ಅಲ್ಲಿ ಸಾಲು ಸಾಲು ಸಮಸ್ಯೆಗಳನ್ನ ಹೊತ್ತುಬಂದವರು ಒಂದೆಡೆ ಕಾದು ಕುಳಿತಿದ್ರೆ, ಅತ್ತ ಉಭಯ ಪಕ್ಷಗಳ ನಾಯಕರು ಒಂದೇ ವೇದಿಕೆಯಲ್ಲಿ ಕುಳಿತು ಎಲ್ಲರ ಗಮನಸೆಳೆದ್ರು. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಡಿಕೆಶಿಯನ್ನ ಹಾಡಿ ಹೊಗಳಿದ್ರೆ, ಆರ್.ಆರ್.ನಗರ ಶಾಸಕ ಮುನಿರತ್ನ ನಗು ನಗುತ್ತಲೇ ಮುನಿಸು ಹೊರಹಾಕಿದ್ರು. ಜ್ಞಾನ ಭಾರತಿ ಆವರಣದಲ್ಲಿ ನಡೆದ ಬಾಗಿಲಿಗೆ ಬಂತು ಸರ್ಕಾರ-ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ಹೇಗಿತ್ತು ಅನ್ನೋದರ ಝಲಕ್ ಇಲ್ಲಿದೆ ನೋಡಿ
ಅನುದಾನ ವರ್ಗಾವಣೆ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ. RR ನಗರಕ್ಕೆ ಬಿಡುಗಡೆ ಆಗಿದ್ದ ಹಣ ಬೇರೆ ಕ್ಷೇತ್ರಕ್ಕೆ ವರ್ಗಾವಣೆ. ಡಿಸಿಎಂ ಡಿಕೆಶಿ ನಡೆ ವಿರುದ್ಧ ಸದನದಲ್ಲಿ ಹೋರಾಟಕ್ಕೆ ಪ್ಲಾನ್ .ಮುನಿರತ್ನ ಜೊತೆ ಬೆಂಗಳೂರು ಬಿಜೆಪಿ ಶಾಸಕರಿಂದ ಹೋರಾಟ.
ಬಿಜೆಪಿ ಪಕ್ಷ ಜಗದೀಶ್ ಶೆಟ್ಟರಿಗೆ ಒಳ್ಳೆಯ ಸ್ಥಾನಮಾನ ಕೊಟ್ಟಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಸಿಂಬಲ್ ಬಿಟ್ರೆ ಅಲ್ಲಿ ಗೆಲ್ಲೋಕೆ ಆಗಲ್ಲ ಎಂದು ಸಚಿವ ಮುನಿರತ್ನ ಲೇವಡಿ ಮಾಡಿದ್ದಾರೆ.. ಮಗನಿಗೆ ಹುಡುಗಿ ನೋಡಲು ಹೋಗಿ ತಂದೆ ಮದುವೆ ಆದಂತೆ ಎಂದು ಲೇವಡಿ ಮಾಡಿದ್ದಾರೆ.
ಸಚಿವ ಮುನಿರತ್ನ ವಿರುದ್ದ ಸಂಸದ ಡಿಕೆ ಸುರೇಶ್ ಆರ್. ಆರ್. ನಗರದಲ್ಲಿ ಮತದಾರರ ಪಟ್ಟಿಯಿಂದ ಹಲವರ ಹೆಸರು ಡಿಲೀಟ್ ವಿಷಯವಾಗಿ ಚುನಾವಣಾ ಆಯೋಗಕ್ಕೆ ದೂರು ಹಿನ್ನೆಲೆ, ಮುನಿರತ್ನ ನಾನು ನಿಮ್ಮ ಜೋತೆ ಇದ್ದಾಗ ಪವಿತ್ರವಾಗಿದ್ದೆ..? ಇವಾಗ ಅಪವಿತ್ರವಾಗಿದ್ದೇನಾ..? ಎಂದು ಪ್ರಶ್ನಿಸಿದರು.
ಮುನಿರತ್ನ ಅವರ ನಿಜ ಸ್ವರೂಪ ಈಗ ಗೊತ್ತಾಗಿದೆ. ತಡವಾಗಿ ಅರಿವಾಗಿದೆ. ಅವರ ಸಿನಿಮಾ ಡೈಲಾಗ್ ಗಳು ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿವಲ್ಲ, ನಿಜ ಜೀವನದಲ್ಲೂ ಬಳಕೆ ಆಗುತ್ತವೆ ಅಂತಾ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಆರ್ ಆರ್ ನಗರ ಉಪಚುನಾವಣೆ (RR Nagar byelection) ಪ್ರಚಾರ ಕಾವೇರುತ್ತಿರುವಂತೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಅಷ್ಟಕ್ಕೂ ಸಿದ್ದರಾಮಯ್ಯ ಆಕ್ರೋಶಕ್ಕೆ ಗುರಿಯಾಗಿದ್ದು ಯಾರು ಗೊತ್ತಾ..? ಮತ್ಯಾರೂ ಅಲ್ಲ, ಸಿದ್ದರಾಮಯ್ಯ ಅವರ ಒಂದು ಕಾಲದ ಸಹವರ್ತಿ, ಸ್ನೇಹಿತ ಮುನಿರತ್ನ.ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಸೇರಿದ ಮುನಿರತ್ನ, ಈಗ ರಾಜ ರಾಜೇಶ್ವರಿ ನಗರದಲ್ಲಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.