ISRO : ಚಂದ್ರನ ಮೇಲೆ ಇಳಿಯುವವರೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚಂದ್ರಯಾನ ಸರಣಿಯ ಚಂದ್ರನ ಶೋಧನೆಯನ್ನು ಮುಂದುವರೆಸಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದರು.
Shukrayana: ಆರಂಭದಲ್ಲಿ, ಆರ್ಬಿಟರ್ ಶುಕ್ರ ಗ್ರಹದ ಸುತ್ತಲೂ ಒಂದು ಅಂಡಾಕಾರದ ಕಕ್ಷೆಯಲ್ಲಿ ಚಲಿಸಲಿದೆ. ಈ ಕಕ್ಷೆಯ ಶುಕ್ರನಿಗೆ ಅತ್ಯಂತ ಸನಿಹದ ಬಿಂದುವನ್ನು ಪೆರಿಯಾಪ್ಸಿಸ್ ಎಂದು ಕರೆಯಲಾಗಿದ್ದು, ಅದು ಶುಕ್ರನ ಮೇಲ್ಮೈಯಿಂದ 500 ಕಿಲೋಮೀಟರ್ ದೂರದಲ್ಲಿದ್ದರೆ, ಕಕ್ಷೆಯಲ್ಲಿ ಶುಕ್ರ ಗ್ರಹದ ಅತ್ಯಂತ ದೂರದ ಬಿಂದು 60,000 ಕಿಲೋಮೀಟರ್ ದೂರದಲ್ಲಿದ್ದು, ಇದನ್ನು ಅಪೊಆಪ್ಸಿಸ್ ಎನ್ನಲಾಗುತ್ತದೆ. ಶುಕ್ರಯಾನ-1 ಉಪಗ್ರಹವನ್ನು ಜಿಎಸ್ಎಲ್ವಿ (ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ.
What is Samudryaan Mission: ಇದೆಲ್ಲದರ ನಡುವೆ ಸಮುದ್ರಯಾನ ಮಿಷನ್ ಕಳುಹಿಸಲು ಸಿದ್ಧತೆಗಳು ಆರಂಭವಾಗಿದೆ. ಈ ಮೂಲಕ ಸಮುದ್ರದ ಆಳದಲ್ಲಿ ಅಡಗಿರುವ ಖನಿಜ ಸಂಪತ್ತಿನ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.
ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರೇಡಾರ್ (ಡಿಎಫ್ಎಸ್ಎಆರ್) ಒಂದು ರೇಡಾರ್ ಉಪಕರಣವಾಗಿದ್ದು, ಎರಡು ಪ್ರತ್ಯೇಕ ಆವರ್ತನಗಳಲ್ಲಿ (ಫ್ರೀಕ್ವೆನ್ಸಿ) ಕಾರ್ಯಾಚರಿಸುತ್ತದೆ. ಅವು ಸಾಮಾನ್ಯವಾಗಿ ಎಲ್-ಬ್ಯಾಂಡ್ (20-30 ಗಿಗಾ ಹರ್ಟ್ಸ್) ಹಾಗೂ ಎಸ್ ಬ್ಯಾಂಡ್ (2-4 ಗಿಗಾ ಹರ್ಟ್ಸ್) ಆಗಿವೆ. ಈ ಸಾಮರ್ಥ್ಯದ ಕಾರಣದಿಂದ, ಉಪಕರಣ ಚಂದ್ರನಂತಹ ವಸ್ತುಗಳ ಮೇಲ್ಮೈಯನ್ನು ಒಂದು ಆವರ್ತನದ ರೇಡಾರ್ಗಿಂತ ಹೆಚ್ಚು ಸ್ಪಷ್ಟವಾಗಿ ಛಾಯಾಗ್ರಹಣ ನಡೆಸುತ್ತದೆ.
Chandrayaan-3: ಅನಾಗ್ಲಿಫ್ ಚಿತ್ರಗಳು ವಿಜ್ಞಾನಿಗಳಿಗೆ ಮತ್ತು ಸಂಶೋಧಕರಿಗೆ ಚಂದ್ರನ ಮೇಲ್ಮೈಯನ್ನು 3ಡಿಯಲ್ಲಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಕೆಂಪು ಮತ್ತು ಸಯಾನ್ ಗಾಜುಗಳುಳ್ಳ ಕನ್ನಡಕವನ್ನು ಬಳಸಿ, ಅವರು ಚಂದ್ರನ ಮೇಲ್ಮೈಯ ಆಳ ಮತ್ತು ಟೋಪೋಗ್ರಫಿಯನ್ನು ಗಮನಿಸಿ, ಚಂದ್ರನ ಭೂವಿಜ್ಞಾನ ಮತ್ತು ರಚನೆಯನ್ನು ತಿಳಿಯಬಹುದು.
ಕೆಲವು ದಿನಗಳ ಹಿಂದಷ್ಟೇ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೃದುವಾಗಿ ಲ್ಯಾಂಡ್ ಆಗಿ ಚಂದ್ರಯಾನ 3 ಯಶಸ್ವಿಯಾಗಿತ್ತು. ಇದೀಗ ಮತ್ತೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ಏನಿದು ಎರಡೆರಡು ಬಾರಿ ಲ್ಯಾಂಡಿಂಗ್ ಅಂತಿರಾ.? ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.
¶¶ ಸೋಲಾರ್ ಸೈಕಲ್ ಎನ್ನುವುದು ಅಂದಾಜು ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಸೂರ್ಯನ ಕಾಂತೀಯ ಕ್ಷೇತ್ರ ಹೊಂದುವ ಪರಿವರ್ತನೆಯಾಗಿದೆ. ¶¶
ಸೂರ್ಯ ಒಂದು ಬೃಹತ್, ಬಿಸಿಯಾದ ಅನಿಲದ ಉಂಡೆ. ಈ ಅನಿಲ ಸುತ್ತ ಮುತ್ತ ಚಲಿಸುತ್ತಾ, ದೊಡ್ಡ ಕಾಂತೀಯ ಕ್ಷೇತ್ರವನ್ನು ನಿರ್ಮಿಸುತ್ತದೆ. ಈ ಕಾಂತೀಯ ಕ್ಷೇತ್ರ ಸೋಲಾರ್ ಸೈಕಲ್ ಎಂದು ಕರೆಯಲ್ಪಡುವ ಸೌರ ಚಕ್ರವನ್ನು ಹೊಂದುತ್ತದೆ.
ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ, ಸೂರ್ಯನ ಕಾಂತೀಯ ಕ್ಷೇತ್ರ ಬದಲಾಗುತ್ತದೆ. ಇದು ಒಂದು ಅಯಸ್ಕಾಂತ ತಿರುಗಿದ ರೀತಿಯಲ್ಲಿ ನಡೆಯುತ್ತದೆ. ಸೂರ್ಯನ ಕಾಂತೀಯ ಕ್ಷೇತ್ರದ ಉತ್ತರ ಮತ್ತು ದಕ್ಷಿಣ ಧ್ರುವಗಳು ಪರಸ್ಪರ ಸ್ಥಾನ ಬದಲಾವಣೆ ಹೊಂದುತ್ತವೆ. ಅವುಗಳು ಮರಳಿ ಮೊದಲಿನ ಸ್ಥಾನಕ್ಕೆ ತಲುಪಲು ಇನ್ನೂ ಹನ್ನೊಂದು ವರ್ಷ ತಗಲುತ್ತದೆ.
Rakshabandhan: ನಿನ್ನೆಯಷ್ಟೇ ಇಸ್ರೋದ ಚಂದ್ರಯಾನ-3 ಲ್ಯಾಂಡರ್ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ವೈರಲ್ ಆಗುತ್ತಿದ್ದು, ಎಲ್ಲರ ಗಮನ ಸೆಳೆದಿದೆ.
Chandrayaan 3: ಇಸ್ರೋ ಮತ್ತು ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇಡೀ ಯೋಜನೆಗೆ ಗೆಲುವು ಸಿಕ್ಕಿದೆ. ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿಧಾನವಾಗಿ ಇಳಿಯುವ ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು.
Chandrayaan 3: ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ನಲ್ಲಿ ಯಶಸ್ವಿಯಾದರೆ ಅಮೆರಿಕ, ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಭಾರತ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಚಂದ್ರಯಾನ 3 ಯಶಸ್ವಿಯಾಗಲಿ ಎಂದು ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಚರ್ಚ್ ಹಾಗೂ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದರೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಲಾವಿದರೊಬ್ಬರು ರಂಗೋಲಿ ಚಂದ್ರಯಾನ -3 ಅನ್ನು ಚಿತ್ರಿಸಿದ್ದಾರೆ.
ಚಂದ್ರಯಾನ-3 ಯಶಸ್ಸಿಗೆ ಉಡುಪಿಯಲ್ಲಿ ವಿಶೇಷ ಪೂಜೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಪೂಜೆ ಸಲ್ಲಿಕೆ ಇಡೀ ದೇಶ ಕಾಯುತ್ತಿರುವ ಸಂಭ್ರಮದ ಕ್ಷಣಗಳಿಗಾಗಿ ಪ್ರಾರ್ಥನೆ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸೇಫಾಗಿ ಇಳಿಯುವಂತೆ ಪೂಜೆ ಹಿಂದೂ ಕಾರ್ಯಕರ್ತರಿಂದ ವಿಶೇಷ ಹೂವಿನ ಪೂಜೆ ಪ್ರಾರ್ಥನೆ
ಚಂದ್ರಯಾನ–3ರ ಎರಡನೆಯ ಮತ್ತು ಕೊನೆಯ ಡಿ– ಬೂಸ್ಟಿಂಗ್ ಕಾರ್ಯ ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಡ ಬೆನ್ನಲ್ಲೇ ಚಂದ್ರಯಾನ 3 ನೌಕೆಯ ಚಂದ್ರನ ಮೇಲ್ಮೈ ಮೇಲೆ ಲ್ಯಾಂಡಿಂಗ್ ಆಗುವ ದಿನಾಂಕ ಘೋಷಣೆ ಮಾಡಿದೆ.
ಚಂದ್ರಯಾನ-3ರ ಉಡಾವಣೆಯ ಕೌಂಟ್ ಡೌನ್ ಗುರುವಾರ, ಜುಲೈ 13ರಂದು ಭಾರತೀಯ ಕಾಲಮಾನ 14:35ಕ್ಕೆ ಆರಂಭಗೊಂಡಿದೆ. ಈ ಉಡಾವಣೆ, ಶುಕ್ರವಾರ, ಜುಲೈ 14ರಂದು ಮಧ್ಯಾಹ್ನ 2:35ಕ್ಕೆ ನೆರವೇರಲಿದೆ. ಚಂದ್ರಯಾನ-3ರಂತಹ ಪ್ರಮುಖ ಯೋಜನೆಗೆ ಹಲವು ಮಹತ್ವದ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಅವುಗಳಲ್ಲಿ ಕೆಲವನ್ನು ನಾವು ಇಲ್ಲಿ ಗಮನಿಸೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.