Corona Vaccine: ದೇಶಕ್ಕೆ ದೊಡ್ಡ ಪ್ರಮಾಣದ ಕೋವಿಡ್ ಲಸಿಕೆ ದಾಸ್ತಾನು ಅಗತ್ಯವಿದ್ದರೆ ಹೆಚ್ಚುವರಿ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಸರ್ಕಾರ ಬಯಸುತ್ತದೆ. ಈ ಬಗ್ಗೆ ಯಾವುದೇ ಆದೇಶವಿಲ್ಲದ ಹಿನ್ನೆಲೆಯಲ್ಲಿ ಕೋವಿಶೀಲ್ಡ್ ಉತ್ಪಾದನೆಯನ್ನು 50% ಕಡಿತಗೊಳಿಸಲಿದ್ದೇವೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಹೇಳಿದ್ದಾರೆ.
ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಮಾತನಾಡಿ, ಲಸಿಕೆ ಲಭ್ಯವಿಲ್ಲ ಎಂದು ತಿಳಿದಿದ್ದರೂ ಸರ್ಕಾರವು ಲಸಿಕೆಯನ್ನು ಎಲ್ಲರಿಗೂ ಅನುಮೋದಿಸಿದೆ. ಉತ್ಪನ್ನದ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ನ್ಯಾಯಯುತವಾಗಿ ಬಳಸಬೇಕು ಎಂಬುದು ನಾವು ಕಲಿತ ದೊಡ್ಡ ಪಾಠ ಎಂದಿದ್ದಾರೆ.
ಅಸ್ಟ್ರಾಜೆನೆಕಾ ಕೊರೊನಾ ಲಸಿಕೆ ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಸರಬರಾಜು ಬದ್ಧತೆಗಳನ್ನು ಪೂರೈಸಲು ಹೆಣಗಾಡುತ್ತಿರುವಾಗ ಇತರ ದೇಶಗಳಲ್ಲಿ ಲಸಿಕೆ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದರ್ ಪೂನವಾಲ್ಲಾ ದಿ ಟೈಮ್ಸ್ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಒಂದು ಡೋಸ್ ಕೋವಾಕ್ಸಿನ್ ಗೆ 600 ರೂ. ಪಾವತಿಸಿದರೆ, ಖಾಸಗಿ ಆಸ್ಪತ್ರೆಗಳು ಒಂದು ಡೋಸ್ಗೆ 1200 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಈ ಮಧ್ಯೆ, ಕೋವಿಶೀಲ್ಡ್ ಬೆಲೆ ಕೂಡಾ ಒಂದೂವರೆ ಪಟ್ಟು ಹೆಚ್ಚಾಗಲಿದೆ. ಶೀಘ್ರದಲ್ಲೇ ಕೋವಿಶೀಲ್ಡ್ ನ ಹೊಸ ಬೆಲೆ ಪ್ರಕಟವಾಗಲಿದೆ.
Covishield Vaccine Price in India: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯ ಬೆಲೆಯನ್ನು ಪ್ರಕಟಿಸಿದ್ದು, ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್ಗೆ 400 ರೂ., ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ಗೆ 600 ರೂ. ಬೆಲೆ ನಿಗದಿಗೊಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO), ಅಸ್ಟ್ರಾಜೇನಿಕಾ (AstraZeneca)/ ಆಕ್ಸ್ಫರ್ಡ್ (Oxford)ನ ಕೊವಿಡ್ 19 ಲಸಿಕೆಯಾಗಿರುವ (Covid-19 Vaccine) ಎರಡು ಆವೃತ್ತಿಗಳಿಗೆ ವಿಶ್ವಾದ್ಯಂತ ತುರ್ತು ಬಳಕೆಗೆ (emergency use)ಅನುಮತಿ ನೀಡಿದೆ.
Covid-19 Vaccine: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ರಾಜ್ಯಗಳು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಪ್ರಕಾರ, ಕರೋನಾ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.
Serum Institute of India news: ಕೋವಿಶೀಲ್ಡ್ ಲಸಿಕೆ ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹೊಸ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಎಷ್ಟು ಭೀಕರವಾಗಿದೆಯೆಂದರೆ, ಕಟ್ಟಡದ ಮೇಲೆ ಕಪ್ಪು ಹೊಗೆಯನ್ನು ಸ್ಪಷ್ಟವಾಗಿ ಕಾಣಬಹುದು. ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಅಗ್ನಿಶಾಮಕ ಇಲಾಖೆಯ 4 ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಸುರೇಶ್ ಜಾಧವ್ ಅವರ ಪ್ರಕಾರ ಕೋವಿಶೀಲ್ಡ್ ಹೊರತುಪಡಿಸಿ ಕರೋನವೈರಸ್ ವಿರುದ್ಧ ಇನ್ನೂ ನಾಲ್ಕು ಲಸಿಕೆಗಳ ಕೆಲಸವು ಪ್ರಗತಿಯಲ್ಲಿದೆ.
Poonawalla Vs Krishna Ella: ಕೊರೊನಾ ವ್ಯಾಕ್ಸಿನ್ ಗೆ ಸಂಬಂಧಿಸಿದಂತೆ ಪರಸ್ಪರ ಮುಖಾಮುಖಿಯಾಗಿರುವ ಅದರ್ ಪೂನಾವಾಲಾ ಹಾಗೂ ಕೃಷ್ಣಾ ಇಲ್ಲಾ ಮಧ್ಯೆ ಸರ್ಕಾರ ರಾಜಿ ಮಾಡಿದೆ. ಎರಡೂ ಲಸಿಕೆಗಳು ಉತ್ತಮವಾಗಿವೆ ಮತ್ತು ಎರಡರ ಫಲಿತಾಂಶಗಳೂ ಕೂಡ ಉತ್ತಮವಾಗಿವೆ ಎಂದು ಸರ್ಕಾರ ಹೇಳಿದೆ.
ಸೀರಮ್-ಆಕ್ಸ್ಫರ್ಡ್ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆ ಕೋವಿಶೀಲ್ಡ್ ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು ಪ್ರಯೋಗಕ್ಕೂ ಒಳಪಟ್ಟಿದೆ. ಇದಕ್ಕೂ ಮೊದಲು ಅಮೆರಿಕದ ಕಂಪನಿ ಫಿಜರ್ ಭಾರತದಲ್ಲಿ ಕರೋನಾ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದೆ.
ಸುಳ್ಳು ಆರೋಪಗಳನ್ನು ಮಾಡಿದರೆ 100 ಕೋಟಿ ರೂ.ಗಳ ದಂಡ ವಸೂಲಿ ಮಾಡುವುದಾಗಿ ಕಂಪನಿ ಬೆದರಿಕೆಯೊಡ್ಡಿದೆ. ಇಂತಹ ಆರೋಪಗಳಿಂದ ತನ್ನ ಹಿತ ಕಾಪಾಡಿಕೊಳ್ಳುವುದಾಗಿ ಕಂಪನಿ ಹೇಳಿದ್ದು, ಸುಳ್ಳು ಆರೋಪಕ್ಕಾಗಿ 100 ಕೋಟಿ ರೂ.ವರೆಗೆ ಮಾನಹಾನಿ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ನ ಜೈಡಸ್ ಕ್ಯಾಡಿಲಾ ಪಾರ್ಕ್, ಹೈದರಾಬಾದ್ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ ಭೇಟಿ ನೀಡಲಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಲೀಡರ್ಶಿಪ್ ಶೃಂಗಸಭೆಯ (ಎಚ್ಟಿಎಲ್ಎಸ್) 18 ನೇ ಆವೃತ್ತಿಯ ಎರಡನೇ ಅಧಿವೇಶನದಲ್ಲಿ ಆಕ್ಸ್ಫರ್ಡ್ ಯೂನಿವರ್ಸಿಟಿ ಕೋವಿಡ್ -19 ಲಸಿಕೆ ತಯಾರಿಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಈ ಕುರಿತಾಗಿ ಸುದೀರ್ಘವಾಗಿ ಮಾತನಾಡಿದ್ದಾರೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುರೇಶ್ ಜಾಧವ್ ಅವರು ಶನಿವಾರ (ಅಕ್ಟೋಬರ್ 17) ಮಾರ್ಚ್ 2021 ರ ವೇಳೆಗೆ ಭಾರತಕ್ಕೆ ಕೋವಿಡ್ -19 ಲಸಿಕೆ ಸಿಗಲಿದೆ ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.