ಚುನಾವಣೆಗಾಗಿ ಎರಡು ತಿಂಗಳಲ್ಲಿ ಸುಮಾರು 7 ಸಾವಿರ ರೌಡಿಗಳಿಗೆ ಮುಕ್ತಿ!

Karnataka Election 2023 : ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ.  ಸದ್ಯ ಕೆಲ‌ ರೌಡಿ‌‌ಶೀಟರ್ ಗಳು ಫುಲ್ ಆಕ್ಟಿವ್  ಆಗಿದ್ದಾರೆ. ಯಾವುದಾದರೂ ಪಕ್ಷದಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಒಂದು ಕೈ ನೋಡೋಣ ಎಂದು ತೊಡೆತಟ್ಟಿದ್ದಾರೆ. ಕೆಲ ರೌಡಿ ಶೀಟರ್ಸ್ ಗಳು ಎಲೆಕ್ಷನ್ ಮೇಲೆ ಕಣ್ಣಿಟ್ಟು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.

Written by - VISHWANATH HARIHARA | Edited by - Chetana Devarmani | Last Updated : Feb 18, 2023, 10:00 AM IST
  • ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ
  • ರೌಡಿ‌‌ಶೀಟರ್ ಗಳು ಫುಲ್ ಆಕ್ಟಿವ್ ಆಗಿದ್ದಾರೆ
  • ಎರಡು ತಿಂಗಳಲ್ಲಿ ಸುಮಾರು 7 ಸಾವಿರ ರೌಡಿಗಳಿಗೆ ಮುಕ್ತಿ!?
ಚುನಾವಣೆಗಾಗಿ ಎರಡು ತಿಂಗಳಲ್ಲಿ ಸುಮಾರು 7 ಸಾವಿರ ರೌಡಿಗಳಿಗೆ ಮುಕ್ತಿ! title=

ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ.  ಸದ್ಯ ಕೆಲ‌ ರೌಡಿ‌‌ಶೀಟರ್ ಗಳು ಫುಲ್ ಆಕ್ಟಿವ್  ಆಗಿದ್ದಾರೆ. ಯಾವುದಾದರೂ ಪಕ್ಷದಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಒಂದು ಕೈ ನೋಡೋಣ ಎಂದು ತೊಡೆತಟ್ಟಿದ್ದಾರೆ. ಕೆಲ ರೌಡಿ ಶೀಟರ್ಸ್ ಗಳು ಎಲೆಕ್ಷನ್ ಮೇಲೆ ಕಣ್ಣಿಟ್ಟು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. ಎಲೆಕ್ಷನ್ ನಲ್ಲಿ ನಿಲ್ಲಬೇಕು ಅಂದರೆ ರೌಡಿ ಪಟ್ಟಿಯಲ್ಲಿದ್ದರೆ ಯಾವ ಪಾರ್ಟಿನೂ  ಬಿ ಫಾರಂ ಕೊಡಲ್ಲ. ಇನ್ನೊಂದು  ಸುಲಭವಾಗಿ ಬಿ ಫಾರಂ ಪಡೆದುಕೊಳ್ಳುವುದು ಕಷ್ಟ.  ಹೀಗಾಗಿ ಕೆಲ ರೌಡಿಗಳು ರೌಡಿಶೀಟರ್ಸ್ ಗಳು ಲಾಬಿ ನಡೆಸಿ ರೌಡಿ ಪಟ್ಟಿಯಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರಾಜ್ಯಾದ್ಯಂತ ಬರೋಬ್ಬರಿ 26139 ರೌಡಿ ಶೀಟರ್ಸ್ ಗಳನ್ನ ರೌಡಿ ಪಟ್ಟಿಯಿಂದ ಕೈ ಬಿಡಲಾಗಿದೆ.  

ಇದನ್ನೂ ಓದಿ : ಇದು ಬಿಜೆಪಿ ಸರ್ಕಾರದ ವಿದಾಯದ ಬಜೆಟ್ ಆಗಿದೆ- ಸಚಿನ್ ಪೈಲೆಟ್

ಹಾಗಾದ್ರೆ ಯಾವ ವರ್ಷ ಎಷ್ಟು ಮಂದಿಯನ್ನು ರೌಡಿಪಟ್ಟಿಯಿಂದ ಕೈಬಿಡಲಾಗಿದೆ ಎಂಬದನ್ನು ನೋಡುವುದಾದರೆ

2018 - 3489 

2019 - 2195

2020 - 1718

2021 - 8062 

2022 - 3314

2023 - 7361

ಹೀಗೆ ಪ್ರತಿ ವರ್ಷ ಎರಡು ಮೂರು ಸಾವಿರದಷ್ಟು ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ. ಆದರೆ ಈ ವರ್ಷದ ಆರಂಭದಲ್ಲೇ ಅಂದರೆ ಒಂದೂವರೆ ತಿಂಗಳಲ್ಲಿ 7361 ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ 2023 ರಲ್ಲಿ ಬೆಂಗಳೂರು ನಗರದಲ್ಲಿ 17 ರೌಡಿಗಳನ್ನ ಪಟ್ಟಿಯಿಂದ ಕೈ ಬಿಡಲಾಗಿದೆ.  ರೌಡಿ ಪಟ್ಟಿಯಿಂದ ಹೆಸರು ತೆಗೆದವರಲ್ಲಿ ಯಾರು ಚುನಾವಣೆಗೆ ನಿಲ್ಲುತ್ತಾರೆ ಎಂದು  ಗೊತ್ತಿಲ್ಲ. ಯಾವುದೇ ಕ್ರಿಮಿನಲ್ ಆಕ್ಟಿವಿಟಿಯಲ್ಲಿ ಭಾಗಿಯಾಗದೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿದರೆ ಯಾರೂ ಬೇಡ ಎನ್ನುವುದಿಲ್ಲ. ಆದರೆ ಕಾನೂನು ದುರುಪಯೋಗಪಡಿಸಿಕೊಂಡು ಸಮಾಜ ಕಂಟಕರಾದರೆ ಕಷ್ಟವಾಗುತ್ತದೆ.

ಇದನ್ನೂ ಓದಿ : "ಸಿಎಂ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಂತೆ ಇದೆ"

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News