ಹಣ, ಒಡವೆಗಳು ಕಳ್ಳತನ ಆಗೋದನ್ನ ನೋಡಿದ್ದೀವಿ. ಅಷ್ಟೇ ಯಾಕೆ ಬೈಕ್, ವಾಹನಗಳನ್ನು ಕಳ್ಳತನ ಆಗುವ ಘಟನೆಗಳನ್ನೂ ಕಂಡಿದ್ದೇವೆ. ಆದರೆ, ರಾಜಧಾನಿ ಬೆಂಗಳೂರಿನ ಆ ಏರಿಯಾದಲ್ಲಿ ಬಹಳ ವಿಚಿತ್ರವಾದ ಕಳ್ಳತನ ನಡೆದಿರುವ ಆರೋಪ ಕೇಳಿ ಬರುತ್ತಿದೆ.
ಪ್ರಧಾನಿ ಮೋದಿಗೆ ರಾಜ್ಯದಲ್ಲಿ ಅವರದ್ದೇ ಆದ ಇಮೇಜ್ ಇದೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನು ಇದೇ ಜೂನ್ 20ರಂದು ಬೆಂಗಳೂರಿಗೆ ಕರೆತರಲು ಬಿಜೆಪಿ ಸಮಯ ನಿಗದಿ ಮಾಡಿದ್ದು, ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಪ್ರದಾನಿ ಭೇಟಿ ಸಂದರ್ಭದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ, ಡೆಂಗ್ಯೂ ಪ್ರಕರಣ ಹೆಚ್ಚಳ
ಬಿಬಿಎಂಪಿ ಆರೋಗ್ಯ ವಿಭಾಗದಿಂದ ಹೊಸ ಪ್ರಯೋಗ
ನಗರದಾದ್ಯಂತ ನೀರಿನ ಸ್ಯಾಂಪಲ್ ಕಲೆಕ್ಷನ್ಗೆ ಪಾಲಿಕೆ ಪ್ಲ್ಯಾನ್
ವಲಯವಾರು ಆರ್ಒ ಪ್ಲಾಂಟ್ ಮತ್ತು ನಳ್ಳಿ ನೀರಿನ ಸಂಗ್ರಹ
ಚಾಮರಾಜಪೇಟೆಯ ಈದ್ಗಾ ಮೈದಾನ ಯಾತ ಆಸ್ತಿ ಅನ್ನೋ ವಿಚಾರದ ವಿವಾದ ದಿನೇ ದಿನೇ ಹೆಚ್ಚಾಗ್ತಿದೆ. ಇದರ ಬಿಸಿ ನಡುವೆ ಮೈಸೂರು ಆಡಳಿತ ಕಾಲದಿಂದಲೂ ಇದ್ದ ದಾಖಲೆಗಳನ್ನು ಬಿಬಿಎಂಪಿಗೆ ಕರ್ನಾಟಕದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ (ಸಿಎಂಎ) ಸಲ್ಲಿಸಿದೆ.
ಇದೀಗ ಕರೋನಾ ಕೇಸ್ ಗಳಲ್ಲಿ ಇಳಿಮುಖ ವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ . ಆದರೆ ಈ ಬಾರಿ ಕೂಡಾ ಬಿಬಿಎಂಪಿ ಶಾಲೆಗಳಲಿ ಶಿಕ್ಷಕರ ಕೊರತೆ ಕಾಣಿಸಿಕೊಂಡಿದೆ.
ಬೆಂಗಳೂರಿನಲ್ಲಿ ದಿನೇ ದಿನೇ ಬೀದಿ ನಾಯಿಗಳ ಮೇಲಿನ ಹಿಂಸಾಚಾರ ಹೆಚ್ಚುತ್ತಿದೆ. ಇದೀಗ ಬಿಬಿಎಂಪಿ ಪಶುಸಂಗೋಪನಾ ಇಲಾಖೆ ಎಚ್ಚೆತ್ತುಕೊಂಡಿದೆ. ಬೀದಿ ನಾಯಿಗಳಿಗೆ ಹಿಂಸೆ ನೀಡುವವರ ವಿರುದ್ದ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬಿಬಿಎಂಪಿ ಆಸ್ಪತ್ರೆಗಳಲ್ಲಿ ಅಗತ್ಯ ಸಿಬ್ಬಂದಿ ಮತ್ತು ವೈದ್ಯರ ಕೊರತೆ.. ವೈದ್ಯರೇ ಇಲ್ಲದೆ ಇರುವ ವೈದ್ಯರ ಮೇಲೆ ಹೆಚ್ಚಿದ ಕೆಲಸದ ಒತ್ತಡ.. ಅವಶ್ಯಕತೆ ಇರುವಷ್ಟು ವೈದ್ಯರ ಇಲ್ಲದೆ ಮಹಿಳೆಯರ ಪರದಾಟ..ಬಿಬಿಎಂಪಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವೂ ಕೂಡ ಹೆಚ್ಚಳ
ಬಿಬಿಎಂಪಿ ಸಲ್ಲಿಸಿದ ವಾರ್ಡ್ ಮರು ವಿಂಗಡಣೆ ಕರಡನ್ನ ಸರ್ಕಾರ ತಿರಸ್ಕರಿಸಿದೆ. ಸುಪ್ರಿಂ ಕೋರ್ಟ್ ಸೂಚನೆ ಮೇರೆಗೆ ಪಟ್ಟಿ ಸಿದ್ದಪಡಿಸಿದ್ದರೂ ಹತ್ತಾರು ತಪ್ಪುಗಳನ್ನ ಅದ್ರಲ್ಲಿ ಸರ್ಕಾರ ಹುಡುಕಿದೆ.
ಬೃಹತ್ ಬೆಂಗಳೂರು ಆಡಳಿತ ಕೇಂದ್ರವಾಗಿರೋ ಬಿಬಿಎಂಪಿ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ ಎನ್ನೋದನ್ನು ಬಿಟ್ಟರೆ ಇನ್ನುಳಿದ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಬೆನ್ನಲ್ಲೇ ವಾರ್ಡ್ ವಾರು ಮೀಸಲಿಗೆ ಸಂಬಂಧಿ ಸಿದಂತೆ ಅಧಿಕಾರಿಗಳು ಸಿದ್ಧಪಡಿಸಿರುವ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಬಿಬಿಎಂಪಿ ವ್ಯರ್ಥ ಯೋಜನೆಗೆ 5 ಕೋಟಿ ವ್ಯರ್ಥ ವಿಚಾರವಾಗಿ ಬಿಬಿಎಂಪಿ ಹಣಕಾಸು ಆಯುಕ್ತೆ ತುಳಸಿ ಮದ್ದಿನೇನಿ ಸ್ಪಷ್ಟನೆ ನೀಡಿದ್ದಾರೆ. ಪಾಲಿಕೆ ಬಜಾರ್ ದೆಹಲಿ ಮಾದರಿಯಲ್ಲಿ ಎಸಿ ಮಳಿಗೆಗಳ ನಿರ್ಮಾಣ ಆಗ್ತಿದೆ, ಸದ್ಯ ವಿಜಯನಗರ ಅಂಡರ್ ಪಾಸ್ನಲ್ಲಿ 54 ಮಳಿಗೆ ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ಮತ್ತಷ್ಟು ಮಳಿಗೆ ಕಾಮಗಾರಿ ಆಗಬೇಕಾಗಿದೆ.
ಕಳೆದ 10 ವರ್ಷದಿಂದ ಬೆಂಗಳೂರಿನಲ್ಲಿ ಬಗೆಹರಿಯದ ಸಮಸ್ಯೆ ..ಕಾರಣ 6 ತಿಂಗಳು, ವರ್ಷಕ್ಕೊಮ್ಮೆ ಅಧಿಕಾರಿಗಳ ಎತ್ತಂಗಡಿ ..ಆಯುಕ್ತರು ಸಮಸ್ಯೆ ಆಲಿಸ್ತಾರೆ , ಪರಿಹಾರ ಕೊಡೊ ವೇಳೆ ಎತ್ತಂಗಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.