Karnataka Exit poll 2023 : ಎಕ್ಸಿಟ್ ಪೋಲ್ ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲ. 5 ರಿಂದ 10% ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಒಂದೊಂದು ಸಂಸ್ಥೆ ಒಂದೊಂದು ರೀತಿ ತೋರಿಸುತ್ತಿದೆ, ಯಾವುದು ಸ್ಥಿರವಾಗಿಲ್ಲ. ನಮಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇದೆ. ಸಂಪೂರ್ಣ ಬಹುಮತ ಸಿಗುತ್ತದೆ ಎಂದು ವಿವಿಧ ಮಾಧ್ಯಮಗಳು ಮತ್ತು ಸಂಸ್ಥೆಗಳ ಎಕ್ಸಿಟ್ ಪೋಲ್ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದರು.
Kichcha Sudeep Voted: ಮತದಾನಕ್ಕೆ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ, ಮಗಳು ಸಾನ್ವಿ ಜೊತೆ ಕುಂಟುಂಬ ಸಮೇತರಾಗಿ ಆಗಮಿಸಿ ಜೆ.ಪಿ. ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ಪುತ್ರಿ ಸಾನ್ವಿ ಮೊದಲ ಮತದಾನ ಬಗ್ಗೆ ಮಾತನಾಡಿದ್ದಾರೆ.
Karnataka Election 2023: ಮತದಾನ ಮಾಡಲು ವೃದ್ದರು, ಮದುಮಕ್ಕಳು ಸೇರಿದಂತೆ ಮೊದಲ ಬಾರಿಗೆ ಮತದಾನ ಮಾಡಲು ಬಂದ ಯವಕರು ಕಥೆ ಒಂದೆಡೆಯಾದರೇ, ಮತದಾನಕ್ಕೆ ಬಂದ ಓರ್ವ ಮಹಿಳೆ ಮತಗಟ್ಟೆ ಆವರಣದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
Karnataka Assembly Elections 2023: ಮತದಾನ ಮುಗಿಯುವ ಒಂದೂವರೆ ಗಂಟೆ ಮುಂಚಿತವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ ಯಶ್ ತಮ್ಮ ಹಕ್ಕು ಚಲಾಯಿಸಿದರು. ಪತ್ನಿ ರಾಧಿಕಾ ಪಂಡಿತ್ ಬೇರೆ ಕೇಂದ್ರದಲ್ಲಿ ಮತದಾನ ಮಾಡಿದ್ದರಿಂದ ಯಶ್ ಒಬ್ಬರೇ ಬಂದು ವೋಟ್ ಮಾಡಿದರು.
Karanataka Election: ರಾಜ್ಯಾದಾದ್ಯಾಂತ ಮತದಾನ ಆರಂಭವಾಗಿ ಎಲ್ಲೆಡೆ ಮತದಾನದ ಸದ್ದು ಜೋರಾಗಿದೆ. ಇದೀಗ ಗೆಲುವಿನ ಗದ್ದುಗೆ ಏರಲು ಮತಗಟ್ಟೆಯ ಮುಂದೆ ವಾಮಾಚಾರ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
Karnataka elections: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಮತದಾನ ಮಾಡಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಹೆಲಿಕಾಪ್ಟರ್ನಲ್ಲಿ ಬಂದಿಳಿದಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಮಾಜಿ ಪ್ರಧಾನಿ ಹಾಗೂ ಅವರ ಪತ್ನಿ ಚನ್ನಮ್ಮ ಅವರೊಂದಿಗೆ ಮತದಾನ ಮಾಡಿದ್ದಾರೆ.
Karnataka Assembly Election : ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶೀರನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 216 ರಲ್ಲಿ ಮತದಾರರು ಮತ್ತು ಸಿಪಿಐ ಸದಲಗಿ ನಡುವೆ ತೀವ್ರ ವಾಗ್ವಾದ ನಡೆದಿದೆ.
Karnataka Vidhansabha Chunav Latest Updates : ಚುನಾವಣಾ ಅಧಿಕಾರಿಗಳ ಯಡವಟ್ಟಿನಿಂದಾಗಿ ಅಮೇರಿಕದಿಂದ ಮತ ಚಲಾಯಿಸಲು ಬಂದಿದ್ದ ವ್ಯಕ್ತಿಯೊಬ್ಬರು ನಿರಾಸೆಗೊಳಗಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ವ್ಯಕ್ತಿಯು ಸುಮಾರು 1.50 ಲಕ್ಷ ರೂ. ಖರ್ಚು ಮಾಡಿ ಮತ ಚಲಾಯಿಸಲು ಬಂದಿದ್ದರು.
Karnataka Elections: ರಾಜ್ಯದಲ್ಲಿ ಮತದಾನಕ್ಕೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹ ತೋರಿಸುತ್ತಿದ್ದಾರೆ. ಜನ ಸಾಮಾನ್ಯರ ಜೊತೆಯಲ್ಲಿ ರಾಜಕೀಯ ನಾಯಕರು ತಮ್ಮ ಮತಗಟ್ಟೆಗಳಿಗೆ ತೆರಳಿ ಕುಂಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ.
Karnataka Vidhansabha Chunav Latest Updates : ಇಂದು ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದ್ದು, ಜನರು ಮತಗಟ್ಟೆಗಳತ್ತ ಧಾವಿಸಿ ಮತ ಚಲಾಯಿಸುತ್ತಿದ್ದಾರೆ. 11 ಗಂಟೆಯ ಹೊತ್ತಿಗೆ ರಾಜ್ಯದಲ್ಲಿ ಶೇ.20.94 ರಷ್ಟು ಮತದಾನ ನಡೆದಿತ್ತು, ಇದೀಗ ಹೊಸದಾಗಿ ಮಾಹಿತಿ ಹೊರಬಿದ್ದಿದೆ. ಜಿಲ್ಲಾವಾರು ನಡೆದ ಮತದಾನದ ಪ್ರಮಾಣದ ಸಂಪೂರ್ಣ ವಿವರ ಇಲ್ಲಿದೆ.
Karnataka Vidhansabha Chunav Latest Updates : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮಸ್ಥರು ವಿವಿ ಪ್ಯಾಡ್ ಇವಿಎಂ, ವಿವಿಪ್ಯಾಟ್ ಅನ್ನು ಒಡೆದು ಹಾಕಿ ಪುಡಿ ಪುಡಿ ಮಾಡಿದ್ದಾರೆ. ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ.
ಬಿರುಸಿನ ಮತದಾನದ ನಡುವೆ ಕೈ ಕೊಟ್ಟ EVM. ಚಾಮರಾಜನಗರ ಮತಗಟ್ಟೆಯ ಇವಿಎಂನಲ್ಲಿ ದೋಷ. ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಘಟನೆ. ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ತಾಂತ್ರಿಕ ದೋಷ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣ. ಮತದಾರರು ಅರ್ಧ ಗಂಟೆ ಕಾದು ಕಾದು ಅಸಮಾಧಾನ. ಚಾಮರಾಜನಗರದ ಉಳಿದೆಲ್ಲೆಡೆ ಬಿರುಸಿನ ಮತದಾನ.
ಶಿಕಾರಿಪುರದಲ್ಲಿ ಮತದಾನ ಮಾಡುವ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ತಮ್ಮ ಮನೆ ದೇವರಾದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
ಬೆಂಗಳೂರಲ್ಲಿ ಸಚಿವ ಭೈರತಿ ಬಸವರಾಜ್ ಮತದಾನ. ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯಲ್ಲಿ ಮತದಾನ. ಪತ್ನಿ ಪದ್ಮವತಿಯೊಂದಿಗೆ ಆಗಮಿಸಿ ಸಚಿವರ ವೋಟಿಂಗ್. ಮತ ಚಲಾವಣೆಗೂ ಮುನ್ನ ಗೋಪೂಜೆ ಸಲ್ಲಿಕೆ. ಎಲ್ಲರೂ ಮತದಾನ ಮಾಡುವಂತೆ ಭೈರತಿ ಮನವಿ.
Karnataka Vidhansabha Chunav Latest Updates: ಕರ್ನಾಟಕ ವಿಧಾನಸಭಾ ಚುನಾವಣೆ 2023 ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದೆ, ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
Karnataka voting 2023: ಮತದಾನ ಎಂಬುವುದು ಪ್ರತಿಯೊಬ್ಬರ ಹಕ್ಕಾಗಿದೆ. ಈ ಕರ್ತವ್ಯನ್ನು ಜನಸಾಮಾನ್ಯರು ಸೇರಿದಂತೆ ಎಲ್ಲೂರು ಪಾಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಯಾಂಡಲ್ವುಡ್ ಸಿನಿ ತಾರೆಯರು ತಮ್ಮ ಮತಗಟ್ಟಗಳಿಗೆ ತೆರಳಿ ವೋಟ್ ಹಾಕಿದ್ದಾರೆ.
Karnataka Assembly Election : ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆದವರು ಹುರುಪಿನಿಂದ ಬಂದು ಮತದಾನ ಮಾಡುತ್ತಿದ್ದರೆ, ಹಣ್ಣು ಹಣ್ಣು ಮುದುಕಿಯರು ಕೂಡಾ ಅಷ್ಟೇ ಸಂಭ್ರಮದಿಂದ ಹಕ್ಕು ಚಲಾಯಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.