COVID-19 India: ಸರ್ಕಾರವು ದೇಶಾದ್ಯಂತ ಲಸಿಕೆ ಅಭಿಯಾನವನ್ನು ನಿರಂತರವಾಗಿ ವೇಗಗೊಳಿಸುತ್ತಿದೆ. ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 58,097 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಮುಂದಿನ ವರ್ಷದ ಮಧ್ಯಭಾಗದಲ್ಲಿ COVID-19 ವಿರುದ್ಧ 50 ಬಿಲಿಯನ್ ಡಾಲರ್ ಹೂಡಿಕೆ ಯೋಜನೆಯು ವಿಶ್ವದಾದ್ಯಂತ ಜನರಿಗೆ ಹೇಗೆ ಲಸಿಕೆ ನೀಡಬಹುದು ಎಂಬ ಪ್ರಸ್ತಾಪವನ್ನು ಅನಾವರಣಗೊಳಿಸಿದ ಅಂತರರಾಷ್ಟ್ರೀಯ ಹಣಕಾಸು ನಿಧಿ ಅಥವಾ ಐಎಂಎಫ್ ಶುಕ್ರವಾರ ಲಸಿಕೆಗಳ ರಫ್ತು ನಿಷೇಧಿಸುವ ಭಾರತದ ನಿರ್ಧಾರವು ಹಲವಾರು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದೆ.
ಕರೋನಾ ಲಸಿಕೆ ಹಾಕಿಸುವಂತೆ ಜನರನ್ನು ಪ್ರೇರೇಪಿಸಲು, ವಿಶ್ವದಾದ್ಯಂತದ ಸರ್ಕಾರಗಳು ಜನರಿಗೆ ವಿಭಿನ್ನ ಆಫರ್ ಗಳನ್ನ ನೀಡುತ್ತಿವೆ. ಓಹಿಯೋ ರಾಜ್ಯ ಗವರ್ನರ್ ಮೈಕ್ ಡಿವೈನ್ ಲಸಿಕೆ ಹಾಕಿಸಿಕೊಂಡವರಿಗೆ 7.35 ಕೋಟಿ ರೂ.ಗಳ ಲಾಟರಿ ಆರಂಭಿಸಿದೆ.
Coronavirus Vaccination Program In India - ಕರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶದಲ್ಲಿ ಮುಂದುವರೆದಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರೋನದ ವಿರುದ್ಧ ಸಾಧ್ಯವಿರುವ ಎಲ್ಲ ರಕ್ಷಣಾ ಪ್ರತಿತಂತ್ರ ರೂಪಿಸುವತ್ತ ತಮ್ಮ ಗಮನ ಕೇಂದ್ರೀಕರಿಸಿವೆ ಮತ್ತು ಇದಕ್ಕಾಗಿ ಲಸಿಕೆ ಅತ್ಯಂತ ಸೂಕ್ತವಾದ ಮಾರ್ಗವಾಗಿದೆ.
Covid-19 Vaccine: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ, ರಾಜ್ಯಗಳು ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಐಪಿಸಿಯ ನಿಬಂಧನೆಗಳ ಪ್ರಕಾರ, ಕರೋನಾ ವ್ಯಾಕ್ಸಿನೇಷನ್ ಬಗ್ಗೆ ವದಂತಿಗಳನ್ನು ಹಬ್ಬಿಸುತ್ತಿರುವ ಜನರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಲಾಗಿದೆ.
ವಿಶ್ವದ ಇತರ ರಾಷ್ಟ್ರಗಳಿಗೂ ತುರ್ತು ಬಳಕೆಗೆ ಭಾರತ ವ್ಯಾಕ್ಸಿನ್ ರವಾನಿಸುತಿದೆ. ನಮ್ಮ ನೆರೆಯ ರಾಷ್ಟ್ರಗಳಾದ ಭೂತಾನ್ , ಮಾಲ್ಡಿವ್ಸ್ , ಬಾಂಗ್ಲಾದೇಶ , ನೇಪಾಳ , ಮ್ಯಾನ್ಮಾರ್ ಮತ್ತು ಸಿಚೆಲಿಸ್ ದೇಶಗಳಿಗೆ ನಮ್ಮ ವ್ಯಾಕ್ಸಿನ್ ಇಂದೇ ರವಾನೆಯಾಗಲಿದೆ.
ಇಂದು ನಾಡಿನೆಲ್ಲೆಡೆಯೂ ಕೊರೋನಾ ಲಸಿಕಾ (Corona Vaccination) ಅಭಿಯಾನ ನಡೆಯಲಿದೆ. ಕರ್ನಾಟಕದ ಒಟ್ಟು 233 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಂಚಿಕೆ ಕಾರ್ಯಕ್ರಮ ನಡೆಯಲಿದೆ. ರಾಜ್ಯದಲ್ಲಿ ಲಸಿಕಾ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ( B S Yadiyurappa) ಚಾಲನೆ ನೀಡಲಿದ್ದಾರೆ.
Coronavirus Vaccine Update: ಶೀಘ್ರದಲ್ಲಿಯೇ ಭಾರತ ಸರ್ಕಾರ ಆಕ್ಸ್ಫರ್ಡ್ ಹಾಗೂ ಅಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಇದೆ.
ಕೊರೊನಾ ವೈರಸ್ ವ್ಯಾಕ್ಸಿನ್ (Coronavaccine) ತಯಾರಿಕಾ ಕಂಪನಿ ಫೈಜರ್ (Pfizer) ಭಾರತದಲ್ಲಿ ತನ್ನ ವ್ಯಾಕ್ಸಿನ್ ಮಾರಾಟ ಮಾಡಲು ಬಯಸುತ್ತಿದೆ. ಅಷ್ಟೇ ಅಲ್ಲ ಭಾರತೀಯರ ಮೇಲೆ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಕೂಡ ನಡೆಸಲು ಬಹಸುತ್ತಿದೆ. ಇದಕ್ಕಾಗಿ ಫೈಜರ್-ಬಯೋಂಟೆಕ್ (Pfizer-BioNTech) ಕಂಪನಿ ಭಾರತದಲ್ಲಿ ಜನರ ಮೇಲೆ ಕ್ಲಿನಿಕಲ್ ಟ್ರಯಲ್ ನಡೆಸಲು ಅನುಮತಿ ಕೋರಿದೆ.
ಸುಳ್ಳು ಆರೋಪಗಳನ್ನು ಮಾಡಿದರೆ 100 ಕೋಟಿ ರೂ.ಗಳ ದಂಡ ವಸೂಲಿ ಮಾಡುವುದಾಗಿ ಕಂಪನಿ ಬೆದರಿಕೆಯೊಡ್ಡಿದೆ. ಇಂತಹ ಆರೋಪಗಳಿಂದ ತನ್ನ ಹಿತ ಕಾಪಾಡಿಕೊಳ್ಳುವುದಾಗಿ ಕಂಪನಿ ಹೇಳಿದ್ದು, ಸುಳ್ಳು ಆರೋಪಕ್ಕಾಗಿ 100 ಕೋಟಿ ರೂ.ವರೆಗೆ ಮಾನಹಾನಿ ಮೊಕದ್ದಮೆ ಹೂಡುವ ಸಾಧ್ಯತೆ ಇದೆ ಎಂದು ಕಂಪನಿ ಹೇಳಿದೆ.
ದೇಶದಲ್ಲಿ ನಡೆಯುತ್ತಿರುವ ಲಸಿಕೆ ಪ್ರಯೋಗ ಮತ್ತು ಅದರ ಅಭಿವೃದ್ಧಿಯ ಬಗ್ಗೆಯೂ ಸಚಿವರು ಮಾಹಿತಿ ನೀಡಿದ್ದಾರೆ. ಸುರಕ್ಷಿತ ಹಾಗೂ ಪ್ರಬಲ ಲಸಿಕೆ ಪ್ರಾಕೃತಿಕ ಸೋಂಕಿನ ಹೋಲಿಕೆಯಲ್ಲಿ ತೀವ್ರಗತಿಯಲ್ಲಿ ಕೊವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಸ್ಥಾಪಿಸುವಲ್ಲಿ ಸಹಕಾರಿಯಾಗಲಿದೆ ಎಂದೂ ಕೂಡ ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.