Traffic Police : ವಾಹನಗಳ ದಟ್ಟನೆ ದಿನೇ ದಿನೆ ಹೆಚ್ಚುತ್ತಿದೆ. ಟ್ರಾಫಿಕ್ ಪೋಲಿಸರಿಗೂ ಅವುಗಳ ನಿಯಂತ್ರಣ ಸ್ವಲ್ಪ ಕಷ್ಟ ಸಾಧ್ಯವೇ. ಬೆಂಗಳೂರಿನಲ್ಲಿ ವ್ಹಿಲೀಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನಗರದ ಮುಖ್ಯ ರಸ್ತೆಗಳಲ್ಲಿಯೇ ಯಾವುದೇ ಭಯವಿಲ್ಲದೇ ವ್ಹೀಲಿಂಗ್ ಮಾಡುತ್ತಿದ್ದಾರೆ.
Karnataka Assembly Election 2023 :ವಿಧಾನಸಭಾ ಚುನಾವಣೆ ಮೇ 10ಕ್ಕೆ ನಡೆಯಲಿದ್ದು, ಮತದಾನ ನಡೆಯುವ ಹಿಂದಿನ ದಿನ ಖಾಸಗಿ ಬಸ್ ಗಳಿಗೆ ಬೇಡಿಕೆ ಬಂದಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸುಮಾರು 7 ಸಾವಿರ ಬಸ್ ಗಳು ಸೇವೆ ಒದಗಿಸುವ ಬೇಡಿಕೆ ಬಂದಿದೆ.
Kusuma Hanumantharayappa : ಚುನಾವಣೆ ಸಮೀಪಿಸುತ್ತಿದ್ದಂತೆ ಕಾವು ಎಲ್ಲಡೆ ಹೆಚ್ಚಾಗುತ್ತಿದೆ. ಕದನ ಕಲಿಗಳು ಕರುನಾಡ ಕುರುಕ್ಷೇತ್ರಕ್ಕೆ ಭರ್ಜರಿ ತಯಾರಿಯಲ್ಲಿದ್ದಾರೆ. ಸದ್ಯಕ್ಕೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಅಬ್ಬರದಿಂದ ಸಾಗುತ್ತಿದ್ದು, ಈ ಮಧ್ಯೆ ಆರ್ ಆರ್ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಬೆಂಗಳೂರು : ಚುನಾವಣೆ ಹೊತ್ತಲ್ಲಿ ಕುರುಡು ಕಾಂಚಾಣ ಸದ್ದು ಮಾಡಲಾರಂಭಿಸಿದೆ. ಸೂಕ್ತ ದಾಖಲೆಗಳಿಲ್ಲದೇ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಶಿವಕುಮಾರ್ ಹಾಗೂ ಸಂದೀಪ್ ಎಂಬುವವರನ್ನ ಭಾನುವಾರ ರಾತ್ರಿ ಬನಶಂಕರಿಯ ಯಾರಬ್ ನಗರ ಚೆಕ್ ಪೋಸ್ಟಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು 5.33 ಲಕ್ಷ ರೂ ವಿದೇಶಿ ಕರೆನ್ಸಿ ಜಪ್ತಿ ಮಾಡಿದ್ದಾರೆ.
Radhika Serial : ಪ್ರತಿಯೊಬ್ಬ ಯಶಸ್ಸು ಪಡೆದಿರುವ ವ್ಯಕ್ತಿಯ ಹಿಂದೆ ಸಾಕಷ್ಟು ಕಷ್ಟ ಪಟ್ಟ ದಿನಗಳಿರುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಕೆಲವರು ಆನೋವಿನ ದಿನಗಳನ್ನು ಹೇಳಿಕೊಳ್ಳುತ್ತಾರೆ, ಇನ್ನೂ ಕೆಲವರು ಹೇಳಿಕೊಳ್ಳುವುದಿಲ್ಲ. ಕಲಾವಿದ ಅಂತ ಕರೆಸಿಕೊಳ್ಳಲು ಸಾಕಷ್ಟು ಕಷ್ಟಗಳನ್ನು ನೋಡಲೇಬೇಕಾಗುತ್ತದೆ.
ಬೆಂಗಳೂರು: ಇತ್ತೀಚೆಗೆ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಹೆಸರಿನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನದ ಗಟ್ಟಿ ಎಗರಿಸಿದ್ದ ಬೆನ್ನಲ್ಲೇ ಮತ್ತೊಂದು ನಕಲಿ ಪೊಲೀಸ್ ವಂಚನೆ ಕಥೆ ಬಟಬಯಲಾಗಿದೆ. ಎಸ್ಪಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವರಿಂದ 1.75 ಕೋಟಿ ರೂಪಾಯಿ ವಂಚಿಸಿದ್ದು, ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಮಾಜಿ ಶಾಸಕ ಎನ್ ಸೂರ್ಯನಾರಾಯಣ ರೆಡ್ಡಿ, ಎನ್. ಭರತ್ ರೆಡ್ಡಿ, ಎನ್ ಶರತ್ ರೆಡ್ಡಿ ಮತ್ತು ಅವರ ಕಟುಂಬದವರು ಫೋರ್ಜರಿ ಮತ್ತು ಮೋಸದ ಮೂಲಕ ನಮ್ಮ ಆಸ್ತಿಯನ್ನು ಕಳಬಳಿಸಿದ್ದಾರೆ. ಇದರ ಬಗ್ಗೆ ನಮ್ಮ ಕುಟುಂಬದವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದೇವೆ.
ಕೆಎಸ್ ಆರ್ ಟಿಸಿ ಬಸ್ ಚಾಲಕರ ಮಗನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸಾಕ್ಷಾತ್ ಎಂಬ ಯುವಕ 05 ಬಾರಿ ಹ್ಯಾಂಡ್ಬಾಲ್ ಹಾಗೂ 03 ಬಾರಿ ನೆಟ್ಬಾಲ್ ನ್ಯಾಷನಲ್ ಲೆವಲ್ ನಲ್ಲಿ ಭಾಗವಹಿಸಿದ್ದಾರೆ. ಮುಂಬರುವ ಏಷಿಯನ್ ನೆಟ್ಬಾಲ್ ಚಾಂಪಿಯನ್ ಶಿಪ್ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುತ್ತಾರೆ.
ಬೆಂಗಳೂರು ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಉದ್ಯಮದ ತ್ವರಿತ ಅಭಿವೃದ್ದಿಯೊಂದಿಗೆ ನಗರವು ದೇಶದಾದ್ಯಂತ ಜನರನ್ನ ಆಕರ್ಷಿಸುತ್ತಿದೆ. ಇದರ ಪರಿಣಾಮವೇ ಹೆಚ್ಚು ಜನ ಮತ್ತು ವಾಹನಗಳು ರಸ್ತೆಗಿಳಿಯುತ್ತಿವೆ. ಇದು ಹೆಚ್ಚಿದ ಸಂಚಾರ ದಟ್ಟಣೆ ಮತ್ತು ಭಾರಿ ಸಂಖ್ಯೆಯ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.