಾಟ್ರಿಕ್ ಬ್ರೌನ್ ಟ್ವೀಟ್ ಮಾಡುವ ಮೂಲಕ ಈ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ. ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಈ ಘಟನೆಯ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನಗರದ ಮೇಯರ್ ಪ್ಯಾಟ್ರಿಕ್ ಬ್ರೌನ್ ಬುಧವಾರ ಮರುನಾಮಕರಣ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮುದಾಯದ ಉನ್ನತಿಗಾಗಿ ಸ್ಥಳೀಯ ಹಿಂದೂಗಳು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಉದ್ಯಾನವನಕ್ಕೆ ‘ಶ್ರೀ ಭಗವದ್ಗೀತೆ’ ಎಂದು ಹೆಸರಿಡಲಾಗಿದೆ ಎಂದು ವಿವರಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.