ನೀವು ಪೌರಕಾರ್ಮಿಕ ಕೆಲಸಕ್ಕಾಗಿ ಕಾಯ್ತಿದ್ದೀರಾ..!? ಹಾಗಿದ್ರೇ ನೀವು ಮದುವೆ ಆಗೋ ವಿಚಾರದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. ಇಲ್ಲ ಅಂದ್ರೇ ನೀವು ಕೆಲಸ ಮಾಡಲು ಆನರ್ಹರಾಗ್ತೀರಿ ಹುಷಾರ.. ಬಿಬಿಎಂಪಿ ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಅದ್ರಲ್ಲಿ ಏನಿದೆ ವಿಷೇಶ ಅಂದ್ರೆ..? ಆ ಬಗ್ಗೆ ವರದಿ ಇದೆ ಮುಂದೆ ಓದಿ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಗುತ್ತಿಗೆದಾರರ ಮುನಿಸು ಮುಂದುವರೆದಿದೆ. BBMP ಗುತ್ತಿಗೆದಾರರಿಂದ ಪಾಲಿಕೆ ವಿರುದ್ಧ ಕಮಿಷನ್ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಪಾಲಿಕೆಯಿಂದ ಗುತ್ತಿಗೆದಾರರ ಜಾಬ್ ಕೋಡ್ ರದ್ದುಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಇಂದು ಮಾಗಡಿ ರಸ್ತೆಯಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ರಸ್ತೆ ಡಾಂಬರೀಕರಣ, ಚರಂಡಿ ನೀರು ನಿರ್ವಹಣೆ, ಪಾದಾಚಾರಿ ಮಾರ್ಗ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಚೀನಾದಲ್ಲಿ ಕೊರೊನ ರೂಪಾಂತರಿ ಬಿಎಫ್-07 ಬಳಿಕ ಎಕ್ಸ್ಬಿಬಿ 1.5 ಹೊಸ ರೂಪಾಂತರಿ ತಳಿ ಪತ್ತೆಯಾಗಿದೆ. ಈ ಹೊಸ ತಳಿ ಎಕ್ಸ್ಬಿಬಿ 1.5 ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಹತ್ವದ ಮಾಹಿತಿ ತಿಳಿಸಿದ್ದಾರೆ.
ಕೊಳವೆ ಬಾವಿ & RO ಪ್ಲಾಂಟ್ ಯೋಜನೆಯಲ್ಲಿ ಅಕ್ರಮ ಆರೋಪ ಇಡಿ ಕೇಳಿದ ದಾಖಲೆ ಸಲ್ಲಿಕೆ ಮಾಡಿದ ಬಿಬಿಎಂಪಿ EIC ಪ್ರಹ್ಲಾದ್ ಐದು ವಲಯಗಳಲ್ಲಿ ಸೇವೆಯಲ್ಲಿದ್ದ ಅಧಿಕಾರಿಗಳ ಪಟ್ಟಿ ಸಲ್ಲಿಕೆ 2016ರಿಂದ 2019ರವರೆಗೆ ಸೇವೆಯಲ್ಲಿದ್ದ ಅಧಿಕಾರಿಗಳ ಪಟ್ಟಿ ಯೋಜನೆ ಅನುಷ್ಠಾನ ಮಾಡಿದ ಗುತ್ತಿಗೆದಾರರ ವಿವರಗಳ ಪಟ್ಟಿ NR ರಮೇಶ್ ಸಲ್ಲಿಸಿರುವ ದೂರಿನ ಅನ್ವಯ ನಡೆಯಿತ್ತಿರುವ ತನಿಖೆ ಬರೋಬ್ಬರಿ 30 ಪುಟಗಳ ಎನ್. ರಮೇಶ್ ಹೇಳಿಕೆ ದಾಖಲಿಸಿರುವ ಇಡಿ ಬಿಬಿಎಂಪಿಯಿಂದಲೂ ಅಧಿಕೃತವಾಗಿ ಇಡಿ ಕೇಳಿದ ಮಾಹಿತಿ ಸಲ್ಲಿಕೆ
BBMP ಕೊಳವೆ ಬಾವಿ, RO ಪ್ಲಾಂಟ್ ಅಕ್ರಮ ಆರೋಪ ಪ್ರಕರಣ. ಐದು ಚೀಫ್ ಇಂಜಿನಿಯರ್ಗಳಿಗೆ ಬಂಧನದ ಭೀತಿ ಶುರು. ಪಾಲಿಕೆ ಇಂಜಿನಿಯರ್ ಇನ್ ಚೀಫ್ ಪ್ರಹ್ಲಾದ್ ನೋಟಿಸ್. ದಾಖಲೆ ನೀಡುವಂತೆ 5 ಇಂಜಿನಿಯರ್ಗಳಿಗೆ ನೋಟಿಸ್.
ವಾರ್ಡ್ ಮರು ವಿಂಗಡಣೆಯಿಂದ ಬಿಬಿಎಂಪಿಗೆ ಆರ್ಥಿಕ ಹೊರೆಯಾಗುತ್ತಂತೆ.. 45 ವಾರ್ಡ್ಗಳ ಸಂಖ್ಯೆ ಹೆಚ್ಚಳದಿಂದ ವಾರ್ಷಿಕ ಆರ್ಥಿಕ ಹೊರೆ ಎಷ್ಟಾಗುತ್ತೆ ಗೊತ್ತಾ..? ಈ ಬಗ್ಗೆ ಬಿಬಿಎಂಪಿ ಅಸಲಿ ಚಿತ್ರಣ ಬಿಚ್ಚಿಟ್ಟಿದೆ.
BBMP Ward-delimitation: ಕೇವಲ BBMP ಸಿಬ್ಬಂದಿ ವೇತನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಬೇಕಾಗಿದೆ. ಸಿಬ್ಬಂದಿ ವೇತನ ಬಿಟ್ಟು ಕಚೇರಿ ಮತ್ತು ಇತರೆ ವೆಚ್ಚ ಸೇರಿ ತಿಂಗಳಿಗೆ 10 ರಿಂದ 15 ಕೋಟಿ ರೂ. ಬೇಕಾಗುತ್ತದೆ ಎನ್ನಲಾಗುತ್ತಿದೆ.
BBMP : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಮೇಲೆ ಮನೆ, ಕಾಂಪೌಂಡ್ ನಿರ್ಮಿಸಿದ್ದ ಭೂ ಗಳ್ಳರಿಗೆ ಪಾಲಿಕೆ ಅಧಿಕಾರಿಗಳು ಇಂದು ಬಿಸಿ ಮುಟ್ಟಿಸಿದ್ದಾರೆ. ರಾಜಕಾಲುವೆ ಮೇಲಿದ್ದ ಕಟ್ಟಡವನ್ನ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬಿಬಿಎಂಪಿಯ ರ್ಯಾಪಿಡ್ ರೋಡ್ ಅಟ್ಟರ್ ಫ್ಲಾಪ್.!?. ಹೊಸ ತಂತ್ರಜ್ಞಾನ ಅಂತ ಡಂಗೂರ ಸಾರಿದ್ದ ಯೋಜನೆ. ಕಳಪೆ ಪಟ್ಟಿಗೆ ಸೇರಿಕೊಂಡಿತೇ ರ್ಯಾಪಿಡ್ ರೋಡ್.!?. ವಾಹನ ಓಡಾಟಕ್ಕೆ ಮುಕ್ತವಾದ 10 ದಿನದಲ್ಲಿ ಕಳಪೆ..?. 10 ದಿನಗಳಲ್ಲೆ ದುರಸ್ತಿ ಹಂತಕ್ಕೆ ತಲುಪಿತಾ ರಸ್ತೆ..?
ಭಾರತ ಚುಣಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ಶುದ್ಧೀಕರಣವನ್ನು ಅಧಿಕಾರಿಗಳು ಸರಿಯಾಗಿ ಮಾಡಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಇಂದು ಮನೆ-ಮನೆಗೆ ಭೇಟಿ ನಿಡುವ ಮೂಲಕ ಮತದಾರರ ಪಟ್ಟಿ ಪರಿಶೀಲನೆಯನ್ನ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಸೇರಿ ಚುನಾವಣೆ ಅಧಿಕಾರಿಗಳು ಮಾಡಿದ್ದಾರೆ.
ಬೆಂಗಳೂರು : ಕಳೆದೆರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆಗೆ ಅಡ್ಡಗಾಲು ಹಾಕುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಉಪವಾಸ ಕುಳಿತ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ರಾಜಕೀಯ ವಲಯದಲ್ಲಿ ರೌಡಿ ವಾರ್ ಶುರುವಾಗಿದೆ. ಬಿಜೆಪಿ ಕಾಂಗ್ರೆಸ್ ನಲ್ಲಿ ಅವನು ರೌಡಿ ಇವನೂ ರೌಡಿ ಎಂಬ ಟಾಕ್ ವಾರ್ ನಡುವೆ ಬಿಜೆಪಿ ಮಹಾ ಎಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್ ಜಯನಗರ ಕಾರ್ಯಕರ್ತ ಮತ್ತು ಬಿಬಿಎಂಪಿ ಟಿಕೆಟ್ ಆಕಾಂಕ್ಷಿಯಾಗಿರುವ ಚೇತನ್ ಫೋಟೋ ಹಾಕಿ ರೌಡಿ ಎಂಬಂತೆ ಬಿಂಬಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.