ಸರಿಯಿತು ಶ್ರೀರಾಮನ ವಿಗ್ರಹದ ಮೇಲಿನ ಪರದೆ : ಹೀಗಿದ್ದಾನೆ ನೋಡಿ ಅಯೋಧ್ಯೆ ರಾಮ

Garbhagriha Ram Murti : ಧಾರ್ಮಿಕ ವಿಧಿವಿಧಾನಗಳ ನಡುವೆ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿಯನ್ನು ಇಲ್ಲಿವರೆಗೆ ಬಟ್ಟೆಯಿಂದ ಮುಚ್ಚಲಾಗಿತ್ತು.ಆದರೆ ಇಂದು ಮಧಾಹ್ನ 12 ಗಂಟೆಗೆ ಮೂರ್ತಿಯಿಂದ ಬಟ್ಟೆಯನ್ನು ಸರಿಸಲಾಗಿದೆ. ಈಗ ಶ್ರೀರಾಮನ ಕಣ್ಣುಗಳಿಗೆ ಮಾತ್ರ ಪಟ್ಟಿಯನ್ನು ಕಟ್ಟಲಾಗಿದೆ. 

Written by - Ranjitha R K | Last Updated : Jan 19, 2024, 02:14 PM IST
  • ಇಡೀ ಅಯೋಧ್ಯೆಯೇ ರಾಮಮಯವಾಗಿ ಬಿಟ್ಟಿದೆ.
  • ಪ್ರತಿಯೊಬ್ಬ ಭಕ್ತರೂ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.
  • ಶ್ರೀರಾಮನ ಕಣ್ಣುಗಳಿಗೆ ಮಾತ್ರ ಪಟ್ಟಿಯನ್ನು ಕಟ್ಟಲಾಗಿದೆ.
ಸರಿಯಿತು ಶ್ರೀರಾಮನ ವಿಗ್ರಹದ ಮೇಲಿನ ಪರದೆ : ಹೀಗಿದ್ದಾನೆ ನೋಡಿ ಅಯೋಧ್ಯೆ ರಾಮ title=

Garbhagriha Ram Murti : ಇಡೀ ಅಯೋಧ್ಯೆಯೇ ರಾಮಮಯವಾಗಿ ಬಿಟ್ಟಿದೆ.  ಪ್ರತಿಯೊಬ್ಬ ಭಕ್ತರೂ ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅಯೋಧ್ಯೆಯ ಭವ್ಯವಾದ ರಾಮಮಂದಿರದಲ್ಲಿ ಮಂತ್ರಗಳ ಪಠಣ ಮತ್ತು ಶಂಖಗಳ ನಾದ ಅನುರಣಿಸುತ್ತಿದೆ. ಭಕ್ತರ ನಿರೀಕ್ಷೆ ಅಂತ್ಯ ಕಂಡಿದೆ. ಶ್ರೀರಾಮನ ವಿಗ್ರಹ ಗರ್ಭಗುಡಿ  ತಲುಪಿದ್ದಲ್ಲದೆ, ಭಕ್ತರು ರಾಮನ ವಿಗ್ರಹದ ದರ್ಶನ ಮಾಡುತ್ತಿದ್ದಾರೆ. ಧಾರ್ಮಿಕ ವಿಧಿವಿಧಾನಗಳ ನಡುವೆ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿಯನ್ನು ಇಲ್ಲಿವರೆಗೆ ಬಟ್ಟೆಯಿಂದ ಮುಚ್ಚಲಾಗಿತ್ತು.ಆದರೆ, ಇಂದು ಮಧಾಹ್ನ 12 ಗಂಟೆಗೆ ಮೂರ್ತಿಯಿಂದ ಬಟ್ಟೆಯನ್ನು ಸರಿಸಲಾಗಿದೆ. ಈಗ ಶ್ರೀರಾಮನ ಕಣ್ಣುಗಳಿಗೆ ಮಾತ್ರ ಪಟ್ಟಿಯನ್ನು ಕಟ್ಟಲಾಗಿದೆ.  

ಸಂಪೂರ್ಣ ವಿಗ್ರಹ  ದರ್ಶನ : 
ಇದುವರೆಗೂ ಬಹಿರಂಗಗೊಂಡಿರುವ ಚಿತ್ರದಲ್ಲಿ ಶ್ರೀರಾಮನ ವಿಗ್ರಹವನ್ನು ಬಟ್ಟೆಯಿಂದ ಮುಚ್ಚಲಾಗಿತ್ತು.ಆದರೆ, ಇದೀಗ ರಾಮ ಭಕ್ತರು ತಮ್ಮ ಇಷ್ಟ ದೈವದ ಸಂಪೂರ್ಣ ದರ್ಶನ ಮಾಡಬಹುದಾಗಿದೆ. ಈಗ ಶ್ರೀರಾಮನ ಕಣ್ಣಿಗೆ ಮಾತ್ರ ಪಟ್ಟಿ ಕಟ್ಟಲಾಗಿದೆ. ಜನವರಿ 22ರಂದು ಮಧ್ಯಾಹ್ನ 12.30ಕ್ಕೆ ಮಹಾಮಸ್ತಕಾಭಿಷೇಕದ ಬಳಿಕ ಆ ಪಟ್ಟಿಯನ್ನು  ತೆಗೆಯಲಾಗುವುದು. 

ಇದನ್ನೂ ಓದಿ : Ayodhya: ಅಯೋಧ್ಯೆಗೆ ಹೋಗಲು ಬಯಸುವವರಿಗೆ ಗುಡ್ ನ್ಯೂಸ್.. ರೈಲ್ವೆ ಇಲಾಖೆ ಮಹತ್ವದ ನಿರ್ಧಾರ!

ಕನ್ನಡಿ ಒಡೆಯುವುದೇ?  :
ಮಹಾಮಸ್ತಕಾಭಿಷೇಕದ ನಂತರ ವಿಗ್ರಹದ ಕಣ್ಣಿನಿಂದ ಬಟ್ಟೆಯನ್ನು ತೆರೆದು ಕನ್ನಡಿಯನ್ನು ತೋರಿಸಲಾಗುವುದು.ಪ್ರಾಣ ಪ್ರತಿಷ್ಠೆಯ ನಂತರ ಮೂರ್ತಿಯ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ಬಿಚ್ಚಿ ಕನ್ನಡಿ ತೋರಿದಾಗ ಆ ಕನ್ನಡಿ ಒಡೆಯುತ್ತದೆ ಎಂದು ಹೇಳಲಾಗುತ್ತದೆ. 
   
ಪ್ರಧಾನಿ ಮೋದಿ ಆತಿಥ್ಯ ವಹಿಸಲಿದ್ದಾರೆ  : 

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರಂದು ಮುಖ್ಯ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ  ಆತಿಥ್ಯ ವಹಿಸಲಿದ್ದಾರೆ.ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ್ದಾರೆ. ಈ ವಿಗ್ರಹವು 51 ಇಂಚು ಉದ್ದವಿದ್ದು ಕಪ್ಪು ಶಾಲಿಗ್ರಾಮ ಕಲ್ಲಿನಿಂದ ಮಾಡಲ್ಪಟ್ಟಿದೆ. ವಿಗ್ರಹದ ತೂಕ ಸುಮಾರು 200 ಕೆ.ಜಿ. ಜನವರಿ 22 ರಂದು ಮಧ್ಯಾಹ್ನ 84 ಸೆಕೆಂಡ್‌ಗಳ ಅತ್ಯಂತ ಮಂಗಳಕರ ಸಮಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು.

ಇದನ್ನೂ ಓದಿ :     Rental Wife: ಇಲ್ಲಿ ಬಾಡಿಗೆಗೂ ಸಿಗ್ತಾರೆ ಪತ್ನಿಯರು..! ಒಂದು ವರ್ಷಕ್ಕೆ ಅಗ್ರಿಮೆಂಟ್… ಇಷ್ಟ ಇಲ್ಲಂದ್ರೆ ಬಿಟ್ಟು ಹೋಗ್ಬೋದು!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News