/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಅರುಣ್ ಜೈಟ್ಲಿಯವರ ನಿಧನದಿಂದಾಗಿ ಕೇವಲ ಬಿಜೆಪಿಗೆ ಅಷ್ಟೇ ಅಲ್ಲದೆ ಇಡೀ ದೇಶಕ್ಕೆ ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡ ಹಾಗಾಗಿದೆ. ಮೋದಿ ನೇತೃತ್ವದ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅರುಣ್ ಜೈಟ್ಲಿ ಹಲವಾರು ಕ್ರಾಂತ್ರಿಕಾರಕ  ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು.

ಹಲವಾರು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಬಳಸುತ್ತಿದ್ದ ಅವರು ಇಂದು ನಿಧನರಾದರೆಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ಪ್ರಕಟಿಸಿದೆ. 

ಜಿಎಸ್ಟಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಸುಧಾರಣೆಗಳಲ್ಲಿ ಒಂದಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಜೇಟ್ಲಿ ಅವರ ಅಡಿಯಲ್ಲಿ ಹಣಕಾಸು ಸಚಿವರಾಗಿ ಪರಿಚಯಿಸಲಾಯಿತು. ಜಿಎಸ್‌ಟಿಯ ಈ ಕ್ರಮವು ಸುಮಾರು ಎರಡು ದಶಕಗಳಿಂದ ಸಾಕಷ್ಟು ಚರ್ಚೆಯಲ್ಲಿತ್ತು, ಆದರೆ ಜೈಟ್ಲಿಯವರು ಹಣಕಾಸು ಸಚಿವರಾಗಿ ಪರಿಚಯಿಸಿದ್ದ ಈ ಐತಿಹಾಸಿಕ ತೆರಿಗೆ ಸುಧಾರಣೆಯು ಬದಲಾವಣೆ ತರಬಲ್ಲದು ಎಂದು ಸ್ಪಷ್ಟಪಡಿಸಿದ್ದರು.

ಬ್ಯಾಂಕುಗಳ ಬಲವರ್ಧನೆ:  ದೇಶದಲ್ಲಿ ಕ್ಷೀಣಿಸುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸಲು ಬ್ಯಾಂಕುಗಳ ಬಲವರ್ಧನೆಯ ವಿಷಯವು ಮಾಜಿ ಹಣಕಾಸು ಸಚಿವ ಜೇಟ್ಲಿ ಪ್ರಾರಂಭಿಸಿದ ಪ್ರಮುಖ ಸುಧಾರಣೆಯಾಗಿದೆ. ಈ ಉದ್ದೇಶಕ್ಕಾಗಿ 2017 ರಲ್ಲಿ ಅವರ ಅಡಿಯಲ್ಲಿ  ಮಂತ್ರಿಗಳ ಗುಂಪನ್ನು ರಚಿಸಲಾಯಿತು. 2020-21ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಪ್ರಮುಖ ಸುತ್ತಿನ ಬ್ಯಾಂಕ್ ಬಲವರ್ಧನೆ ನಡೆಯಲಿದೆ ಎಂದು ವರದಿಯಾಗಿದೆ.

ಎಫ್‌ಡಿಐ: ಹಣಕಾಸು ಸಚಿವರಾಗಿ, ಭಾರತದಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಜೇಟ್ಲಿ ಮಹತ್ವದ ಪಾತ್ರ ವಹಿಸಿದರು. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಹೂಡಿಕೆ ಅವಕಾಶಗಳಿಗೆ ಬಾಗಿಲು ತೆರೆಯಲಾಯಿತು, ಇದರಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಲಿವೆ ಎನ್ನಲಾಗಿದೆ.

ರೈಲು ಬಜೆಟ್:  ಕೇಂದ್ರ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ, ಜೇಟ್ಲಿ ಪ್ರತ್ಯೇಕ ರೈಲು ಬಜೆಟ್ ಮಂಡಿಸುವ ನಿಯಮವನ್ನು ಮುರಿದು ಸಾಮಾನ್ಯ ಬಜೆಟ್ ವಿಲೀನಗೊಳಿಸಿದರು.

ಕೇಂದ್ರ ಬಜೆಟ್ ದಿನಾಂಕದ ಬದಲಾವಣೆ:  2016 ರವರೆಗೆ ಕೇಂದ್ರ ಬಜೆಟ್ ಅನ್ನು ದೇಶದ ಹಣಕಾಸು ಸಚಿವರು ಫೆಬ್ರವರಿ ಕೊನೆಯ ಕೆಲಸದ ದಿನದಂದು ಮಂಡಿಸಿದರು. ಆ ಮೂಲಕ ಸಾಮಾನ್ಯವಾಗಿ ಫೆಬ್ರುವರಿ ಮೊದಲ ವಾರದಲ್ಲಿ ಮಂಡಿಸುತ್ತಿದ್ದ ಸಂಪ್ರದಾಯಕ್ಕೆ ಕೊನೆ ಹಾಡಿದರು.

ಜನ ಧನ್ ಯೋಜನೆ: ಹಣಕಾಸು ಸಚಿವರಾಗಿ ಅರುಣ್ ಜೇಟ್ಲಿ ಅವರು ಜನ ಧನ್ ಯೋಜನೆಯನ್ನು ಪ್ರಾರಂಭಿಸುವ ಮೂಲಕ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾದ ಲಕ್ಷಾಂತರ ಜನರನ್ನು ಬ್ಯಾಂಕುಗಳೊಂದಿಗೆ ಸಂಪರ್ಕಿಸುವ ಹಾಗೆ ಮಾಡಿದರು.

Section: 
English Title: 
key contributions of arun Jaitley as the Finance Minister of the country
News Source: 
Home Title: 

ಹಣಕಾಸು ಸಚಿವರಾಗಿ ಅರುಣ್ ಜೈಟ್ಲಿ ಕೈಗೊಂಡ ಮಹತ್ವದ ಸುಧಾರಣೆಗಳು

 ಹಣಕಾಸು ಸಚಿವರಾಗಿ ಅರುಣ್ ಜೈಟ್ಲಿ ಕೈಗೊಂಡ ಮಹತ್ವದ ಸುಧಾರಣೆಗಳು
Caption: 
file photo
Yes
Is Blog?: 
No
Tags: 
Facebook Instant Article: 
Yes
Mobile Title: 
ಹಣಕಾಸು ಸಚಿವರಾಗಿ ಅರುಣ್ ಜೈಟ್ಲಿ ಕೈಗೊಂಡ ಮಹತ್ವದ ಸುಧಾರಣೆಗಳು
Publish Later: 
No
Publish At: 
Saturday, August 24, 2019 - 14:26
Created By: 
Manjunath Naragund
Updated By: 
Manjunath Naragund
Published By: 
Manjunath Naragund