Ketu Gochara 2023: ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ

Ketu Rashi Parivartane 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ನೆರಳು ಗ್ರಹಗಳು, ಪಾಪ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನವೇ ಕಷ್ಟಗಳ ಸರಮಾಲೆಯಲ್ಲಿ ಸಿಲುಕುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಈ ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅದು ಒಳ್ಳೆಯ ಫಲಗಳನ್ನು ಸಹ ನೀಡುತ್ತದೆ. 

Written by - Yashaswini V | Last Updated : Jul 13, 2023, 12:15 PM IST
  • ಈ ವರ್ಷದ ಅಂತ್ಯ ಭಾಗದಲ್ಲಿ ತುಲಾ ರಾಶಿಯನ್ನು ತೊರೆದು ಕನ್ಯಾ ರಾಶಿಯನ್ನು ಪ್ರವೇಶಿಸಲಿರುವ ಕೇತು
  • ಕೇತು ಸಂಕ್ರಮಣದಿಂದ ಬದಲಾಗಲಿದೆ ಕೆಲವು ರಾಶಿಯವರ ಜೀವನದ ಹಾದಿ
  • ಅವರ ಪ್ರತಿ ಕೆಲಸದಲ್ಲೂ ಸಿಗಲಿದೆ ಭಾರೀ ಯಶಸ್ಸು
Ketu Gochara 2023: ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ  title=
Ketu Rashi Parivartane

Ketu Gochara In Kanya Rashi: ಜ್ಯೋತಿಷ್ಯ ಶಾಸ್ತ್ರದಲ್ಲಿ ಇತರ ಗ್ರಹಗಳಂತೆಯೇ ಪಾಪ ಗ್ರಹಗಳಾದ ರಾಹು-ಕೇತು ಗ್ರಹಗಳ ಸಂಚಾರಕ್ಕೂ ಕೂಡ ಬಹಳ ಪ್ರಾಮುಖ್ಯತೆ ಇದೆ. ರಾಹುವಿನಂತೆ, ಕೇತು ಕೂಡ ನೆರಳು ಗ್ರಹ. ಈ ಗ್ರಹಗಳು ಸದಾ ಹಿಮ್ಮುಖವಾಗಿ ಚಲಿಸುವ ಗ್ರಹಗಳು. ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳ ಪ್ರಕಾರ, ರಾಹು-ಕೇತು ಗ್ರಹಗಳು ಜಾತಕದಲ್ಲಿ ಅಶುಭ ಸ್ಥಾನದಲ್ಲಿದ್ದರೆ ಅವರ ಜೀವನದಲ್ಲಿ ಕಷ್ಟಕ್ಕೆ ಕೊನೆಯೇ ಇರುವುದಿಲ್ಲ. ಹಾಗಾಗಿಯೇ, ರಾಹು-ಕೇತುಗಳ ಹೆಸರು ಕೇಳಿದರೆ ಜನರು ಬೆಚ್ಚಿಬೀಳುತ್ತಾರೆ. ಆದರೆ, ಈ ಗ್ರಹಗಳು ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ಅವು ಮಂಗಳಕರ ಫಲಗಳನ್ನು ನೀಡುತ್ತವೆ. 

ನೆರಳು ಗ್ರಹಗಳಲ್ಲಿ ಒಂದಾದ ಕೇತು ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಸದ್ಯ ತುಲಾ ರಾಶಿಯಲ್ಲಿ ಸಂಚರಿಸುತ್ತಿರುವ ಕೇತು  ಅಕ್ಟೋಬರ್ 30, 2023ರಂದು ರಾಶಿ ಪರಿವರ್ತನೆ ಹೊಂದುವ ಮೂಲಕ ಕನ್ಯಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ಕೂಡ ತೆರೆಯಲಿವೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಕಾಮಿಕಾ ಏಕಾದಶಿಯಂದು ಈ ವಸ್ತುಗಳನ್ನು ದಾನ ಮಾಡಿದರೆ ಎಂದಿಗೂ ಇರಲ್ಲ ಹಣದ ಕೊರತೆ

ಕನ್ಯಾ ರಾಶಿಯಲ್ಲಿ ಕೇತು ಸಂಕ್ರಮಣದಿಂದ 3 ರಾಶಿಯವರಿಗೆ ಅದೃಷ್ಟ, ಇನ್ನಿರುವುದಿಲ್ಲ ಯಾವುದೇ ಚಿಂತೆ: 
ಮೇಷ ರಾಶಿ: 

ಕೇತು ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರ ಜೀವನದ ದಿಕ್ಕೆ ಬದಲಾದಲಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಶತ್ರು ನಾಶವಾಗಲಿದ್ದು, ರೋಗ-ರುಜಿನಗಳಿಂದಲೂ ಮುಕ್ತಿ ದೊರೆಯಲಿದೆ ಮಾತ್ರವಲ್ಲ, ಹಣದ ಹರಿವು ಹೆಚ್ಚಾಗಲಿದ್ದು, ಸಾಲಗಳಿಂದಲೂ ಮುಕ್ತಿ ಹೊಂದುವಿರಿ. ವೈವಾಹಿಕ ಜೀವನದಲ್ಲಿ ಮಾಧುರ್ಯ ಮೂಡಲಿದೆ. ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ-ವ್ಯವಹಾರದಲ್ಲಿ ಮುನ್ನಡೆ ಸಾಧಿಸುವಿರಿ. ಹೊಸ ಕೆಲಸ ಆರಂಭಿಸಲು ಯೋಚಿಸುತ್ತಿರುವವರಿಗೂ ಕೂಡ ಇದು ಉತ್ತಮ ಸಮಯವಾಗಿದೆ. 

ಕರ್ಕಾಟಕ ರಾಶಿ: 
ತುಲಾ ರಾಶಿಯನ್ನು ತೊರೆದು ಕನ್ಯಾ ರಾಶ್ಯನ್ನು ಪ್ರವೇಶಿಸಲಿರುವ ಕೇತು ಸಂಚಾರವು ಕರ್ಕಾಟಕ ರಾಶಿಯವರಿಗೆ ಸಹೋದರ ಸಂಬಂಧವನ್ನು ಗಟ್ಟಿಗೊಳಿಸಲಿದೆ. ಹಣ- ಆಸ್ತಿಗೆ ಸಂಬಂಧಿಸಿದ ಕೋರ್ಟು ಕಚೇರಿ ವ್ಯಾಜ್ಯಗಳಲ್ಲಿ ಜಯ ನಿಮ್ಮದಾಗಲಿದೆ. ನಿಮ್ಮ ಸಂವಹನ, ಬರವಣಿಗೆಯಿಂದಾಗಿ ಇತರರನ್ನು ನಿಮ್ಮತ್ತ ಆಕರ್ಷಿಸುವಿರಿ, ಇದು ಹೊಸ ಕೆಲಸವನ್ನು ಆರಂಭಿಸಲು ನಿಮಗೆ ಅಡಿಪಾಯವಾಗಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಜೀವನದಲ್ಲಿ ಪ್ರಗತಿಯ ಹೊಸ ಹಾದಿಯನ್ನು ಕಾಣುವಿರಿ. 

ಇದನ್ನೂ ಓದಿ- Budha Udaya: ಇಂದಿನಿಂದ ಈ ರಾಶಿಯವರಿಗೆ ಭಾಗ್ಯೋದಯ

ವೃಶ್ಚಿಕ ರಾಶಿ: 
ಸ್ನೇಹಿತರು, ಸಂಪತ್ತಿಗೆ ಸಂಬಂಧಿಸಿದ ಮನೆಯಲ್ಲಿ ಕೇತು ಸಂಚಾರವು ವೃಶ್ಚಿಕ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ಸಮಯದಲ್ಲಿ ನಿಮ್ಮ ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳಲಿದ್ದು, ಸಂಪತ್ತಿನ ಹೊಳೆಯೇ ಹರಿಯಲಿದೆ. ನೀವು ಅಂದುಕೊಂಡಂತೆ ಸರ್ಕಾರಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಮಾತ್ರವಲ್ಲ, ಹೊಸ ಕೆಲಸ ಆರಂಭಿಸುವವರಿಗೂ ಇದು ಸಕಾಲವಾಗಿದ್ದು ಯಶಸ್ಸಿನ ಉತ್ತುಂಗವನ್ನು ಏರುವಿರಿ. ಮನೆ-ವಾಹನ ಖರೀದಿಸುವ ಯೋಗವೂ ಇದೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News