IND vs SA : ಈ ಮೂವರು ಆಟಗಾರರಿಗೆ ಕ್ಯಾಪ್ಟನ್ ಧವನ್ ನಿಂದ ಅನ್ಯಾಯ!

ಟೀಂ ಇಂಡಿಯಾದ ಮೂರು ಆಟಗಾರರು ಈ ಸರಣಿಯಲ್ಲಿ ಪದಾರ್ಪಣೆ ಮಾಡಲು ಸಾಧ್ಯವಾಗದೆ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗಿದ್ರೆ, ಆ ಮೂವರು ಆಟಗಾರರು ಯಾರು? ಇಲ್ಲಿದೆ ನೋಡಿ.. 

Written by - Channabasava A Kashinakunti | Last Updated : Oct 11, 2022, 04:23 PM IST
  • ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಸರಣಿ
  • ಸರಣಿಯ ಕೊನೆಯ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ
  • ಸತತ ನಾಲ್ಕನೇ ಸರಣಿಯಲ್ಲಿ ಸಿಗಲಿಲ್ಲ ಅವಕಾಶ
IND vs SA : ಈ ಮೂವರು ಆಟಗಾರರಿಗೆ ಕ್ಯಾಪ್ಟನ್ ಧವನ್ ನಿಂದ ಅನ್ಯಾಯ! title=

India vs South Africa 3rd ODI : ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ 3 ಪಂದ್ಯಗಳ ODI ಸರಣಿಯ ಕೊನೆಯ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ಶಿಖರ್ ಧವನ್ ಕಳೆದ ಪಂದ್ಯಕ್ಕೆ ಆಡುವ 11ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಟೀಂ ಇಂಡಿಯಾದ ಮೂರು ಆಟಗಾರರು ಈ ಸರಣಿಯಲ್ಲಿ ಪದಾರ್ಪಣೆ ಮಾಡಲು ಸಾಧ್ಯವಾಗದೆ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗಿದ್ರೆ, ಆ ಮೂವರು ಆಟಗಾರರು ಯಾರು? ಇಲ್ಲಿದೆ ನೋಡಿ.. 

ಸತತ ನಾಲ್ಕನೇ ಸರಣಿಯಲ್ಲಿ ಸಿಗಲಿಲ್ಲ ಅವಕಾಶ

31ರ ಹರೆಯದ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ಈ ಸರಣಿಯಲ್ಲಿ ಪಾದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. ಐಪಿಎಲ್ ಪ್ರದರ್ಶನದ ನಂತರ ರಾಹುಲ್ ತ್ರಿಪಾಠಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಇದುವರೆಗೆ ಅದು ಕಂಡುಬಂದಿಲ್ಲ. ಈ ಸರಣಿಯ ಮೊದಲು, ಅವರನ್ನು ಮೂರು ಸರಣಿಗಳಲ್ಲಿ ಟೀಮ್ ಇಂಡಿಯಾದ ತಂಡದ ಭಾಗವಾಗಿ ಮಾಡಲಾಯಿತು, ಅವರು ಈ ಎಲ್ಲಾ ಸರಣಿಗಳಲ್ಲಿಯೂ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಯಿತು. ಐಪಿಎಲ್ 2022 ರಲ್ಲಿ, ರಾಹುಲ್ ತ್ರಿಪಾಠಿ 14 ಪಂದ್ಯಗಳಲ್ಲಿ 414 ರನ್ ಗಳಿಸಿದರು. ಈ ಅದ್ಭುತ ಪ್ರದರ್ಶನದಿಂದಾಗಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ.

ಇದನ್ನೂ ಓದಿ : BCCI New President : ಬಿಸಿಸಿಐ ನೂತನ ಅಧ್ಯಕ್ಷನಾಗಿ ಕನ್ನಡಿಗ ರೋಜರ್ ಬಿನ್ನಿ..!

ವಿರಾಟ್ ಗೆಳೆಯನಿಗೂ ಸ್ಥಾನ ಸಿಗಲಿಲ್ಲ

ಇಂದೋರ್‌ನ 29 ವರ್ಷದ ಸ್ಟೈಲಿಶ್ ಹಿಟ್ಟರ್ ರಜತ್ ಪಾಟಿದಾರ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) ಪ್ಲೇಆಫ್ ಪಂದ್ಯ, ರಣಜಿ ಟ್ರೋಫಿ ಫೈನಲ್ ಮತ್ತು ನ್ಯೂಜಿಲೆಂಡ್ ಎ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಗಳಿಸಿದರು. ಆದರೆ ರಜತ್ ಪಾಟಿದಾರ್ ಕೂಡ ಈ ಸರಣಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಐಪಿಎಲ್ 2022 ರಲ್ಲಿ, ರಜತ್ ಪಾಟಿದಾರ್ ಎಂಟು ಪಂದ್ಯಗಳಲ್ಲಿ 55.50 ಸರಾಸರಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 333 ರನ್ ಗಳಿಸಿದರು.

ಮುಖೇಶ್ ಕುಮಾರ್ ಗೆ ಚಾನ್ಸ್

ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್ ಬಲಗೈ ವೇಗದ ಬೌಲರ್ ಮತ್ತು ಎಡಗೈ ಬ್ಯಾಟ್ಸ್‌ಮನ್. ಅವರನ್ನು ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ, ಆದರೆ ಮುಖೇಶ್ ಕುಮಾರ್ ಈ ಸರಣಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಮುಖೇಶ್ ಕುಮಾರ್ 20 ವಿಕೆಟ್ ಕಬಳಿಸಿದ್ದರು. ಹಾಗೆ, ಅವರು ಇತ್ತೀಚೆಗೆ ನ್ಯೂಜಿಲೆಂಡ್ ಎ ವಿರುದ್ಧ ಆಡಿದ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

ಇದನ್ನೂ ಓದಿ : MRF T20I Rankingನಲ್ಲಿ ಮಹತ್ವದ ಹೆಜ್ಜೆ ಇಟ್ಟ ಟೀಂ ಇಂಡಿಯಾ ಮಹಿಳಾ ಪಡೆ: ಈ ಸಾಧನೆ ಕಂಡರೆ ಹೆಮ್ಮೆಯಾಗುತ್ತೆ

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News