UP Gang Rape: ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿಯೇ ಈ ಆಘಾತಕಾರಿ ಘಟನೆ ನಡೆದಿದೆ. ಮೊದಲು ತನ್ನ ಹೆಂಡತಿಗೆ ಆಹಾರದಲ್ಲಿ ಡ್ರಗ್ಸ್ ಸೇರಿಸಿದ ಪತಿ ಆಕೆ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಸೇರಿ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಆರೋಪಿಸಲಾಗಿದೆ.
Hassan Guest lecturer Suicide case: ಸೋಮಶೇಖರ್ ಮತ್ತು ಭಾಗ್ಯ ದಂಪತಿಯ ಪುತ್ರಿ ದೀಪಾ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವಿವಾಹಿತರಾಗಿದ್ದ ದೀಪಾ ಮೇ 9ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
Bengaluru Fire Breaks Out: ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ.
ಮೂರ್ತಿ ಮತ್ತು ಶರಣಪ್ಪ ನಡುವೆ ಗಲಾಟೆಯಾಗಿ ಹಳೇ ವೈಷ್ಯಮ್ಯವೂ ಇತ್ತಂತೆ. ಇದೇ ಕೋಪದಲ್ಲಿದ್ದ ಶರಣಪ್ಪಗೆ ನಿನ್ನೆ ರಾತ್ರಿ ಸಚಿನ್ ಪ್ರಚೋದನೆ ಕೊಟ್ಟಿದ್ರಿಂದ ಈ ದುರಂತ ನಡೆದಿದೆ. ಘಟನೆಯ ಸಂಪೂರ್ಣ ವರದಿ ಇಲ್ಲಿದೆ ನೋಡಿ..
ಇನ್ನೂ ಬದುಕು ಕಟ್ಟಿಕೊಳ್ಳದೆ ಅಲೆದಾಡ್ತಿರುವ ಈ ಪುಡಾಂಗು ಶಶಾಂಕ್ ಗೆ ಪ್ರೀತಿ ಪ್ರೇಮ ಬೇರೆ. ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಏಂಜೆಲ್ ಬೇರೊಬ್ಬ ಯುವಕನ ಜೊತೆ ಮಾತಾಡಿದ್ರು ಸಹಿಸ್ಕೊತಾ ಇರ್ಲಿಲ್ಲ. ಆತನ ಇದೇ ಕೆಟ್ಟ ಮನಸ್ಥಿತಿ ಇವತ್ತು ಒಂದು ಕುಟುಂಬವೇ ನರಳಾಡುವಂತೆ ಮಾಡಿಬಿಟ್ಟಿದೆ.
Bengaluru Murder Case: ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ಸಾಯಿತಿಯನ್ನು ಪದ್ಮಜಾ ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ತಾಯಿ ಮತ್ತು ಮಗಳ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಸೋಮವಾರ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯಗೊಂಡಿದೆ ಎಂದು ಹೇಳಲಾಗಿದೆ.
Baba Ramdev Patanjali Products: ಭಾರತದ ಅತ್ಯಂತ ಜನಪ್ರಿಯ ಯೋಗ ಗುರುಗಳಾದ ಬಾಬಾ ರಾಮ್ದೇವ್ ಔಷಧೀಯ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡಿರುವ ಉತ್ತರಾಖಂಡ ಸರ್ಕಾರ ಪತಂಜಲಿಯ 14 ಉತ್ಪನ್ನಗಳ ಲೈಸನ್ಸ್ ರದ್ದುಗೊಳಿಸಿದೆ.
ರಾತ್ರಿ 8.20 ಗಂಟೆಗೆ ಸಹಕಾರನಗರದಲ್ಲಿನ ಬಾಸ್ಕೆಟ್ ಬಾಲ್ ಎದುರು ಇರುವ ತನ್ನ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಡೋರ್ ಓಪನ್ ಆಗಿದ್ದು, ಒಬ್ಬ ಹುಡುಗ ಮನೆಯ ಮಧ್ಯದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿದ್ದ. ಈ ವೇಳೆ ಯಾರಪ್ಪ ನೀನು ಎಂದು ಕೇಳ್ತಿದ್ದಂತೆ ಆತ ಜೋರಾಗಿ ಭಯ್ಯಾ, ಭಯ್ಯಾ ಎಂದು ಕೂಗೋಕೆ ಶುರು ಮಾಡಿದ್ದ.
ಗನ್ ತೋರಿಸಿ 40 ಲಕ್ಷ ಹಣ ದೋಚಿ ಗ್ಯಾಂಗ್ ಪರಾರಿ
ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದ ಘಟನೆ
ನಿನ್ನೆರಾತ್ರಿ 8 ಗಂಟೆಗೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು
ಸ್ಥಳಕ್ಕೆ ದೌಡಾಯಿಸಿರುವ ಕೊಡಿಗೇಹಳ್ಳಿ ಪೊಲೀಸರು
ಘಟನೆ ನಡೆದ ಅಕ್ಕಪಕ್ಕದ ಸಿಸಿ ಕ್ಯಾಮರಾಗಳ ಪರಿಶೀಲನೆ
ನೇಹಾ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಿ ಅಭಿಯೋಜಕರೊಂದಿಗೆ ಮಾತನಾಡಿದ್ದು, ಸರ್ಕಾರ ಈಗಾಗಲೇ ಆರೋಪಿಯನ್ನು ಬಂಧಿಸಿದೆ., ಸಿಐಡಿ ತನಿಖೆ ನಡೆದಿದ್ದು ಆರೋಪಪಟ್ಟಿಯನ್ನು ತಯಾರಿಸಲಿದೆ ಎಂದರು.
Uttar Pradesh Shocker: ತನ್ನ ಸಹೋದರಿಯ ಮದುವೆ ಸಂದರ್ಭದಲ್ಲಿ ಚಂದ್ರಪ್ರಕಾಶ್ ಮಿಶ್ರಾ ಎಂಬಾತ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದ. ಆತನ ತಂಗಿಗೆ ತನ್ನ ಗಂಡ ಬೆಲೆಬಾಳುವ ಗಿಫ್ಟ್ ನೀಡಿದ್ದಾನೆಂದು ಪತ್ನಿ ಅಸಮಾಧಾನಗೊಂಡಿದ್ದಳು.
Bareilly Pre Wedding Party shocking Video: ಉತ್ತರ ಪ್ರದೇಶದ ಬರೇಲಿಯಲ್ಲಿ ಉದ್ಯಮಿಯೊಬ್ಬರ ಪುತ್ರನನ್ನು ಪಂಚತಾರಾ ಹೊಟೇಲ್ನ ಮೇಲ್ಛಾವಣಿಯಿಂದ ಕೆಳಕ್ಕೆ ಎಸೆಯಲಾಗಿದೆ. ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಚಾಮರಾಜನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಸ್ತೆತಡೆ ನಡೆ ಪ್ರತಿಭಟನೆ ವೇಳೆ ಮಾತನಾಡಿದ ಎನ್. ಮಹೇಶ್ (N Mahesh), ನ್ಯಾಯಬದ್ಧವಾಗಿ ಮಾತನಾಡಿ, ಒಂದು ಸಮುದಾಯದ ಓಲೈಕೆ ಯಾಕೆ ಮಾಡುತ್ತೀರಿ, ಚುನಾವಣಾ ಪ್ರಚಾರ ಬಿಟ್ಟು ಪ್ರತಿಭಟನೆ ನಡೆಸಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದು ಕಿಡಿಕಾರಿದರು.
Kali River Tragedy: ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಮಕ್ಕಳು ಸೇರಿ ಉಳಿದ ಆರು ಮಂದಿ ಕಾಳಿ ನದಿಯಲ್ಲಿ ಈಜಲು ಇಳಿದಿದ್ದರು. ಈ ವೇಳೆ ಕಾಲು ಜಾರಿ ನದಿಯಲ್ಲಿ ಮುಳುಗಿದ್ದು ನಾಲ್ವರ ಮೃತದೇಹಗಳು ಪತ್ತೆಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.