ಇಂದು ಗಣಿನಾಡು ಬಳ್ಳಾರಿ ಜಿಲ್ಲೆಗೆ ನಮೋ ಎಂಟ್ರಿ. ಬಿಜೆಪಿ ಅಭ್ಯರ್ಥಿ ಪರ ಮತ ಬೇಟೆ ನಡೆಸಲಿರೋ ಮೋದಿ. ಜಿಲ್ಲೆಯ 5 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿ ಪರ ಮೋದಿ ಮತಬೇಟೆ. ಜಿಲ್ಲೆಯ ಮೀಸಲು ಕ್ಷೇತ್ರಗಳಲ್ಲಿ ಗರಿಗೆದರಿದ ಚುನಾವಣಾ ಕಾವು. ನಗರದ ಸತ್ಯಂ ಶಾಲೆ ಎದುರುಗಡೆ ಮೈದಾನದಲ್ಲಿ ಬಹಿರಂಗ ಸಭೆ. ಬಹಿರಂಗ ಸಭೆಯಲ್ಲಿ ಲಕ್ಷಾಂತರ ಜನ ಭಾಗಿಯಾಗುವ ಸಾಧ್ಯತೆ.
Karnataka Election 2023: ಈಗಾಗಲೇ ವಿಧಾನ ಸಭೆ ಚುನಾವಣೆಗೆ ರಾಜ್ಯವು ಸಜ್ಜಾಗಿದೆ. ಚುನಾವಣೆ ಹಿನ್ನಲೆ ಎಲ್ಲೆಡೆ ಪ್ರಚಾರದ ಅಬ್ಬರ ಜೋರಾಗಿದೆ. ಈ ನಿಟ್ಟಿನಲ್ಲಿ ಮಲೆನಾಡ ತವರೂರುರಾದ ಮೂಡಿಗೆರೆಯಲ್ಲಿ ಸಿಪಿಐ ಪಕ್ಷದಿಂದ ಅದ್ದೂರಿ ಸಮಾವೇಶ ಏರ್ಪಾಡಿಸಲಾಗಿತ್ತು..
Karnataka Election 2023 : ವಿಭಿನ್ನ ಪ್ರಧಾನಿಯಿದ್ದರೆ ಕಾಂಗ್ರೆಸ್ ಗೆ ಕಷ್ಟ. ವಿಭಿನ್ನವಾಗಿರುವ ಪ್ರಧಾನಿಗಳು ಇದ್ದಾಗ ಅವರಿಗೆ ಕಷ್ಟವಾಗುತ್ತೆ. ರಾಜ್ಯದ ಜನರು ಕಷ್ಟದಲ್ಲಿದ್ದಾಗ ನಮ್ಮ ಪ್ರಧಾನಿ ಅತಿ ಹೆಚ್ಚು ಪರಿಹಾರ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೇಸರಿ ರಣತಂತ್ರ. ಗಡಿಜಿಲ್ಲೆಯ ಅಖಾಡಕ್ಕೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟ್ರಿ. ಇಂದು ರಾಯಚೂರಲ್ಲಿ ಕಮಲ ಅಭ್ಯರ್ಥಿಗಳ ಪರ ಪವನ್ ಮತಶಿಕಾರಿ. ಪವನ್ ಕಲ್ಯಾಣ್, ಜನಸೇನಾ ಪಕ್ಷದ ಅಧ್ಯಕ್ಷ ಹಾಗೂ ತೆಲುಗು ಸ್ಟಾರ್ ನಟ. ರಾಯಚೂರು ಗ್ರಾಮೀಣ ಅಭ್ಯರ್ಥಿ ತಿಪ್ಪರಾಜ್ ಹವಾಲ್ದಾರ್ ಪರ ಪ್ರಚಾರ. ರಾಯಚೂರಿನ ಯಾಪಲದಿನ್ನಿ ಗ್ರಾಮದಲ್ಲಿ ಕೇಸರಿ ಪಡೆ ಬೃಹತ್ ಸಮಾವೇಶ.
Karnataka Election 2023 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ರಾಜ್ಯದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಇತ್ತ ಮತದಾರರು ಕೂಡ ತಾವು ಮತಚಲಾಯಿಸಲು ಸಿದ್ಧರಾಗಿದ್ದಾರೆ. ಈ ಚುನಾವಣಾ ಬಿಸಿಯ ನಡುವೆ ಚಂದನವನದ ನಟ - ನಟಿಯರು ಮತದಾನ ಮಾಡುವ ಕ್ಷೇತ್ರಗಳು ಯಾವವು ಎಂದು ನಾವು ನಿಮಗೆ ಹೇಳಲಿದ್ದೇವೆ.
Karnataka Election 2023 : ನೆಲಮಂಗಲಕ್ಕೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಅಭ್ಯರ್ಥಿ ಶ್ರೀನಿವಾಸಮೂರ್ತಿ ಪರ ಮತಯಾಚನೆ ಮಾಡಿದರು. ನೆಲಮಂಗಲ ವಿಧಾನಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಶ್ರೀನಿವಾಸಮೂರ್ತಿ ಪರ ಮತಬೇಟೆಯಾಡಿದರು. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು.
ಕೋಲಾರ ಕುರುಕ್ಷೇತ್ರ
ಚಿನ್ನದ ನಾಡು ಕೋಲಾರಿನಲ್ಲಿ ಆರು ಕ್ಷೇತ್ರಗಳಿದ್ದು, ಅದರಲ್ಲಿ ಶ್ರೀನಿವಾಸಪುರ,ಮುಳಬಾಗಿಲು ಮತ್ತು ಕೋಲಾರ ಹೈವೋಲ್ಟ್ ಕ್ಷೇತ್ರಗಳಾಗಿದ್ದರೆ, ಕೆಜಿಎಫ್ ಮಾಲೂರು ಮತ್ತು ಬಂಗಾರ ಪೇಟೆ ಕ್ಷೇತ್ರಗಳೂ ಕೂಡ ಸಾಕಷ್ಟು ಕುತೂಹಲ ಕೆರಳಿಸಿವೆ. ಅದರಲ್ಲಿ ಬಂಗಾರಪೇಟೆಯ SC ಮೀಸಲು ಕ್ಷೇತ್ರದಲ್ಲಿ ಸ್ಪೃಶ್ಯರದ್ದೇ ಮೇಲುಗೈ ಇದ್ದರೆ, ಮುಸ್ಲಿಂ ಬಾಹುಳ್ಯದ ಕೋಲಾರ ಕ್ಷೇತ್ರದಲ್ಲಿ ಯಾವುದೇ ಮುಸ್ಲಿಂ ಪ್ರಾತಿನಿಧ್ಯ ಇಲ್ಲ,ಇನ್ನೂ ಮಾಲೂರು ಕ್ಷೇತ್ರದಲ್ಲಿ ನಾಲ್ವರಲ್ಲಿ ಯಾರು ಗೆಲ್ಲಬಹುದು ಎಂದು ಹೇಳುವುದು ಈಗಲೇ ಕಷ್ಟ ಸಾಧ್ಯ ಇನ್ನೂ ಶ್ರೀನಿವಾಸಪುರದಲ್ಲಿ ರೆಡ್ಡಿ v/s ಸ್ವಾಮಿ ಕದನವಂತೂ ಚುನಾವಣೆಯನ್ನು ಕಾವೇರುವಂತೆ ಮಾಡಿದೆ.
ಕೋಲಾರ ಜಿಲ್ಲಾ ಕುರುಕ್ಷೇತ್ರ
ನಮ್ಮ ಸರ್ಕಾರ ದುಡಿಯುವ ವರ್ಗದ ಎಲ್ಲ ಸಮುದಾಯಗಳಿಗೆ ವಿದ್ಯಾನಿಧಿ ಕೊಡುತ್ತಿದ್ದೇದೆ. ಸ್ತ್ರೀ ಸಾಮರ್ಥ್ಯ ಯೋಜನೆ, ಯುವ ಶಕ್ತಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. 54 ಲಕ್ಷ ರೈತರಿಗೆ ವಿಮೆ ಯೋಜನೆಗಾಗಿ 180 ಕೋಟಿ ರೂ ಹಣ ಮೀಸಲಿಟ್ಟಿದ್ದೇನೆ. ಅಷ್ಟೆ ಅಲ್ಲದೆ, ಶಿಗ್ಗಾಂವ್ನಲ್ಲಿ ಟೆಕ್ಸ್ ಟೈಲ್ ಪಾರ್ಕ್ ಮೂಲಕ 10 ಸಾವಿರ ಯುವಕರಿಗೆ ಕೆಲಸ ಸಿಗುತ್ತದೆ. ಇದರ ಜೊತೆ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇವರ ಯೋಗ್ಯತೆಗೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಬಿಟ್ಟಿರಲಿಲ್ಲ. ಕಾಶಿ ಕಾರಿಡಾರ್ ಯೋಜನೆ ಮೋದಿ ಬಂದ ಮೇಲೆ ಆಗಿದ್ದು. ಅವನ್ಯಾರೋ ಆಂಜನೇಯ ಹುಟ್ಟಿದ್ದೇ ಇಲ್ಲಿ ಅಲ್ಲ ಅಂತಾನೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು, ಇಂದು ಆಂಜನೇಯನನ್ನು ಒಪ್ಪಿಕೊಳ್ಳುತ್ತಾರೆ. ತ್ರೇತಾಯುಗದಲ್ಲಿ ರಾವಣ ಭಜರಂಗಿಯನ್ನು ಕೆಣಕಿದ್ದ, ರಾವಣನ ಸರ್ವ ನಾಶವಾಯ್ತು, ಈಗ ಬಜರಂಗದಳವನ್ನು ಕೆಣಕಿ ಕಾಂಗ್ರೆಸ್ ರಾಜಕೀಯವಾಗಿ ನಾಶವಾಗುತ್ತದೆ ಎಂದು ಶಾಸಕ ಸಿ.ಟಿ. ರವಿ ಗುಡುಗಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.