ಎಲ್ಲಾ ರೈತರಿಗೂ ಸಿಗಲ್ಲ PM Kisan ನಿಧಿಯ ಲಾಭ; ಕಾರಣ...!

ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಕಳೆದ ವರ್ಷ 'ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ' ಯನ್ನು ಪ್ರಾರಂಭಿಸಿತು.

Written by - Yashaswini V | Last Updated : Feb 3, 2020, 09:13 AM IST
ಎಲ್ಲಾ ರೈತರಿಗೂ ಸಿಗಲ್ಲ PM Kisan ನಿಧಿಯ ಲಾಭ; ಕಾರಣ...! title=

ನವದೆಹಲಿ: ರೈತರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಮೋದಿ ಸರ್ಕಾರ ತನ್ನ ಮೊದಲ ಅವಧಿಯಲ್ಲಿ ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ರೈತರಿಗೆ ಪ್ರತಿವರ್ಷ 6,000 ರೂ. ನೀಡಲಾಗುವುದು ಎಂದು ಘೋಷಿಸಿತ್ತು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆ (PM Kisan Samman Nidhi) ಗೆ ಹಂಚಿಕೆಯನ್ನು 54,370.15 ಕೋಟಿ ರೂ.ಗೆ ಇಳಿಸಲು ಸರ್ಕಾರ ಪ್ರಸ್ತಾಪಿಸಿದೆ. ಇದಕ್ಕಾಗಿ ಬಜೆಟ್‌ನಲ್ಲಿ 75,000 ಕೋಟಿ ರೂ. ಅನುಮೋದನೆ ನೀಡಲಾಗಿದೆ. ಈ ಯೋಜನೆಗೆ ಹಣ ಹಂಚಿಕೆ ಕಡಿಮೆ ಮಾಡಲು ಕಾರಣ ಕೆಲವು ರಾಜ್ಯಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿನ ಸಮಸ್ಯೆ.

ಪಿಎಂ ಕಿಸಾನ್ ಯೋಜನೆಗಾಗಿ ಮೊತ್ತವನ್ನು ಕಡಿತಗೊಳಿಸಿದರೂ, ಮುಂದಿನ 2020-21ರ ಹಣಕಾಸು ವರ್ಷಕ್ಕೆ 75,000 ಕೋಟಿ ರೂ. ಮೀಸಲಿಡಲಾಗಿದ್ದು, ಈ ಯೋಜನೆಯಡಿ ಅರ್ಹ ರೈತರಿಗೆ ವಾರ್ಷಿಕವಾಗಿ ಒಟ್ಟು 6,000 ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯಡಿ 8 ಕೋಟಿ ರೈತರಿಗೆ ಸರ್ಕಾರ ಇದುವರೆಗೆ 43,000 ಕೋಟಿ ರೂ. ಪಾವತಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಅಂದಾಜಿನಲ್ಲಿ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ. ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಈ ಯೋಜನೆಯನ್ನು ಜಾರಿಗೊಳಿಸದಿರುವುದು ಇದಕ್ಕೆ ಕಾರಣ. ಅದೇ ಸಮಯದಲ್ಲಿ, ಕೆಲವು ರಾಜ್ಯಗಳಲ್ಲಿ ರೈತರ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎನ್ನಲಾಗಿದೆ.

ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಕಳೆದ ವರ್ಷ 'ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ' ಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ ಸಣ್ಣ ರೈತರಿಗೆ ವಾರ್ಷಿಕವಾಗಿ 6,000 ರೂ.ಗಳನ್ನು ಮೂರು ಸಮಾನ ಕಂತುಗಳಲ್ಲಿ ನೀಡಲು ವ್ಯವಸ್ಥೆ ಮಾಡಲಾಯಿತು. 6000 ರೂ. ಮೊತ್ತವನ್ನು 2000-2000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಕೆಲವು ತಿಂಗಳುಗಳ ಹಿಂದೆ, ಒಟ್ಟು 8.80 ಕೋಟಿ ಫಲಾನುಭವಿಗಳಲ್ಲಿ, ಕೃಷಿ ಸಚಿವಾಲಯವು 8.35 ಕೋಟಿ ಸಣ್ಣ ರೈತರಿಗೆ ಮೊದಲ ಕಂತಿನಂತೆ ಎರಡು ಸಾವಿರ ರೂಪಾಯಿಗಳನ್ನು ನೀಡಿತು. ಅದೇ ಸಮಯದಲ್ಲಿ, ಫಲಾನುಭವಿಗಳ ಸಂಖ್ಯೆ ಎರಡನೇ ಕಂತಿನಲ್ಲಿ 7.51 ಕೋಟಿ, ಮೂರನೆಯ ಕಂತಿನಲ್ಲಿ ಅದು 6.12 ಕೋಟಿ ಮತ್ತು ನಾಲ್ಕನೇ ಕಂತಿನಲ್ಲಿ ಕೇವಲ 3.01 ಕೋಟಿಗೆ ಇಳಿದಿದೆ.

Trending News