ಪ್ರಕರಣದ ಪ್ರಮುಖ ಆರೋಪಿಯಾಗಿರೋ ನಾಜಿರ್ ಪೊಲೀಸರ ಮುಂದೆ ಬ್ಲಾಸ್ಟ್ ಆಗಲಿ, ಗ್ರೆನೇಡ್ ಹಾಗೂ ಗನ್ ಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನೂ ಯಾವುದೇ ಬ್ಲಾಸ್ಟ್ ಬಗ್ಗೆ ಕೂಡ ಮಾತನಾಡಿಲ್ಲ. ಸರ್ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ಜೈಲಿನಿಂದ ಹೊರಬಂದು ಒಳ್ಳೆಯವನಾಗಿ ಬದುಕಬೇಕು ಅಂದುಕೊಂಡಿದ್ದೇನೆ ಎಂದು ವರಸೆ ಬದಲಾಯಿಸಿದ್ದಾನೆ.
Crime News in Kannada: ಮನೆಯ ಬಾಗಿಲನ್ನು ಕಬ್ಬಿಣದ ರಾಡ್ ನಿಂದ ಮುರಿದು ಕಳ್ಳತನ ಮಾಡುತ್ತಿದ್ದ ಮಾಮನಿಯಿಂದ ಬರೊಬ್ಬರಿ ರೂ.29 ಲಕ್ಷ ಮೌಲ್ಯದ 512 ಗ್ರಾಂ ಚಿನ್ನಾಭರಣ ಸೀಜ್ ಮಾಡಲಾಗಿದೆ.
ಕೃಷ್ಣಾ ನದಿಗೆ ಹಾರಿ ವ್ಯಕ್ತಿ ಆತ್ಮಕತ್ಯೆಗೆ ಯತ್ನ. ನರಸಣ್ಣ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇಂದು ಕೂಡ ಮುಂದುವರೆದ ನರಸಣ್ಣ ಶೋಧ ಕಾರ್ಯ. ಕರ್ನಾಟಕ ತೆಲಂಗಾಣ ಸಿಬ್ಬಂದಿಯಿಂದ ಶೋಧ ಕಾರ್ಯ.
Railway Protection Force: ಚೇತನ್ ಸಿಂಗ್ ತನ್ನ ಹಿರಿಯ ಸಹೋದ್ಯೋಗಿ, ಆರ್ಪಿಎಫ್ ಸಬ್ ಇನ್ಸ್ ಪೆಕ್ಟರ್ ಟಿಕಾರಾಮ್ ಮೀನಾ ಮತ್ತು ಮೂವರು ಪ್ರಯಾಣಿಕರಿಗೆ ಗುಂಡಿಕ್ಕಿ ಕೊಂದಿದ್ದಾನೆ.
ಹಣಕ್ಕಾಗಿ ಏನೆಲ್ಲಾ ಕೆಲಸ ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಈ ಕಥೆಯಲ್ಲಿ ಕಂಪ್ಲೈಂಟ್ ಕೊಟ್ಟವನದೇ ಕಥೆ-ಚಿತ್ರಕಥೆ ನಿರ್ದೇಶನ. ಸಿನಿಮಾ ಶೈಲಿಯಲ್ಲಿ ಪ್ಲಾನ್ ಮಾಡಿ 20 ದಿನ ಅಪ್ರಾಪ್ತರಿಗೆ ತರಬೇತಿ ನೀಡಿದ್ದ ಕಿಲಾಡಿ ಈಗ ಅಂದರ್ ಆಗಿದ್ದಾನೆ. ಇನ್ಶೂರೆನ್ ಹಣ ಕ್ಲೈಮ್ ಮಾಡಿಕೊಳ್ಳಲು ಪಕ್ಕ ಪ್ಲಾನ್ ಮಾಡಿ ಬೈಕ್ ನಲ್ಲಿ ಹೋಗುವಾಗ ಸುಲಿಗೆಕೋರರು 4 ಕೋಟಿ ಮೌಲ್ಯದ 3.780 ಕೆ.ಜಿ. ಚಿನ್ನ ದೋಚಿದ್ದಾರೆ ಎಂದು ಸುಳ್ಳು ದೂರು ನೀಡಿದ್ದ ಜ್ಯೂವೆಲ್ಲರಿ ಶಾಪ್ ಮಾಲೀಕನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಲು ಬಳಸಿಕೊಂಡಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Crime News : ಅವರಿಬ್ಬರು ಫ್ಯಾಮಿಲಿ ಬಿಟ್ಟು ಬಂದು ಬೆಂಗಳೂರಿನಲ್ಲಿ ಕೋಳಿ ಅಂಗಡಿಯೊಂದ್ರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಕೊಟ್ಟು ಸಂಬಳ ಕೊಡುತ್ತಿದ್ದ ಮಾಲೀಕ ರೂಮ್ ಕೊಟ್ಟು ನೋಡ್ಕೋತಿದ್ದ.. ಅದೇ ರೂಮಿನಲ್ಲಿ ಈಗ ಕೊಲೆಯಾಗಿದೆ.
ವಶಪಡಿಸಿಕೊಂಡ ಡ್ರಗ್ ನಲ್ಲಿ 1,723 ಕೆ.ಜಿ. ಅಫೀಮು, 55,895 ಕೆ.ಜಿ. ಹೆರಾಯಿನ್, 40 ಗ್ರಾಂ ಹಾಶಿಶ್ ಆಯಿಲ್, 1.026 ಕೆ.ಜಿ. ಚರಸ್, 467 ಗ್ರಾಂ, ಸೇರಿದಂತೆ 572 ವಿವಿಧ ರೀತಿಯ ಮಾತ್ರೆಗಳು 43 ಎಲ್ ಎಸ್ ಡಿ ಸ್ಟಿಪ್ಸ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
Arasinagundi Falls: ಕೊಲ್ಲೂರಿನ ಅರಿಶಿನಗುಂಡಿ ಜಲಪಾತ ವೀಕ್ಷಿಸಲು ಸ್ನೇಹಿತನೊಂದಿಗೆ ಹೋಗಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
Cyber Crime In Bengaluru: 2017ರಲ್ಲಿ 2,742 ಪ್ರಕರಣಗಳು ದಾಖಲಾದರೆ, 2018ರಲ್ಲಿ 5,252, 2019ರಲ್ಲಿ ದಾಖಲೆಯ 10,553 ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ 9,940 ಕೇಸ್ ದಾಖಲಾದರೆ, 2023 ಜೂನ್ ಅಂತ್ಯದವರೆಗೆ ನಗರದಲ್ಲಿ 6,226 ಪ್ರಕರಣಗಳು ರಿಜಿಸ್ಟರ್ ಆಗಿವೆ.
Crime News : ರಾಮನಗರದಲ್ಲಿ ತಂದೆಯ ಲೈಂಗಿಕ ದೌರ್ಜನ್ಯದಿಂದ ಬೇಸೊತ್ತಿದ್ದ ಬಾಲಕಿ ತನ್ನ ಪ್ರೀತಿಯ ಶಿಕ್ಷಕಿಯ ಮುಂದೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಇದೀಗ ಅವರ ಮಾರ್ಗದರ್ಶನದಿಂದ ಬಾಲಕಿ ದೂರು ನೀಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾರಾಟ ಮಾಡಿದ ದಂಪತಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿಗಳು ಫೋಟೋಗೆ 500 ರೂಪಾಯಿ ಮತ್ತು ವೀಡಿಯೊಗೆ 1500 ರೂಪಾಯಿಗಳವರೆಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.