Uttar Pradesh Crime:ಕೊಲೆ ಮಾಡಿರುವುದಾಗಿ ವ್ಯಕ್ತಿಯೊಬ್ಬತಪ್ಪೊಪ್ಪಿಕೊಂಡ ವಿಡಿಯೋ ವೈರಲ್ ಆದ ಒಂದು ದಿನದ ನಂತರ, ಮನ್ಸೂರ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾ ಗ್ರಾಮದ ಆತನ ಮನೆಯ ನೆಲದಲ್ಲಿ ಹೂತಿಟ್ಟಿದ್ದ ಅಸ್ಥಿಪಂಜರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಾಲಾ ಶಿಕ್ಷಕರ ನಿರ್ಲಕ್ಷ್ಯದಿಂದ ಮಗನ ಸಾವಾಗಿದೆ ಶಾಲೆಯವರು ಆತ ಕಾಪಿ ಹೊಡೆದು ಸಿಕ್ಕಾಕಿಕೊಂಡ ತಕ್ಷಣ ಪೋಷಕರಿಗೆ ಹೇಳಬಹುದಿತ್ತು. ಸೆಕ್ಯೂರಿಟಿ ಗಾರ್ಡ್ ಹೊರಬಿಡಬಾರದಿತ್ತು. ತಡವಾಗಿ ಕರೆ ಮಾಡಿ ಮಾಹಿತಿ ನೀಡಿದ್ದರು.
ಐಡಿಬಿಐ ಬ್ಯಾಂಕ್ ನಲ್ಲಿ ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಚಿನ್ನದ ಸಾಲ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಎಂಬುವವರೂ ಸೇರಿದಂತೆ ಒಟ್ಟು 18 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಹೊರ ರಾಜ್ಯದ ಐನಾತಿಗಳು ಸದ್ದಿಲ್ಲದೇ ಬಾಲ ಬಿಚ್ಚಿದ್ದು, ಸಿಕ್ಕಸಿಕ್ಕ ಕಡೆ ವಿವಿಧ ಬಗೆಯಲ್ಲಿ ಅಪರಾಧ ಕೃತ್ಯ ಎಸಗುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ಮೂಲದ ಗ್ಯಾಂಗ್ವೊಂದು ಬ್ಯಾಂಕ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿದ್ದು, ಲಕ್ಷ ಲಕ್ಷ ಹಣ ಡ್ರಾ ಮಾಡಿಕೊಂಡು ಬರೋರಿಂದ ಹಣ ಪೀಕುತ್ತಿದೆ.
ಸಂದೀಪಗೌಡ ಮೂಲತಃ ಬೆಂಗಳೂರ ನಿವಾಸಿ. ಹುಬ್ಬಳ್ಳಿಯ ಮನೋಜ್ ಪಾರ್ಕ್ ಬಳಿ ಇರೋ ಜಿಯೋ ಮಾರ್ಟ್ ನಲ್ಲಿ ಕೆಲಸಕ್ಕೆ ಸೇರಿದ್ದ. ತಾನು ಕೆಲಸ ಮಾಡುವ ಜಿಯೋ ಮಾರ್ಟ್ ನಲ್ಲಿಯೇ 6 ಲಕ್ಷ ಕಳ್ಳತನ ಮಾಡಿದ್ದ. ಕಳ್ಳತನ ಮಾಡೋ ಉದ್ದೇಶದಿಂದಲೇ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ.
ಮರ್ಮಾಂಗ ಕತ್ತರಿಸಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಚಂದ್ರಶೇಖರ್ ಕೊಲೆಯಾದ ವ್ಯಕ್ತಿ. ಮೃತ ಚಂದ್ರಶೇಖರ್ ಯಲಹಂಕದ ಕೊಂಡಪ್ಪ ಲೇಔಟ್ನಲ್ಲಿ ವಾಸವಾಗಿದ್ದರು. ಮನೆಯ ಟೆರಸ್ನಲ್ಲಿ ಹತ್ಯೆ ನಡೆದಿದ್ದು, ಮೊದಲು ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಲಾಗಿದೆ.
ಈತನ ಮೇಲೆ ಬರೋಬ್ಬರಿ ಐವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಪೀಣ್ಯ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಆರೋಪಿ ಜಾನ್ ವಿರುದ್ಧ ಪ್ರಕರಣಗಳು ದಾಖಲಾಗಿವೆ.
KPTCL illegal recruitment case : ಕೆಪಿಟಿಸಿಎಲ್ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನ ಬಂಧಿಸಿದ ಪೊಲೀಸರು, ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದು ಬಂಧಿತರ ಸಂಖ್ಯೆ ಇಪ್ಪತ್ತೆರಡಕ್ಕೆ ಏರಿಕೆಯಾಗಿದೆ.
ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 1ರ ರಾತ್ರಿ ಸುಮಾರು 9.30 ರಿಂದ 10 ಗಂಟೆ ಸಂದರ್ಭದಲ್ಲಿ ಶಮಿ ಎದೆಗೆ ಹಾಕಿದ ಚಾಕು ಸಮೇತ ಮಾಳೂರು ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಸಿಸಿ ಕ್ಯಾಮರದಲ್ಲಿ ಇದರ ದೃಶ್ಯಗಳು ಸೆರೆಯಾಗಿವೆ. ಪೊಲೀಸ್ ಠಾಣೆ ಗೇಟ್ ಆಗಮಿಸುತ್ತಿದ್ದಂತೆ ಆತನಿಗೆ ಪ್ರಜ್ಞೆ ತಪ್ಪಿದೆ. ತಕ್ಷಣವೇ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಪಿ ವಿಘ್ನೇಶ್ (24) ಮತ್ತು ಆರೋಪಿ ಎಸ್ ಧರ್ಮರಾಜ್ ಎಂದು ಗುರುತಿಸಲಾಗಿದೆ. ಇಬ್ಬರೂ ಕ್ರಿಕೆಟ್ ಅಭಿಮಾನಿಗಳು. ಅರಿಯಾಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರಾಗಿದ್ದಾರೆ. ಐಟಿಐ ಮುಗಿಸಿದ್ದ ವಿಘ್ನೇಶ್ ಸಿಂಗಾಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಸದಾ ಕಾಲ ಮನೆ ಬಿಟ್ಟು ಬೀದಿ ತಿರುಗುತ್ತಿದ್ದ. ಎಷ್ಟು ಬೇಡ ಅಂದ್ರು ಕೇಳದೆ ರಾತ್ರಿಯಲ್ಲಾ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು ಮನೆನೇ ಸೇರ್ತಾ ಇರಲಿಲ್ಲಾ. ಹೀಗೆ ಊರೂರು ತಿರುಗುತ್ತಿದ್ದವನು ಬೀದಿ ಹೆಣವಾಗಿದ್ದಾನೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಗೋಬಿ ಮಂಚೂರಿ ವಿಚಾರಕ್ಕೆ ಅಜ್ಜಿಯನ್ನು ಕೊಲೆ ಮಾಡಿದ ಮೊಮ್ಮಗ ಮತ್ತು ಆತನ ತಾಯಿ ಸೇರಿ ಒಟ್ಟು ಮೂವರನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು 5 ವರ್ಷಗಳ ನಂತರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Hotel Room MMS: ಇತ್ತೀಚಿಗೆ ಹೋಟೆಲ್ ರೂಮ್ ಗಳಿಗೆ ಭೇಟಿ ನೀಡುವವರಲ್ಲಿ ಎಂಎಂಎಸ್ ಭಯ ಹೆಚ್ಚಾಗುತ್ತಿದೆ. ಏಕೆಂದರೆ ಹೋಟೆಲ್ ರೂಮ್ ಗಳಲ್ಲಿ ಕ್ಯಾಮರಾ ಅಡಗಿಸಿಟ್ಟು, ಎಂಎಂಎಸ್ ತಯಾರಿಸಿ ವೈರಲ್ ಮಾಡಲಾಗುತ್ತದೆ. ಇಂತಹ ಘಟನೆ ನಿಮ್ಮ ಜೊತೆಗೆ ನಡೆಯಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂದು ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ನಿಮ್ಮನ್ನು ಹಿಡನ್ ಕ್ಯಾಮಾರಾ ಕಣ್ಣುಗಳಿಂದ ರಕ್ಷಿಸುತ್ತವೆ.
ಉಳಿದುಕೊಳ್ಳಲು ಮನೆ ಕೂಡ ಇರದ ದಂಪತಿ ಮಾಡ್ತಿದ್ದಿದ್ದು ರಾಬರಿ. ಈ ಹಿಂದೆ ಓಲಾ ಕಾರು ಚಾಲಕನಿಗೆ ಹಣ ನೀಡಿ ಸುತ್ತಾಡಿಸಲು ಹೇಳಿದ್ದ ನಂತರ ಇಬ್ಬರ ನಡುವೆ ಒಂದೇ ದಿನ ಆಪ್ತತೆ ಬೆಳೆದಿತ್ತು. ಮುಂದೆ...
ಕೇಂದ್ರ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ರಾಜಾಜಿನಗರ, ನಂದಿನಿ ಲೇಔಟ್ , ಜೆ.ಜೆ.ನಗರ, ಉಪ್ಪಾರಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ದಾಖಲಾಗಿದ್ದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.