ಕಸ ಆಯುವವನ ಯಡವಟ್ಟಿಗೆ ಬೆಚ್ಚಿಬಿತ್ತು ರಾಜಧಾನಿ..! ʼಬಾಕ್ಸ್‌ ಅವಾಂತರಕ್ಕೆʼ ಖಾಕಿ ಶಾಕ್‌

ಅಲ್ಲೊಬ್ಬ ಕಸ ಆಯುವ ವ್ಯಕ್ತಿ ಅತ್ತಿಂದಿತ್ತ.. ಓಡಾಡ್ತಿದ್ದ.. ಒಂದೇ ಒಂದು ಕ್ಷಣ ಅಷ್ಟೇ ಬ್ಯುಸಿಯಾಗಿದ್ದ ಏರಿಯಾವನ್ನೆ ಬೆಚ್ಚಿ ಬೀಳುವಂತೆ ಮಾಡಿಬಿಟ್ಟಿದ್ದ. ಆತನ ಕೆಲಸಕ್ಕೆ ಪೊಲೀಸರ ದಂಡೆ ಬಂದುಬಿಟ್ಟಿತ್ತು.. ಬಾಂಬ್ ನಿಷ್ಕ್ರಿಯ ದಳ ಕೂಡ ಓಡೋಡಿ ಬಂದಿತ್ತು.. ಹಾಗಾದ್ರೆ ಅಲ್ಲಾಗಿದ್ದಾದ್ರು ಏನು..? ಬನ್ನಿ ನೋಡೋಣ..

Written by - VISHWANATH HARIHARA | Edited by - Krishna N K | Last Updated : Feb 14, 2024, 05:55 PM IST
  • ಕಸ ಆಯುವ ವ್ಯಕ್ತಿಯ ಆಟಕ್ಕೆ ಏರಿಯಾನೇ ತಬ್ಬಿಬ್ಬು..!
  • ಖಾಲಿ ಬಾಕ್ಸ್ ಇಟ್ಟು ಆತಂಕ ಸೃಷ್ಟಿಸಿದ್ದ ಆಸಾಮಿ.
  • ಆತನ ಕೆಲಸಕ್ಕೆ ಪೊಲೀಸರ ದಂಡೆ ಬಂದುಬಿಟ್ಟಿತ್ತು..
ಕಸ ಆಯುವವನ ಯಡವಟ್ಟಿಗೆ ಬೆಚ್ಚಿಬಿತ್ತು ರಾಜಧಾನಿ..! ʼಬಾಕ್ಸ್‌ ಅವಾಂತರಕ್ಕೆʼ ಖಾಕಿ ಶಾಕ್‌ title=

ಬೆಂಗಳೂರು : ಫುಟ್ಪಾತ್ ಮೇಲೆ ಬಿದ್ದಿದ್ದ ಬಾಕ್ಸ್‌ಗಳ ಸುತ್ತಲು ನೆರೆದಿರುವ ಜನರ ಮನಸ್ಸಲ್ಲಿ ಹಲವು ಅಲೋಚನೆ ಮೂಡುವಂತೆ ಮಾಡಿತ್ತು.. ಇದ್ರಲ್ಲಿ ಹಣ ಇದ್ಯೋ ಅನ್ನೋ ಕುತೂಹಲದ ಜೊತೆಗೆ ಬಾಂಬ್ ಏನದ್ರು ಇದ್ಯಾ ಗುರುವೆ ಅನ್ನೋ ಭಯ ಹುಟ್ಟಾಕಿತ್ತು... ಕೊನೆಗೆ ಓಪನ್ ಮಾಡಿದಾಗ್ಲೇ ಅದರ ರಹಸ್ಯ ಬಯಲಾಗಿತ್ತು.. ಈ ಕುರಿತು ಇಂಟ್ರಸ್ಟಿಂಗ್‌ ವರದಿ ಇಲ್ಲಿದೆ..

ಹೌದು.. ರಾಜಧಾನಿಯ ಜೆಸಿ ರಸ್ತೆ ಸದಾ ವ್ಯಾಪಾರ ವಹಿವಾಟು ಅಂತಾ ಗಿಜುಗುಡುವ ಏರಿಯಾ. ಜನ ತಮ್ಮ ತಮ್ಮ ಕೆಲಸದಲ್ಲಿ ಸದಾ ಬ್ಯುಸಿಯಾಗಿರ್ತಾರೆ... ಆದ್ರೆ ಇದೇ ಸೋಮವಾರ ಅಂದ್ರೆ ಫೆಬ್ರವರಿ 12 ರ ಬೆಳಗ್ಗೆ 8.30 ರ ಸಮಯ.. ಮಿನರ್ವ ಸರ್ಕಲ್ ಹತ್ತಿರ ಇರುವ ಕೊಟಾಕ್ ಮಹೀಂದ್ರ ಬ್ಯಾಂಕ್ ಎಟಿಎಂ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಫುಟ್ಪಾತ್ ಮೇಲೆ ಎರಡ್ಮೂರು ಬಾಕ್ಸ್ ಗಳು ಕಂಡಿವೆ ಹತ್ತಿರ ಹೋಗಿ‌ ನೋಡಿದಾಗ ಇದೊಂದು ಎಟಿಎಂ ಮಷಿನ್ ನಲ್ಲಿ ಹಣ ತುಂಬುವ ಬಾಕ್ಸ್ ಅನ್ನೋದು ಗೊತ್ತಾಗಿದೆ..

ಇದನ್ನೂ ಓದಿ:ಫೆ.26, 27 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದ‌.. ಓಡೋಡಿ ಬಂದ ಕಲಾಸಿಪಾಳ್ಯ ಪೊಲೀಸರ ತಲೆಯಲ್ಲಿ ಹಲವು ಆಲೋಚನೆಗಳೆ ಮೂಡಿತ್ತು.. ಎಟಿಎಂ ಏನಾದ್ರು ರಾಬರಿ ಆಗಿದ್ಯಾ ಅನ್ನೋ ಅನುಮಾನ ಶುರುವಾಗಿತ್ತು.. ಹಾಗಾಗಿ ಅಕ್ಕಪಕ್ಕದ ಎಟಿಎಂ ಸೇರಿದಂತೆ ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸಿದ್ರು.. ಅಷ್ಟೇ ಅಲ್ಲ ಇದ್ರಲ್ಲಿ ಬಾಂಬ್ ನಂತಹ ಸ್ಫೋಟಕ‌ ವಸ್ತು ಏನಾದ್ರು ಇಟ್ಟಿರಬಹುದಾ ಅನ್ನೋ ಸಂಶಯ ಕೂಡ ಮೂಡಿತ್ತು.. ಹಾಗಾಗಿ ಬಾಂಬ್ ಸ್ಕ್ವಾಡ್ ಕರೆಸಿ ಪರಿಶೀಲಿಸಿದ್ರು.‌ ಬಾಕ್ಸ್ ಓಪನ್ ಮಾಡಿದಾಗ ಇದೊಂದು ಖಾಲಿ ಬಾಕ್ಸ್ ಅನ್ನೋದು ಗೊತ್ತಾಗಿ‌ ನಿಟ್ಟುಸಿರು ಬಿಟ್ಟಿದ್ರು.

ತಕ್ಷಣಕ್ಕೆ ಅಕ್ಕ ಪಕ್ಕ ಅಂಗಡಿಗಳ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ..ಈ ವೇಳೆ ಕಾಸ ಆಯುವ ವ್ಯಕ್ತಿ ಅದೇ ಖಾಲಿ ಎಟಿಎಂ ಬಾಕ್ಸ್ ಹಿಡಿದುಕೊಂಡು ಓಡಾಡಿದ್ದು ಗೊತ್ತಾಗಿದೆ. ತಕ್ಷಣಕ್ಕೆ ಅಲರ್ಟ್ ಆದ ಕಲಾಸಿಪಾಳ್ಯ ಪೊಲೀಸರು ಖಾಲಿ ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಂಡು ಎಫ್ಐಆರ್ ದಾಖಲಿಸಿ ತನಿಖೆ ನಡೆಸ್ತಿದ್ದಾರೆ. ಆ ಎಟಿಎಂ ಬಾಕ್ಸ್ ಬಂದಿದ್ದಾದರು ಎಲ್ಲಿಂದ ಅನ್ನೋ ಪ್ರಶ್ನೆ ಸದ್ಯಕ್ಕೆ ಹುಟ್ಟಿಕೊಂಡಿದೆ. ಅದೇನೇ ಹೇಳಿ ಕಾಸ ಆಯುವ ವ್ಯಕ್ತಿಯ ಯಡವಟ್ಟಿಗೆ ಕಲಾಸಿಪಾಳ್ಯ ಪೊಲೀಸರೇ ತಲೆ ಕೆಡಿಸಿಕೊಂಡಿದ್ದಂತು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News