ಶಾಂತಿ/ಯುದ್ಧ: ಇಂದು ಎಲ್‌ಎಸಿಯಲ್ಲಿ 8ನೇ ಸುತ್ತಿನ ಮಾತುಕತೆಯಲ್ಲಿ ಸಿಗಲಿದೆಯೇ ಪರಿಹಾರ ?

ಭಾರತವು ಎಂದಿಗೂ ಯಾವ ದೇಶದೊಂದಿಗೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಯಾರಾದರೂ ಭಾರತದ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರೆ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡದೆ ಹಿಂದೆ ಸರಿಯುವುದಿಲ್ಲ.

Last Updated : Nov 6, 2020, 08:09 AM IST
  • ಲಡಾಖ್ ಪಾದರಸ ಚಳಿಗಾಲದಲ್ಲಿ ಇನ್ನೂ ಬಿಸಿಯಾಗಿರುತ್ತದೆ
  • ಈ ಸುತ್ತಿನ ಮಾತುಕತೆಗಳಿಂದ ಭಾರತ-ಚೀನಾ ನಡುವಿನ ಉದ್ವೇಗ ಕಡಿಮೆಯಾಗುವುದೇ?
  • ಎಲ್‌ಎಸಿಯಲ್ಲಿ ಭಾರತದ ಆಕ್ರಮಣದಿಂದ ಚೀನಾ ಆಘಾತಕ್ಕೊಳಗಾಗಿದೆ
ಶಾಂತಿ/ಯುದ್ಧ: ಇಂದು ಎಲ್‌ಎಸಿಯಲ್ಲಿ 8ನೇ ಸುತ್ತಿನ ಮಾತುಕತೆಯಲ್ಲಿ ಸಿಗಲಿದೆಯೇ ಪರಿಹಾರ ? title=

ನವದೆಹಲಿ: ಭಾರತವು ಎಂದಿಗೂ ಯಾವ ದೇಶದೊಂದಿಗೂ ಯುದ್ಧವನ್ನು ಬಯಸುವುದಿಲ್ಲ. ಆದರೆ ಯಾರಾದರೂ ಭಾರತದ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರೆ, ಭಾರತವನ್ನು ಕೆರಳಿಸಲು ಪ್ರಯತ್ನಿಸಿದರೆ, ಅದರ ಫಲಿತಾಂಶ ಏನು? ಭಾರತದ ಸಿದ್ಧತೆಗಳನ್ನು ನೋಡುವ ಮೂಲಕ ಇದನ್ನು ಅರ್ಥಮಾಡಿಕೊಳ್ಳಬಹುದು.

ಲಡಾಖ್ ಪಾದರಸ ಚಳಿಗಾಲದಲ್ಲಿ ಇನ್ನೂ ಬಿಸಿಯಾಗಿರುತ್ತದೆ:-
ಚೀನಾದೊಂದಿಗೆ ಎಲ್‌ಎಸಿ (LAC)ಯಲ್ಲಿ ಉದ್ವಿಗ್ನತೆ ಮುಂದುವರೆದಿದೆ. ಲಡಾಖ್‌ನಲ್ಲಿ ಚಳಿಗಾಲದಲ್ಲಿ ಪರಿಸ್ಥಿತಿಗಳು ಇನ್ನಷ್ಟು ಕಷ್ಟಕರವಾಗುತ್ತವೆ ಎಂದು ಊಹಿಸಲಾಗಿದೆ. ಆದರೆ ಭಾರತ ಮತ್ತು ಚೀನಾ (India-China) ಉಭಯ ದೇಶಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿ ನಿಂತಿವೆ. ಆದರೆ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಗಳು ಸಹ ನಡೆಯುತ್ತಿವೆ.

LAC ಮೇಲಿನ ಉದ್ವೇಗವನ್ನು ಕಡಿಮೆ ಮಾಡಲು ಭಾರತ ನೀಡಿದೆ ಈ ಹೊಸ ಸೂತ್ರ

ಇಂದಿನ ಮಾತುಕತೆಯಿಂದ ಉದ್ವಿಗ್ನತೆ ಕಡಿಮೆಯಾಗಬಹುದೇ?
ಎಲ್‌ಎಸಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಚೀನಾ ಇಂದು ಎಂಟನೇ ಸುತ್ತಿನ ಮಾತುಕತೆ ನಡೆಸಲಿವೆ. ಈ ಮಿಲಿಟರಿ ಮಟ್ಟದ ಸಂವಾದದಲ್ಲಿ ಪೂರ್ವ ಲಡಾಖ್‌ನ (Ladakh) ಎಲ್ಲಾ ಅಸ್ತವ್ಯಸ್ತವಾಗಿರುವ ಸ್ಥಳಗಳ ಬಗ್ಗೆ ಚೀನಾಕ್ಕೆ ಬಲವಾದ ಸಂದೇಶವನ್ನು ನೀಡಲು ಸಿದ್ಧತೆ ನಡೆದಿದೆ. ಎಲ್ಲಾ ಪ್ರದೇಶಗಳಿಂದ ಚೀನಾದ ಸೈನ್ಯವನ್ನು ಪೂರ್ಣವಾಗಿ ಹಿಂದೆ ಕರೆಸಿಕೊಳ್ಳುವಂತೆ ಸೂಚನೆ ನೀಡುವ ನಿರೀಕ್ಷೆ ಇದೆ.

ಎಲ್‌ಎಸಿ ಕುರಿತು ಎಂಟನೇ ಸುತ್ತಿನ ಮಾತುಕತೆ...
ಎಲ್‌ಎಸಿಯಲ್ಲಿ ಇಂದು ಎಂಟನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಭಾರತೀಯ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ 14ನೇ ದಳದ ಹೊಸ ಕಮಾಂಡರ್. ಕೊನೆಯ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಅಕ್ಟೋಬರ್ 12 ರಂದು ನಡೆಯಿತು. ಆದರೆ ಈ ಏಳನೇ ಸುತ್ತಿನ ಮಾತುಕತೆಯಲ್ಲಿ ಯಾವುದೇ ನಿರೀಕ್ಷಿತ ಫಲಿತಾಂಶ ಹೊರಬಿದ್ದಿಲ್ಲ. ಭಾರತೀಯ ಸೇನೆಯು ಚೀನಾ ಮುಂದೆ ಗಡಿಯಲ್ಲಿ ತಮ್ಮ ಹಿಂದಿನ ಸ್ಥಳಕ್ಕೆ ಮರಳುವ ಷರತ್ತು ವಿಧಿಸಿತ್ತು. ಎರಡೂ ದೇಶಗಳ ಸುಮಾರು 50 ಸಾವಿರ ಸೈನಿಕರು ಎಲ್‌ಎಸಿಯಲ್ಲಿ ಇರುತ್ತಾರೆ ಎಂದು ನಿರ್ಧಾರಕ್ಕೆ ಬರಲಾಗಿತ್ತು.

ಲಡಾಖ್‌ನಲ್ಲಿ ಭಾರತೀಯ ಸೇನೆಯ ಪರಾಕ್ರಮ, 6 ಹೊಸ ಶಿಖರಗಳು ವಶಕ್ಕೆ

ಎಲ್‌ಎಸಿಯಲ್ಲಿ ಭಾರತದ ಆಕ್ರಮಣದಿಂದ ಚೀನಾ ಆಘಾತಕ್ಕೊಳಗಾಗಿದೆ:
ಎಲ್‌ಎಸಿ ಮೇಲೆ ಭಾರತದ ಆಕ್ರಮಣದಿಂದ ಚೀನಾ ಆಘಾತಕ್ಕೊಳಗಾಗಿದೆ. ಚೀನಾದ ಅತಿಕ್ರಮಣ ನೀತಿಗೆ ಹೊಸ ಭಾರತ ಇಂತಹ ಆಕ್ರಮಣಕಾರಿ ಉತ್ತರವನ್ನು ನೀಡುತ್ತದೆ ಎಂದು ಬಹುಶಃ ಚೀನಾ ಊಹಿಸಿರಲಿಲ್ಲ. ಭಾರತ ಮತ್ತು ಚೀನಾ ನಡುವಿನ ಎಂಟನೇ ಸುತ್ತಿನ ಮಾತುಕತೆಯ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಲ್‌ಎಸಿ ಮೇಲೆ ಒಂದು ಇಂಚು ಅತಿಕ್ರಮಣ ಕೂಡ ಭಾರತಕ್ಕೆ ಸ್ವೀಕಾರಾರ್ಹವಲ್ಲ ಎಂದು ಗಾಲ್ವನ್‌ಗೆ ನೆನಪಿಸುವ ಮೂಲಕ ಒಂದು ರೀತಿಯ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
 

Trending News