ಬಹುನಿರೀಕ್ಷಿತ ʻಕಬ್ಜʼ ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಇಷ್ಟುದಿನ ಭರ್ಜರಿ ಪ್ರಚಾರ ಮಾಡಿದ ಸಿನಿತಂಡ ಇದೀಗ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ತೆರಳಿದ್ದಾರೆ. ನಾಳೆ ಸಿನಿಮಾ ಬಿಡುಗಡೆ ಹಿನ್ನೆಲೆ ಇಂದು ನಿರ್ದೇಶಕ ಆರ್.ಚಂದ್ರು, ನಟ ಉಪೇಂದ್ರ ಸೇರಿದಂತೆ ಕಬ್ಜ ಟೀಂ ತಿರುಪತಿಗೆ ತೆರಳಿದ್ದಾರೆ.
Kabzaa Movie : ಬಹು ನಿರೀಕ್ಷಿತ ಹೈ ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಚಿತ್ರ ಕಬ್ಜ ನಾಳೆ ಥಿಯೇಟರ್ಗಳಿಗೆ ಬರಲು ಸಿದ್ಧವಾಗಿದೆ. ಉಪೇಂದ್ರ, ಶ್ರಿಯಾ ಶರಣ್, ಕಿಚ್ಚ ಸುದೀಪ್, ಶಿವರಾಜ್ಕುಮಾರ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಹಲವಾರು ನಟರನ್ನು ಒಳಗೊಂಡಿರುವ ಈ ಚಿತ್ರವನ್ನು ಆರ್. ಚಂದ್ರು ಅವರು ನಿರ್ದೇಶಿಸಿದ್ಧಾರೆ.
Kabzaa Movie : 'ಕಬ್ಜ' ಸಿನಿಮಾ ಕ್ರಿಯೇಟ್ ಮಾಡಿರುವ ಕ್ರೇಜ್ ಅಷ್ಟಿಷ್ಟಲ್ಲ. ಮೂವರು ಸೂಪರ್ ಸ್ಟಾರ್ಗಳನ್ನು ಹಾಕಿಕೊಂಡು ಆರ್. ಚಂದ್ರು ಈ ಸಿನಿಮಾ ಮಾಡಿದ್ದಾರೆ. ಇನ್ನೇನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕಬ್ಜ ತೆರೆಮೇಲೆ ಅಬ್ಬರಿಸಿ ಬೊಬ್ಬಿರಿಯಲಿದೆ.
ನಿರ್ದೇಶಕ ಆರ್. ಚಂದ್ರು ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಅದೇನು ಅಕ್ಕರೆ.. ಅದೇನೋ ಪ್ರೀತಿ. ಚಂದ್ರು ಜೊತೆ ಶಿವರಾಜ್ಕುಮಾರ್ ಅವರು ಮೈಲಾರಿ ಸಿನಿಮಾ ಮಾಡಿದ್ದಾಗ ಅಪ್ಪುನೇ ದನಿಯಾಗಿದ್ರು.. ʼಮೈಲಾಪುರ ಮೈಲಾರಿʼ ಅಂತ ಕಂಠ ಕುಣಿಸಿ, ಆ ಹಾಡಿಗೊಂದು ಎನರ್ಜಿ ತುಂಬಿದ್ರು. ಕುಂತಲ್ಲೇ ಕುಣಿಸುವಂತಹ ಪವರ್ ತುಂಬಿದ್ರು. ಅಂದಿನಿಂದಲೂ ಆರ್.ಚಂದ್ರು ಮೇಕಿಂಗ್.. ತೆರೆಮೇಲೆ ಕಥೆ ಹೇಳುವ ಶೈಲಿ ಅಂದ್ರೆ ಅಪ್ಪುಗೆ ಅಚ್ಚುಮೆಚ್ಚು.
Kabzaa: ಲಕ್ಷ್ಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಮಗ ಅನೂಪ್, ಸುಮಾರು ಏಳು ವರ್ಷಗಳ ಗ್ಯಾಪ್ನ ಬಳಿಕ ಕಬ್ಜಚಿತ್ರದ ಮೂಲಕ ಅನೂಪ್ ರೀಎಂಟ್ರಿ ಕೊಡುತ್ತಿದ್ದಾರೆ.
Kabzaa Pre Release Event : ಕಬ್ಜ ಫೀವರ್ ಜೋರಾಗಿದೆ.. ಕರುನಾಡು ಮಾತ್ರವಲ್ಲ.. ಇಡೀ ದೇಶವನ್ನೇ ವ್ಯಾಪಿಸಿದೆ.. ಕನ್ನಡಿಗರಷ್ಟೇ ಅಲ್ಲ.. ತಮಿಳರು, ತೆಲುಗರು, ಹಿಂದಿಯವರು ಎಂಬ ಬೇಧವಿಲ್ಲದೆ ಎಲ್ಲಾ ಭಾಷಿಗರು ಒಂಟಿಗಾಲಲ್ಲಿ ನಿಂತು ಕಾಯ್ತಿರೋ ಸಿನಿಮಾ ಕಬ್ಜ..
Kabzaa pre release event : ಉಪೇಂದ್ರ, ಸುದೀಪ್ ಅಭಿನಯದ 'ಕಬ್ಜ' ಅಲೆ ಜೋರಾಗಿದೆ. ಬರೀ ಬೆಂಗಳೂರಿನಲ್ಲಷ್ಟೇ ಅಲ್ಲ, ದೂರದ ಮುಂಬೈನಲ್ಲೂ ಅರ್ಕೇಶ್ವರನದ್ದೇ ಆರ್ಭಟ. ಭಾರ್ಗವ್ ಭಕ್ಷಿಯದ್ದೇ ಹವಾ. ಆರ್. ಚಂದ್ರು ನಿರ್ಮಾಣದ, ನಿರ್ದೇಶನದ 'ಕಬ್ಜ' ಚಿತ್ರದ ಬಿಡುಗಡೆಗೆ ಇನ್ನೊಂದು ವಾರವಷ್ಟೇ ಉಳಿದಿದೆ.
ಕಬ್ಜ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ. ಈ ಹಿಂದೆ ಕೇವಲ ಕನ್ನಡದಲ್ಲಿ ಮಾತ್ರ ಚಿತ್ರಗಳನ್ನು ಮಾಡಿದ್ದ ಈ ಜೋಡಿ ಈ ಬಾರಿ ದೊಡ್ಡ ಮಟ್ಟದ ಯೋಜನೆಯೊಂದಿಗೆ ಅಖಾಡಕ್ಕೆ ಇಳಿದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತಯಾರಿಸಲಾಗಿದ್ದು, ರಿಚ್ ಆಗಿಯೇ ಚಿತ್ರವನ್ನು ನಿರ್ಮಿಸಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ಬಹುಮುಖ ಕಲಾವಿದರಿರುವುದು ಆಶ್ಚರ್ಯವೇನಲ್ಲ, ಎಲ್ಲ ನಟರು ತಮ್ಮ ಛಾಪನ್ನು ಮೂಡಿಸುತ್ತಲೇ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಲಾವಿದರು ನಟನೆಯ ಜೊತೆಗೆ ನಿರ್ದೇಶನವನ್ನು ಮಾಡುತ್ತಿರುವುದು ವಿಶೇಷವೇ. ಅಂತಹ ಕಲಾವಿದರು ಹಿಂದಿನಿಂಲೂ ನಮ್ಮ ಕನ್ನಡ ಸಿನಿರಂಗದಲ್ಲಿ ಅಚ್ಚಾಗಿ ಉಳಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.