ಲಡಾಖ್ ನ ಕೇಂದ್ರಾಡಳಿತ ಪ್ರದೇಶ ಲೇಹ್ ನ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್ನಲ್ಲಿ ಹಿಮಪಾತದ ನಡುವೆ ಸಿಲುಕಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 80 ಜನರನ್ನು ಭಾರತೀಯ ಸೇನೆ ರಕ್ಷಿಸಿದೆ.
ಮೂರು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಸರಣಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಂಡಿದ್ದು, ಆಗಸ್ಟ್ 2 ರಿಂದ ಅರ್ಜಿಗಳನ್ನು ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಬುಧವಾರ 15000 ಅಡಿಗಳಷ್ಟು ಎತ್ತರದಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹಿಮರಾಶಿಯ ನಡುವೆ ರಾಷ್ಟ್ರಧ್ವಜವನ್ನು ಹಾರಿಸಿದರು.
ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಸೈನ್ಯದ ಪಡೆಗಳ ನಿಯೋಜನೆಯಲ್ಲಿ ಗಣನೀಯ ಏರಿಕೆಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.ಭಾರತವು ಹೊಂದಾಣಿಕೆಯ ಸೈನ್ಯ ನಿಯೋಜನೆಯನ್ನು ಮಾಡಿದೆ ಮತ್ತು ಭಾರತದ ಗಡಿ ಭಾಗದಲ್ಲಿ ಮೂಲಸೌಕರ್ಯಗಳನ್ನು ಕೂಡ ಹಾಕಲಾಗಿದೆ ಎಂದು ಅವರು ಹೇಳಿದರು.
ಚೀನಾ ಇನ್ನೂ ಕೂಡ ತನ್ನ ಚಟ ಬಿಟ್ಟಿಲ್ಲ. ಇದೀಗ LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ಚೀನಾ ಭಾರತದ ವಿಚಕ್ಷಣೆಗಾಗಿ ಡ್ರೋನ್ಗಳನ್ನು ಬಳಸುತ್ತಿದೆ. ಗಡಿ ವಿವಾದದ ನಂತರ ಚೀನಾ ತನ್ನ ಯಾವುದೇ ಸೈನ್ಯವನ್ನು ಎಲ್ಎಸಿಯಿಂದ ಸಂಪೂರ್ಣವಾಗಿ ತೆಗೆದುಹಾಕಿಲ್ಲ ಎಂಬುದೂ ಮುಂಚೂಣಿಗೆ ಬಂದಿದೆ.
ಕಳೆದ ವರ್ಷ ಲಾಕ್ ಡೌನ್ ವೇಳೆ, ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾದ ಚಿತ್ರೀಕರಣ ಪಂಜಾಬ್ನಲ್ಲಿ ನಡೆಯುತ್ತಿತ್ತು. ಲಾಕ್ಡೌನ್ ತೆರೆವಾದಾಗ ಬಹಳ ಸೀಮಿತ ಸಿಬ್ಬಂದಿಯೊಂದಿಗೆ ಶೂಟಿಂಗ್ ಕಾರ್ಯ ಆರಂಭಿಸಲಾಗಿತ್ತು.
ಶನಿವಾರದಂದು ಬೆಳಿಗ್ಗೆ ಲಡಾಖ್ನಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಬೆಳಿಗ್ಗೆ 5:11 ಕ್ಕೆ ಕೇಂದ್ರ ಭೂಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ.
Aero india 2021: ಸಂಯೋಜಿತ ವಾಯು ಕಾರ್ಯಾಚರಣೆ ತಂಡ, ಅಂದರೆ ಸಿಎಟಿಎಸ್ ಮುಖ್ಯ ತೇಜಸ್ ಫೈಟರ್ ಜೆಟ್ ಅನ್ನು ಹೊಂದಿದೆ, ಇದು ಪ್ರಸ್ತುತ ತೇಜಸ್ನ ಅತ್ಯಾಧುನಿಕ ರೂಪವಾಗಿದೆ. ಇದರೊಂದಿಗೆ ಕ್ಯಾಟ್ ವಾರಿಯರ್ ಇರುತ್ತದೆ, ಇದು ದೊಡ್ಡ ಗಾತ್ರದ ಸಶಸ್ತ್ರ ಯುದ್ಧ ಯುಎವಿ ಆಗಿದೆ. ನೆಲ-ದಾಳಿ, ಗಾಳಿಯಿಂದ ಗಾಳಿಗೆ ಕ್ಷಿಪಣಿಗಳ ಜೊತೆಗೆ, ಕ್ಯಾಟ್ ವಾರಿಯರ್ನಲ್ಲಿ ಗ್ಲೈಡ್ ಬಾಂಬ್ ಕೂಡ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಭಾರತವು ಜಪಾನ್ ಮತ್ತು ಯುಎಸ್ ಸಹಭಾಗಿತ್ವದಲ್ಲಿ ಚೀನಾವನ್ನು ಎದುರಿಸಲು ಆಲೋಚನೆ ಮಾಡಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳ (ಎಎನ್ಐ) ಮೂಲಕ ಹಾದುಹೋಗುವ ಚೀನಾದ ವಾಣಿಜ್ಯ ಹಡಗುಗಳನ್ನು ನಿಯಂತ್ರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಯಾವ ದೇಶದಲ್ಲಿ ಕರೋನಾವೈರಸ್ ಸ್ಥಿತಿಗತಿ ಹೇಗಿದೆ ಎಂಬುದನ್ನು ತೋರಿಸಲು WHO ನಕ್ಷೆಯನ್ನು ಪ್ರಕಟಿಸಿದೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಭಾರತದ ನಕ್ಷೆಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗಿದೆ. ಡಬ್ಲ್ಯುಎಚ್ಒ ಮತ್ತು ಚೀನಾ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ, ಅಮೆರಿಕ ಈ ಇಬ್ಬರ ಮೈತ್ರಿಕೂಟವನ್ನು ಬಹಿರಂಗವಾಗಿ ಆಕ್ರಮಣ ಮಾಡಿದೆ. ಆದ್ದರಿಂದ ಚೀನಾದ ಆಜ್ಞೆಯ ಮೇರೆಗೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ನಕ್ಷೆಯನ್ನು ಈ ರೀತಿ ಬಿಂಬಿಸಿರಬಹುದೇ ಎಂಬ ಬಗ್ಗೆ ಸಂಶಯ ಮೂಡಿದೆ.
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಭಾರತೀಯ ಸೈನಿಕರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವುದರ ಮೂಲಕ ಮತ್ತು ಎಲ್ಎಸಿಯಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ಒಟ್ಟುಗೂಡಿಸಿ ಲಡಾಖ್ ದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈ ಆಧುನಿಕ ದೋಣಿಗಳನ್ನು ಗೋವಾದಲ್ಲಿ ನಿರ್ಮಿಸಲಾಗುವುದು ಮತ್ತು ಇವು ವಿಶೇಷ ಸೌಲಭ್ಯಗಳೊಂದಿಗೆ ವಿಶ್ವದ ಆಯ್ದ ವಿಹಾರ ನೌಕೆಗಳಲ್ಲಿ ಒಂದಾಗಲಿದೆ. ಪಗೋಂಗ್ ಸರೋವರ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮೇಲ್ವಿಚಾರಣೆ ಮಾಡಲು ಭಾರತೀಯ ಸೇನೆಯು ಖರೀದಿಸುತ್ತಿರುವ ದೋಣಿಗಳನ್ನು ಕಾರ್ಯತಂತ್ರದ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.