ಬೆಸ್ಕಾಂ ಡಿಜಿಟಲ್ ಮೀಟರ್, ಗ್ರಾಹಕರಿಗೆ ತಪ್ಪದ ತಲೆನೋವು..!. ನೂತನ ಡಿಜಿಟಲ್ ಮೀಟರ್ ಅಳವಡಿಕೆಯಿಂದ ಸಿಗುತ್ತಿಲ್ಲ ಮುಕ್ತಿ. ಡಬಲ್ ಬರ್ತಿದೆ ಕರೆಂಟ್ ಬಿಲ್. ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿರೋ ಅಧಿಕಾರಿಗಳ ನಡೆಗೆ ಆಕ್ರೋಶ. ಬೆಸ್ಕಾಂ ನಡೆಗೆ ಅಸಮಾಧಾನ ಹೊರ ಹಾಕಿದ ಬೆಸ್ಕಾಂ ಗ್ರಾಹಕರು.
ಡಿಜಿಟಲ್ ಮೀಟರ್ ಗಳಲ್ಲಿ ಸಂಪರ್ಕಿತ ಲೋಡ್ ದಾಖಲಾಗುವ ಸೌಲಭ್ಯವಿದು, ಸಂಪರ್ಕಿತ ಲೋಡ್ ಮಂಜೂರಾದ ವಿದ್ಯುತ್ ಲೋಡ್ ಗಿಂತ ಜಾಸ್ತಿ ಇದ್ದಲ್ಲಿ ಗ್ರಾಹಕರು ತಾವು ಬಳಸಿರುವ ವಿದ್ಯುತ್ ಲೋಡ್ ವ್ಯತ್ಯಾಸಕ್ಕೆ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ.
ಮೆಟ್ರೋ ಪಿಲ್ಲರ್ ದುರಂತ ಬಳಿಕ ಈಗ ಬೆಸ್ಕಾಂ ಅವಾಂತರ ಬಯಲಾಗಿದೆ. ಹೆಣ್ಣೂರು -ಕೊತ್ನೂರು ಮುಖ್ಯ ರಸ್ತೆಯಲ್ಲಿ ಲೈಟ್ ಕಂಬ ವಾಲಿದೆ. ವಿದ್ಯುತ್ ಕಂಬ ವಾಲಿದ್ರೂ ಬೆಸ್ಕಾಂ ಡೋಂಟ್ಕೇರ್ ಎಂದಿದೆ.
ಅದೇ ರೀತಿ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಬೆಸ್ಕಾಂ ಕ್ರಮಗೊಂಡಿದ್ದು, ಕಳೆದ 3 ತಿಂಗಳಲ್ಲಿ ಬಾಕಿ ಇದ್ದ 1417.45 ಕೋಟಿ ರೂ. ನಲ್ಲಿ 358.3 ಕೋಟಿ ರೂ. ಬಿಲ್ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂ ಎಂ.ಡಿ ವಿವರಿಸಿದರು
BESCOM Vidyut Adalat : ಗ್ರಾಮೀಣ ಭಾಗದ ಗ್ರಾಹಕರ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯುತ್ ಅದಾಲತ್ನಲ್ಲಿ 2513 ಗ್ರಾಹಕರು ಭಾಗವಹಿಸಿ 911 ಮನವಿಗಳನ್ನು ಸಲ್ಲಿಸಿದರು.
ಹಸಿರು ಇಂಧನ ಬಳಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ʼಸೋಲಾರ್ ರೂಫ್ ಟಾಪ್ ಹಂತ-02ʼ ಯೋಜನೆಗೆ ಬೆಸ್ಕಾಂ ಚಾಲನೆ ನೀಡಿದ್ದು, ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಸೋಲಾರ್ ಘಟಕಗಳ ಅಳವಡಿಕೆಗೆ ಉತ್ಸುಕರಾಗಿದ್ದಾರೆ.
ಟಿಸಿ ನಿರ್ವಹಣೆಯನ್ನು ಎಲ್ಲಾ 535 ಸೆಕ್ಷನ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5. 2022 ರಂದು ಚಾಲನೆ ನೀಡಲಾಗಿತ್ತು. ನವೆಂಬರ್ 24, 2022ರ ವೇಳೆಗೆ 102713 ಟಿಸಿಗಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರ ಮತ್ತು ವೈಟ್ ಫೀಲ್ಡ್ ವಿಭಾಗಗಳಿಗೆ ಬಿಡ್ಬ್ಲೂಎಸ್ ಎಸ್ ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗಗಳಿಗೆ ನೋಟಿಸ್ ನೀಡಿ ಬಿಸಿ ಮುಟ್ಟಿಸಲಾಗಿದೆ.
BESCOM: ಆರ್ಥಿಕ ಪರಿಸ್ಥಿತಿ ಸುಧಾರಿಸಲು ಬೆಸ್ಕಾಂನಿಂದ ನೂತನ ಶಿಕ್ಷೆ ಪ್ರಯೋಗವನ್ನು ಆರಂಭಿಸಿದ್ದು ಈ ಕುರಿತಂತೆ ಬೆಸ್ಕಾಂ ಟ್ವೀಟ್ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ವಿದ್ಯುತ್ ಸಂಪರ್ಕ ಒಪ್ಪಂದ ರದ್ದುಗೊಳಿಸುವಂತಹ ತೊಂದರೆ ಬೇಡ ಅಂದರೆ ಸರಿಯಾದ ಟೈಮ್ ಗೆ ವಿದ್ಯುತ್ ಬಿಲ್ ಪಾವತಿಸಿ.
ಬೆಸ್ಕಾಂ ಸಾಫ್ಟ್ ವೇರ್ ನ ತಾಂತ್ರಿಕ ದೋಷದಿಂದಾಗಿ ನವೆಂಬರ್ 1 ರಂದು ಬೆಂಗಳೂರಿನ ದೊಡ್ಡಕಮ್ಮನಹಳ್ಳಿ ನಿವಾಸಿಗಳು ಬ್ಬರ ಮನೆಗೆ ನೀಡಿದ್ದ 22 ಸಾವಿರ ಕರೆಂಟ್ ಬಿಲ್ ಸಂಬಂಧ ಬೆಸ್ಕಾಂ ಅಧಿಕಾರಿಗಳು ಇದೀಗ ಸ್ಪಷ್ಟನೆ ನೀಡಿದ್ದಾರೆ.
67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಬೆಸ್ಕಾಂ ಬಹಳ ಅರ್ಥಪೂರ್ಣವಾಗಿ ಶುಕ್ರವಾರ ಆಚರಿಸಿತು.
ಬೆಸ್ಕಾಂ ನೀಡುವ ಮಾಸಿಕ ವಿದ್ಯುತ್ ಬಿಲ್ನಲ್ಲಿ ನಮೂದಿಸಿರುವ ನಿಗದಿತ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬರು ಸುಳ್ಳು ಮಾಹಿತಿಯನ್ನು ಹರಿಬಿಟ್ಟಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡ ಕಂಬದ ಸಂಪರ್ಕ ಮರುಜೋಡಣೆ ಮಾಡಲು ಹೋಗಿ ಬೆಸ್ಕಾಂನ ಪವರ್ ಮನ್ ಮಹೇಶ್ ಗೌಡರ (38) ಅವರು ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಸೆಪ್ಟೆಂಬರ್ 10 ರಂದು ನಡೆದಿದೆ.
ಅಪ್ಪು ಎಂಬ ಯುವಕ ನಗರದ ಹಲಸೂರಿನ ಯಲ್ಲಮ್ಮನ ಕೋಯಿಲ್ ಸ್ಟ್ರೀಟ್ ಬಳಿಯ ರಾಜಕಾಲುವೆಯಲ್ಲಿ ಮುಂಜಾನೆ 6.30 ರ ಸುಮಾರಿಗೆ ಕಬ್ಬಿಣ ಆಯಲು ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಈ ಪ್ರಸ್ತಾವನೆ ಒಪ್ಪಿಸಿ ಸೂಚಿಸಿದ್ದರೂ ಸಹ ಅವುಗಳು ಕೋರಿದಷ್ಟು ದರಗಳನ್ನು ನಿಗದಿಪಡಿಸಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಎಸ್ಕಾಂಗಳು ಎಷ್ಟು ದರ ಹೆಚ್ಚಳ ಮಾಡಲು ಕೋರಿದ್ದವು ಎಂಬ ಬಗ್ಗೆ ತಿಳಿಯೋಣ.
ವಿದ್ಯುತ್ ಬಿಲ್ ವಿಚಾರದಲ್ಲಿ ಬೆಸ್ಕಾಂ ಮತ್ತೆ ಯಡವಟ್ಟನ್ನ ಮಾಡುವ ಮೂಲಕ ದಾವಣಗೆರೆ ಜನರಿಗೆ ಶಾಕ್ ನೀಡಿದೆ. ಇಲ್ಲಿಯ ಮನೆಗಳಿಗೆ ವಿದ್ಯುತ್ ಬಿಲ್ 1.48 ಲಕ್ಷ ರೂ ಮತ್ತೊಂದು 80 ಸಾವಿರ, 72 ಸಾವಿರ ಹೀಗೆ ಸಾವಿರಾರು ರೂಪಾಯಿ ಬಿಲ್ ನೀಡುವ ಮೂಲಕ ಬೆಸ್ಕಾಂ ಜನರಿಗೆ ತಡೆದುಕೊಳ್ಳಲಾಗದ ಶಾಕ್ ನೀಡಿದೆ.
ಬೆಂಗಳೂರು ಭಾಗದ ಸಾಕಷ್ಟು ಜಾಗದಲ್ಲಿ ಟ್ರಾನ್ಸ್ಫಾರ್ಮರ್ಗಳ ಸಮಸ್ಯೆ ಇದೆ. ಈ ಬಗ್ಗೆ ಸಾರ್ವಜನಿಕರ ದೂರ ಬಂದರೂ ಅಧಿಕಾರಿಗಳು ಮಾತ್ರ ತಲೆಕೆಡಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮೃತಪಟ್ಟ ತಂದೆ ಮಗಳ ಪ್ರಕರಣದ ಬಳಿಕ ಎಚ್ಚೆತುಕೊಂಡಿದ್ದಾರೆ. ಅಪಾಯಕಾರಿ ಅನುಪಯುಕ್ತ ಟ್ರಾನ್ಸ್ಫಾರ್ಮರ್ಗಳನ್ನು ಸರಿಪಡಿಸುವ ಕೆಲಸ ಮಾಡಲಾಗ್ತಿದ್ದು ಕಳೆದ 15 ದಿನಗಳಲ್ಲಿ ಸಾವಿರಾರು ಟ್ರಾನ್ಸ್ಫಾರ್ಮರ್ಗಳನ್ನ ಸರಿಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.