ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ದಿನೆ ದಿನೆ ತಾರಕಕ್ಕೆ ಏರುತ್ತಿದೆ. ದಿನಕ್ಕೊಂದು ಹೇಳಿಕೆ, ದಿನಕ್ಕೊಂದು ಬೆಳವಣಿಗೆ ಆಗ್ತಿರೋ ಈ ಗಂಭೀರವಾದ ವಿಚಾರಕ್ಕೆ ಅಂತ್ಯ ಯಾವಾಗ ಅನ್ನೋದು ಸಾರ್ವಜನಿಕರಿಂದ ಪ್ರಶ್ನೆ ಎದ್ದಿತ್ತು. ಅದೆಲ್ಲದಕ್ಕೂ ಫುಲ್ ಸ್ಟಾಪ್ ಎಂಬಂತೆ ಪಾಲಿಕೆ ಅಧಿಕಾರಿಗಳು ಈದ್ಗಾ ವಿವಾದಕ್ಕೆ ಇತಿಶ್ರೀ ಹಾಡಲು ಮುಂದಾಗಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 243 ವಾರ್ಡ್ಗಳ ಅಂತಿಮ ಡಿಲಿಮಿಟೇಶನ್ ವರದಿಯನ್ನು ರಾಜ್ಯ ಸರ್ಕಾರ ಗುರುವಾರ ಅಧಿಸೂಚಿಸಿದ್ದು, ಪರಿಷತ್ ಚುನಾವಣೆಯನ್ನು ಎರಡು ವರ್ಷಗಳ ಕಾಲ ವಿಳಂಬಗೊಳಿಸಿದ್ದ ಕಸರತ್ತು ಪೂರ್ಣಗೊಳಿಸಿದೆ.
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋ ಮೂಲಕ ಆರ್ಡರ್ ಪಡೆಯಬಹುದು. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋ ಮೂಲಕ ಆರ್ಡರ್ ಪಡೆಯಬಹುದು. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಈದ್ಗಾ ಮೈದಾನದ ಭೂ ವಿವಾದದ ಬೆನ್ನಲ್ಲೆ ಪಾಲಿಕೆ ವತಿಯಿಂದ ಮುಸ್ಲೀಂ ಸಮುದಾಯಕ್ಕೆ ಗುಡ್ ನ್ಯೂಸ್ ನೀಡಿದೆ. ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆಗೆ ಯಾವುದೇ ಅಡ್ಡಿಯಿಲ್ಲ. ಏಕೆಂದರೆ ಸುಪ್ರೀಂ ಕೋರ್ಟ್ ನಲ್ಲಿ ನಮಾಜ್ ಗೆ ಅನುಮತಿ ಇದೆ. ಹೀಗಾಗಿ ಮುಸ್ಲಿಂ ಜನಾಂಗದ ಹಬ್ಬದ ಪ್ರಾರ್ಥನೆಗೆ ಅಡ್ಡಿಯಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಾರ್ಥನೆಗೆ ಅವಕಾಶ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಜುಲೈ 1, 2017ರಲ್ಲಿ ಕೇಂದ್ರ ಸರ್ಕಾರ ಒನ್ನೇಷನ್ ಒನ್ ಟ್ಯಾಕ್ಸ್ ನಿಯಮ ಜಾರಿ ಮಾಡಿತ್ತು. ನೇರವಾಗಿ ಕೇಂದ್ರವೇ ತೆರಿಗೆ ಸಂಗ್ರಹಿಸಿ ರಾಜ್ಯದ ಪಾಲು ನೀಡುವ ನಿಯಮವಿದು. ಆದರೆ ಅಂಥಾ ಯೋಜನೆಗೂ ಬಿಬಿಎಂಪಿ ಟಕ್ಕರ್ ಕೊಟ್ಟು ಸಾವಿರಾರು ಕೋಟಿ ಉಂಡೇನಾಮೆ ಹಾಕಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ತಲೆದೋರೋ ಸಾಧ್ಯತೆ ಇದೆ. ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಗುತ್ತಿಗೆ ಪೌರಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು ಸೇರಿ ಬೃಹತ್ ಹೋರಾಟ ಮಾಡ್ತಿದ್ದಾರೆ. ಹೀಗಾಗಿ ಬೆಂಗಳೂರು ಮತ್ತೆ ಗಬ್ಬೆದ್ದು ನಾರೋ ಸಾಧ್ಯತೆ ಇದೆ.
ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿ ಶೀಟರ್ ಗಳು ಫುಲ್ ಆ್ಯಕ್ಟೀವ್ ಆಗಿದ್ದಾರೆ. ಜೈಲಿಂದ ಹೊರಬರುತ್ತಿರುವ ಖತರ್ನಾಕ್ ಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ಹವಾ ಎಬ್ಬಿಸುತ್ತಿದ್ದಾರೆ.
ರಾಜಧಾನಿಯ ಮಾರಣಹೋಮವಾಗಿರುವ ರಸ್ತೆ ಗುಂಡಿ ಸಂಬಂಧ ಹೈಕೋರ್ಟ್ ಮುಂದೆ ಪಾಲಿಕೆ ಅಧಿಕಾರಿಗಳು ಹಾಜರಾಗಿದ್ದು, ಗುಂಡಿ ಮುಚ್ಚಿರುವ ಕುರಿತು ಸಂಕ್ಷಿಪ್ತ ದಾಖಲೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬೆಂಗಳೂರಿನಲ್ಲಿ 4 ಹೊಸ ಫ್ಲೈಓವರ್ ನಿರ್ಮಾಣವಾಗಲಿದೆ. 4 ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಪಾಲಿಕೆಗೆ ಭರ್ಜರಿ ಅನುದಾನ ನೀಡಲಾಗಿದೆ. ಬಿಬಿಎಂಪಿಗೆ ಅನುದಾನ ಸಿಕ್ಕರೂ ಫ್ಲೈ ಓವರ್ ನಿರ್ಮಾಣ ಕಾರ್ಯ ಸುಲಭವಲ್ಲ. ನಗರದ 4 ಜಂಕ್ಷನ್ಗಳ ಟ್ರಾಫಿಕ್ ಸಮಸ್ಯೆ ಪರಿಹಾರವೇ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 4 ಫ್ಲೈ ಓವರ್ಗಳ ಪೈಕಿ ಎರಡು ಫ್ಲೈ ಓವರ್ಗಳ ನಿರ್ಮಾಣಕ್ಕೆ ನಮ್ಮ ಮೆಟ್ರೋ ಅಡ್ಡಿಯಾಗಿದೆ.
ಬೆಂಗಳೂರು ಚಾಮರಾಜಪೇಟೆ ಆಟದ ಮೈದಾನದ ಜಾಗಕ್ಕೆ ಸಂಬಂಧಿಸಿದ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿರುವ ವಕ್ಫ್ ಮ೦ಡಳಿಗೆ ಮತ್ತಷ್ಟು ಅಗತ್ಯ ದಾಖಲೆ ಒದಗಿಸುವಂತೆ ಇಂದು ನೋಟಿಸ್ ನೀಡಲಾಗುವುದು ಎಂದು ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಕಾಮಗಾರಿಗೆ 24 ಕೋಟಿ, ಸುಣ್ಣಬಣಕ್ಕೆ ಮತ್ತಷ್ಟು ಕೋಟಿ ಪ್ರಧಾನಿ ಮೋದಿ ಆಗಮನದಿಂದ ಬಿಎಂಟಿಸಿಯಿಂದಲೂ 1 ಕೋಟಿ ಖರ್ಚು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ಬಿಎಂಟಿಸಿಗೆ ಮತ್ತೊಂದು ಹೊರೆ
ಬಿಎಂಟಿಸಿಯಲ್ಲಿ ನಡೆಯುತ್ತಿದೆಯಾ ಅಂಧಾ ದರ್ಬಾರ್..? ಅಧಿಕಾರಿಗಳ ಅಂಧಾ ದರ್ಬಾರ್ಗೆ ನೌಕರರಿಗೆ ಶಿಕ್ಷೆ ಸಣ್ಣ ಸಣ್ಣ ವಿಚಾರಕ್ಕೆ ಬಿಎಂಟಿಸಿಯ ಚಾಲಕ, ಕಂಡಕ್ಟರ್ಗೆ ಕಠಿಣ ಶಿಕ್ಷೆ BMTC ಬಸ್ ಚೆಕ್ಕಿಂಗ್ ವೇಳೆ ಹೆಚ್ಚುವರಿ ಹಣ ಇಟ್ಟಿದ್ದೇ ತಪ್ಪಾ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.