ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?

Samantha: ಸೌತ್‌ ನಟಿ ಸಮಂತಾ ಸಿನಿಮಾಗಳಲ್ಲಿ ದೇವತೆ ಪಾತ್ರ ಮಾಡದಿರಲು ನಿರ್ಧರಿಸಿದ್ದಾರಂತೆ.. ಹಾಗಾದ್ರೆ ಇದಕ್ಕೆ ಕಾರಣ ಏನು? ಇಲ್ಲಿ ತಿಳಿಯೋಣ..  

Written by - Savita M B | Last Updated : Jul 1, 2024, 07:26 PM IST
  • ಅತಿ ಕಡಿಮೆ ಅವಧಿಯಲ್ಲಿ ತನಗೊಂದು ವಿಶಿಷ್ಟವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಾಯಕಿ ಸಮಂತಾ..
  • ಇತ್ತೀಚೆಗೆ, ಅವರು ಒಂದು ಪಾತ್ರವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ..
ಸಿನಿಮಾದಲ್ಲಿ ದೇವತೆ ಪಾತ್ರ ಮಾಡಲು ನಿರಾಕರಿಸಿದ್ದರಂತೆ ಸಮಂತಾ! ಕಾರಣ ಏನು ಗೊತ್ತಾ?  title=

South Actress Samantha: ಅತಿ ಕಡಿಮೆ ಅವಧಿಯಲ್ಲಿ ತನಗೊಂದು ವಿಶಿಷ್ಟವಾದ ಅಭಿಮಾನಿ ಬಳಗವನ್ನು ಸಂಪಾದಿಸಿದ ನಾಯಕಿ ಸಮಂತಾ.. ಸಿನಿಮಾಗಳಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ಪ್ರೇಕ್ಷಕರನ್ನು ಸೆಳೆಯುತ್ತಿರುವ ಸಮಂತಾಗೆ ಆಫರ್ ಗಳು ಬರುತ್ತಲೇ ಇವೆ. ವೆಬ್ ಸೀರಿಸ್ ಮೂಲಕ ಸೌತ್ ಮಾತ್ರವಲ್ಲದೆ ಉತ್ತರದಲ್ಲೂ ಜನಪ್ರಿಯತೆ ಗಳಿಸಿರುವ ಈಕೆಯನ್ನು ಆಯ್ಕೆ ಮಾಡುವ ನಿರ್ದೇಶಕರು, ನಿರ್ಮಾಪಕರ ಪಟ್ಟಿ ಹೆಚ್ಚಾಗುತ್ತಿದೆ. ಆದರೆ ಸಮಂತಾ ತನ್ನ ಡೇಟ್‌ಗಳ ಬಗ್ಗೆ ತುಂಬಾ ಗಮನ ಹರಿಸುತ್ತಿದ್ದು, ಅಲ್ಲದೆ ಕೆಲವು ಪಾತ್ರಗಳನ್ನು ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ, ಅವರು ಒಂದು ಪಾತ್ರವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ..

ತಮಿಳು ಚಿತ್ರರಂಗದ ವರದಿಗಳ ಪ್ರಕಾರ, ಇತ್ತೀಚೆಗೆ ಸಮಂತಾ ತಮಿಳು ನಿರ್ದೇಶಕ ಮತ್ತು ನಟ ಆರ್‌ಜೆ ಬಾಲಾಜಿ ಅವರನ್ನು ಭೇಟಿಯಾಗಿದ್ದರು. ಅವರ ನಿರ್ದೇಶನದ, ತೆಲುಗು ಚಲನಚಿತ್ರ ಅಮ್ಮೋರು 2020 ರಲ್ಲಿ ಬಿಡುಗಡೆಯಾಯಿತು.. ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು... ಈಗ ಆ ಸಿನಿಮಾದ ಸೀಕ್ವೆಲ್ ಪ್ಲಾನ್ ಮಾಡಲಾಗಿದೆ. ಹೀಗಾಗಿ ನಯನತಾರಾ ಅವರ ತಾಯಿಯ ಪಾತ್ರವನ್ನು ನಿರ್ವಹಿಸಲು ಸಮಂತಾ ಅವರನ್ನು ಸಂಪರ್ಕಿಸಿದ್ದರು..

ಇದನ್ನೂ ಓದಿ-ಮೋದಿಗೆ, ಮದುವೆಯ ಕರೆಯೋಲೆ ನೀಡಿದ ನಟಿ ವರಲಕ್ಮಿ ಶರತ್‌ ಕುಮಾರ್‌

ಸ್ಕ್ರಿಪ್ಟ್ ಇಷ್ಟವಾಗಿದೆ ಆದರೆ ದೇವತೆಗಳ ಪಾತ್ರವನ್ನು ಮಾಡುವುದಿಲ್ಲ ಎಂದು ಸಮಂತಾ ಹೇಳಿದ್ದಾರೆ ಎಂದು ವರದಿಯಾಗಿದೆ. ಅದಕ್ಕೆ ಕಾರಣ ಸಮಂತಾ ಅವರನ್ನು ಒಮ್ಮೆ ಅಂತಹ ಪಾತ್ರದಲ್ಲಿ ನೋಡಿದರೇ ಅವರಲ್ಲಿರುವ ಗ್ಲಾಮರ್ ಆ್ಯಂಗಲ್ ನೋಡಲು ಯಾರಿಗೂ ಆಸಕ್ತಿ ಇರುವುದಿಲ್ಲ ಎಂಬುದು ಸಮಂತಾ ಅಭಿಪ್ರಾಯ. ಈ ಬ್ಯೂಟಿ ಸದ್ಯ ಬಾಲಿವುಡ್ ನಲ್ಲಿ ನಾಯಕಿಯಾಗಿ ನೆಲೆಯೂರುವ ಯೋಚನೆಯಲ್ಲಿದ್ದಾರೆ. ಸಲ್ಮಾನ್, ಶಾರುಖ್ ಅವರಂತಹ ಸ್ಟಾರ್‌ಗಳ ಎದುರು ನಟಿಸುವ ಉತ್ಸಾಹ ತೋರಿದ್ದರಿಂದ ಈ ಪಾತ್ರಕ್ಕೆ ನೋ ಅಂದಿದ್ದಾರೆ ಎನ್ನಲಾಗಿದೆ. 

ನಟಿ ಸಮಂತಾ ತಮ್ಮ ಅತ್ಯುತ್ತಮ ಅಭಿನಯದಿಂದ ಸತತವಾಗಿ ಸ್ಟಾರ್ ಹೀರೋಗಳ ಎದುರು ನಟಿಸಿ.. ಅನೇಕ ಸೂಪರ್ ಹಿಟ್ಗಳನ್ನು ನೀಡಿದರು.. ಆದರೆ ಅವರ ವೈಯಕ್ತಿಕ ಜೀವನದಲ್ಲಿನ ಕೆಲವು ಸಮಸ್ಯೆಗಳಿಂದ ಅವರು ಸ್ವಲ್ಪ ಸಮಯದವರೆಗೆ ಸಿನಿಮಾಗಳಿಂದ ದೂರವಿದ್ದರು. ಇತ್ತೀಚೆಗಷ್ಟೇ ಸಮಂತಾ ಮತ್ತೆ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಕಳೆದ ವರ್ಷ ಶಾಕುಂತಲಂ ಮತ್ತು ಖುಷಿ ಚಿತ್ರದ ಮೂಲಕ ಸಮಂತಾ ಪ್ರೇಕ್ಷಕರ ಮುಂದೆ ಬಂದಿದ್ದರು.. 

ಇದನ್ನೂ ಓದಿ-ಅನಂತ್‌ ಅಂಬಾನಿ ಕೈ ಗಡಿಯಾರದ ಬೆಲೆ ಎಷ್ಟು..? ಗೊತ್ತಾದರೆ ನೀವು ಶಾಕ್‌ ಆಗೋದು ಗ್ಯಾರೆಂಟಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News