Karnataka Elections : ಕ್ಯಾಂಪೇನ್​ಗೆ  ಹೋದಾಗ ತುಂಬ ಸತ್ಯಗಳು ಗೋಚರವಾದವು - ಕಿಚ್ಚ ಸುದೀಪ್

Kichcha Sudeep Voted: ಮತದಾನಕ್ಕೆ ಕಿಚ್ಚ ಸುದೀಪ್‌ ಹಾಗೂ ‌ಪತ್ನಿ ಪ್ರಿಯಾ, ಮಗಳು  ಸಾನ್ವಿ ಜೊತೆ ಕುಂಟುಂಬ ಸಮೇತರಾಗಿ ಆಗಮಿಸಿ ಜೆ.ಪಿ. ನಗರದ ಆಕ್ಸ್​ಫರ್ಡ್​ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಈ ವೇಳೆ ಪುತ್ರಿ ಸಾನ್ವಿ ಮೊದಲ ಮತದಾನ  ಬಗ್ಗೆ ಮಾತನಾಡಿದ್ದಾರೆ.  

Written by - Zee Kannada News Desk | Last Updated : May 10, 2023, 08:00 PM IST
  • ಕ್ಯಾಂಪೇನ್​ಗೆ ಹೋದಾಗ ತುಂಬ ಸತ್ಯಗಳು ಗೋಚರವಾದವು
  • ತುಂಬ ಊರುಗಳಲ್ಲಿ ಸಾಕಷ್ಟು ಕೊರತೆ ಇದೆ ಕ್ಯಾಂಪೇನ್ ನಲ್ಲಿ ಕಂಡ ಸತ್ಯಗಳಿವು
  • ಉತ್ತರ ಕರ್ನಾಟಕದ ತುಂಬ ಕಡೆ ಜನಗಳಿಗೆ ಕುಡಿಯಲು ನೀರು ಇಲ್ಲ
Karnataka Elections : ಕ್ಯಾಂಪೇನ್​ಗೆ  ಹೋದಾಗ ತುಂಬ ಸತ್ಯಗಳು ಗೋಚರವಾದವು - ಕಿಚ್ಚ ಸುದೀಪ್ title=

ಬೆಂಗಳೂರು: ಮತದಾನಕ್ಕೆ ಕಿಚ್ಚ ಸುದೀಪ್‌ ಹಾಗೂ ‌ಪತ್ನಿ ಪ್ರಿಯಾ, ಮಗಳು  ಸಾನ್ವಿ ಜೊತೆ ಕುಂಟುಂಬ ಸಮೇತರಾಗಿ  ಆಗಮಿಸಿ ಜೆ.ಪಿ. ನಗರದ ಆಕ್ಸ್​ಫರ್ಡ್​ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಿಚ್ಚ, ಮತದಾನ ಜಾಗೃತಿ ಸಂದೇಶ ನೀಡಿ ​ ಪುತ್ರಿ ಸಾನ್ವಿ  ಮೊದಲ ಮತದಾನ  ಬಗ್ಗೆ ಮಾತನಾಡಿದ್ದಾರೆ.

ತಮ್ಮ ಮಗಳಿಗೆ ಮೊದಲ ಮತದಾನ, ಮೊದಲ್ಲೇ ನರ್ವಸ್‌ ಆಗಿದ್ದಳು. ಮತಚಲಾಯಿಸುವ ಕುರಿತಂತೆ ತಂದೆಯೇ ಬಳಿ ಚರ್ಚಿಸುಳಿದ್ದಳು ಎಂದಿದ್ದಾರೆ.  ಕಿಚ್ಚನ ಪಾಲಿಗೆ ಈ ಬಾರಿ ಮತದಾನ ತುಂಬಾ ವಿಶೇಷವಾದ್ದು ಆಗಿದೆ.

ಇದನ್ನೂ ಓದಿ: Karnataka Assembly Elections: ಮತಚಲಾಯಿಸಿ ಸೆಲ್ಫಿಗೆ ಫೋಸ್‌ ನೀಡಿದ ಸ್ಯಾಂಡಲ್ ವುಡ್ ತಾರೆಯರು...

ಕಾರಣ ಅವರ ಪುತ್ರಿಗೆ ಮೊದಲ ಮತದಾನವಾಗಿದ್ದರಿಂದ ದಾರಿಯುದ್ದಕ್ಕೂ ವಿಡಿಯೋ ಮಾಡ್ತಾ ಬಂದ್ದಿದ್ದೆನೆ. ಆಕೆ ಏನೇ ಮಾಡಿದ್ರೂ ಅದನ್ನು ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ ಎಂದಿದ್ದಾರೆ.

ಇನ್ನುಳಿದಂತೆ ಮತದಾನದ ಬಗ್ಗೆ ಮಾತಾನಾಡಿರುವ ನಟ ಸುದೀಪ್‌, ಈಗ ಕೇವಲ ಶೇಕಡ 60ರಷ್ಟು ಮಾತ್ರ ಮತದಾನ ಆಗುತ್ತಿದೆ. ಒಳ್ಳೆಯದಾಗಬೇಕು ಎಂದರೆ ಎಲ್ಲರೂ ವೋಟ್​ ಹಾಕಬೇಕು.

ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ನಟಿ ಅಮೂಲ್ಯ ಜಗದೀಶ್‌ ದಂಪತಿ !

ಇಂದು ವೋಟ್​ ಮಾಡದೇ ಆಮೇಲೆ ಸೋಶಿಯಲ್​ ಮೀಡಿಯಾದಲ್ಲಿ ರಾಜಕೀಯ ನಾಯಕರಿಗೆ ಮತ್ತು ಸರ್ಕಾರಕ್ಕೆ ಬಯ್ಯೋದು ಸರಿಯಲ್ಲ. ಮತದಾನ ಮಾಡಿ ಅಂತ ಒತ್ತಾಯ ಮಾಡೋಕೆ ಆಗಲ್ಲ. ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು ಎಂದು ​ ಹೇಳಿದ್ದಾರೆ.

ಅಷ್ಟೆ ಅಲ್ಲದೇ ಈ ಬಾರಿ ಚುನಾವಣೆ ಪ್ರಚಾರದಲ್ಲಿ ಕೆಲ ಅಭರ್ಥಿಗಳ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕ್ಯಾಂಪೇನ್​ ಬಗ್ಗೆ ಹೇಳಿಕೊಂಡಿರುವ ನಟ, ಕ್ಯಾಂಪೇನ್​ ವೇಳೆ ತುಂಬ ವಿಷಯ ಕಲಿತಿದ್ದೇನೆ.ನಾನು ಕ್ಯಾಂಪೇನ್​ಗೆ ಹೋದಾದ ತುಂಬ ಸತ್ಯಗಳನ್ನು ನೋಡಿಕೊಂಡು ಬಂದಿದ್ದೇನೆ.

ಇದನ್ನೂ ಓದಿ: Karnataka Assembly Elections: ಮತಚಲಾಯಿಸಿ ಸೆಲ್ಫಿಗೆ ಫೋಸ್‌ ನೀಡಿದ ಸ್ಯಾಂಡಲ್ ವುಡ್ ತಾರೆಯರು...

ಆ ಸತ್ಯಗಳು ನನ್ನ ಜೊತೆ ಇರುತ್ತವೆ. ತುಂಬ ಊರುಗಳಲ್ಲಿ ಸಾಕಷ್ಟು ಕೊರತೆ ಇದೆ. ಉತ್ತರ ಕರ್ನಾಟಕದ ತುಂಬ ಕಡೆ ಜನಗಳಿಗೆ ಕೇವಲ ನೀರು ಕೊಟ್ಟು ಸಮಾಧಾನ ಮಾಡಿ ಬಿಟ್ಟಿದ್ದಾರೆ ಅನಿಸುತ್ತದೆ. ಆ ಊರುಗಳು ಇನ್ನೂ ಸಾಕಷ್ಟು ಹಿಂದೆ ಉಳಿದುಕೊಂಡಿವೆ. ಅವರಿಗೆಲ್ಲ ಒಂದು ಒಳ್ಳೆಯ ಜೀವನ ಸಿಗಬೇಕು ಎಂದರೆ ಎಲ್ಲರೂ ಚೆನ್ನಾಗಿ ಕೆಲಸ ಮಾಡಬೇಕು ಎಂದಿದ್ದಾರೆ. 

 ಆಗಾಗ   ಹಾಗಾಗಿ ಅವರ ಪಾಲಿಗೆ ಈ ಬಾರಿಯ ಎಲೆಕ್ಷನ್​ ತುಂಬ ವಿಶೇಷ. ಮಗಳ ಬಗ್ಗೆ ಸುದೀಪ್​ (Kichcha Sudeep) ಮಾತಾಡಿದ್ದಾರೆ. ‘ನನ್ನ ಮಗಳು ಫಸ್ಟ್ ಟೈಮ್ ವೋಟ್ ಮಾಡಿದ್ದಾಳೆ. ದಾರಿಯುದ್ದಕ್ಕೂ ವಿಡಿಯೋ ಮಾಡ್ತಾ ಬಂದೆ. ಆಕೆ ಏನೇ ಮಾಡಿದ್ರೂ ಅದನ್ನು ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ’ ಎಂದಿದ್ದಾರೆ ಸುದೀಪ್​.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News