ಬೆಂಗಳೂರು ತೊರೆದ ವಿಜಯಲಕ್ಷ್ಮೀ… ಮನಸ್ಸಿನ ನೆಮ್ಮದಿ ಅರಸುತ್ತಾ ಈ ಸ್ಥಳಕ್ಕೆ ಹೊರಟ ದರ್ಶನ್ ಪತ್ನಿ!

Vijayalakshmi Darshan: ಕಳೆದ ಕೆಲ ದಿನಗಳಿಂದ ಪರ-ವಿರೋಧ ಹೇಳಿಕೆಗಳನ್ನು ಕೇಳಿ ಮನಸ್ಸಿನ ನೆಮ್ಮದಿ ಕಳೆದುಕೊಂಡಿರುವ ವಿಜಯಲಕ್ಷ್ಮೀ ಸದ್ಯ ಕೊಡಗಿಗೆ ತಮ್ಮ ಮಗನ ಜೊತೆ ತೆರಳಿದ್ದಾರೆ ಎಂದು ಹೇಳಲಾಗಿದೆ.

Written by - Bhavishya Shetty | Last Updated : Jun 29, 2024, 06:07 PM IST
    • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್
    • ವಿಜಯಲಕ್ಷ್ಮೀ ಮಗನೊಂದಿಗೆ ಕೊಡಗಿನ ಖಾಸಗಿ ರೆಸಾರ್ಟ್’ಗೆ ಶಿಫ್ಟ್!
    • ಆಪ್ತ ಮೂಲಗಳಿಂದ ಜೀ ಕನ್ನಡ ನ್ಯೂಸ್’ಗೆ ಮಾಹಿತಿ
ಬೆಂಗಳೂರು ತೊರೆದ ವಿಜಯಲಕ್ಷ್ಮೀ… ಮನಸ್ಸಿನ ನೆಮ್ಮದಿ ಅರಸುತ್ತಾ ಈ ಸ್ಥಳಕ್ಕೆ ಹೊರಟ ದರ್ಶನ್ ಪತ್ನಿ!  title=
File Photo

Vijayalakshmi Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಅವರನ್ನು ಬಿಡುಗಡೆ ಮಾಡಿಸಲೆಂದು ಪತ್ನಿ ವಿಜಯಲಕ್ಷ್ಮೀ ಹರಸಾಹಸಪಡುತ್ತಿದ್ದಾರೆ. ಆದರೆ ಈ ಬೆನ್ನಲ್ಲೇ ವಿಜಯಲಕ್ಷ್ಮೀಯವರು ಮಗನೊಂದಿಗೆ ಕೊಡಗಿನ ಖಾಸಗಿ ರೆಸಾರ್ಟ್’ಗೆ ಶಿಫ್ಟ್ ಆಗಿದ್ದಾರೆ ಎಂದು ಆಪ್ತ ಮೂಲಗಳಿಂದ ಜೀ ಕನ್ನಡ ನ್ಯೂಸ್’ಗೆ ಮಾಹಿತಿ ಲಭಿಸಿದೆ.

ಇದನ್ನೂ ಓದಿ: ಇವು ಭಗವಾನ್ ಶ್ರೀಕೃಷ್ಣನ ಅತ್ಯಂತ ಮೆಚ್ಚಿನ ರಾಶಿಗಳು: ಬೇಡಿದ ತಕ್ಷಣ ಅನಂತ ಸಿರಿ ಸಂಪತ್ತಿನ್ನೇ ಧಾರೆ ಎರೆಯುತ್ತಾನೆ ದೇವಕಿಸುತ

ಕಳೆದ ಕೆಲ ದಿನಗಳಿಂದ ಪರ-ವಿರೋಧ ಹೇಳಿಕೆಗಳನ್ನು ಕೇಳಿ ಮನಸ್ಸಿನ ನೆಮ್ಮದಿ ಕಳೆದುಕೊಂಡಿರುವ ವಿಜಯಲಕ್ಷ್ಮೀ ಸದ್ಯ ಕೊಡಗಿಗೆ ತಮ್ಮ ಮಗನ ಜೊತೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕೆಲ ದಿನಗಳ ಹಿಂದೆ ಪೋಸ್ಟ್ ಒಂದನ್ನು ಶೇರ್ ಮಾಡಿದ್ದ ವಿಜಯಲಕ್ಷ್ಮೀ, ʼನಿಮಗೆಲ್ಲ ಗೊತ್ತಿದೆ ಅಭಿಮಾನಿಗಳನ್ನ ದರ್ಶನ್ ಎಷ್ಟು ಪ್ರೀತಿ ಮಾಡುತ್ತಾರೆ ಅಂತ, ಇಂಥಹ ದುಃಖದ ಸಮಯದಲ್ಲಿ ನಾವು ಅವರಿಂದ ದೂರ ಇರುವಂತೆ ಆಗಿದೆ, ಹೊರಗಿನ ಪರಿಸ್ಥಿತಿ ಬಗ್ಗೆ ಅವರಿಗೆ ನಾನು ತಿಳಿಸಿದ್ದೀನಿ, ಅಭಿಮಾನಿಗಳನ್ನ ಶಾಂತವಾಗಿ ಇರುವಂತೆ ದರ್ಶನ್ ಕೇಳಿಕೊಂಡಿದ್ದಾರೆ. ನಿಮ್ಮ ಅಭಿಮಾನದ ಬಗ್ಗೆ ಕೇಳಿ ಭಾವುಕರಾಗಿದ್ದಾರೆ” ಎಂದು ತಿಳಿಸಿದ್ದರು.

ಇದನ್ನೂ ಓದಿ:  ರೋಹಿತ್ ಶರ್ಮಾಗೆ ಗೆಲುವಿನ ರಹಸ್ಯ ಹೇಳಿದ 1983 ವಿಶ್ವಕಪ್ ವಿಜೇತ ಆಟಗಾರ

ಅಷ್ಟೇ ಅಲ್ಲದೆ, “ನನಗೆ ಗೊತ್ತಿದೆ ಮುಂದೆ ನನ್ನ ಪತಿಗೆ ಒಳ್ಳೆಯ ದಿನಗಳು ಬರುತ್ತೆ. ಆದರೆ ತಾವು ಈ ಪ್ರಕರಣದಿಂದ‌ ಯಾವುದೇ ಉದ್ವೇಗಕ್ಕೆ‌‌ ಒಳಗಾಗಬೇಡಿ. ನಿಮ್ಮ ಶಾಂತ ಸ್ವಭಾವವೇ ನಮ್ಮ‌ ದೊಡ್ಡ ಶಕ್ತಿ. ಈ ಕೆಟ್ಟ ಘಳಿಗೆಯೂ ಹೋಗಲಿದೆ. ಸತ್ಯ ಮೇಲುಗೈ ಸಾಧಿಸಲಿದೆ” ಎಂದು ಅಭಿಮಾನಿಗಳಲ್ಲಿ ವಿಶೇಷ ಮನವಿಯೊಂದನ್ನು ಮಾಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

 

Trending News