IND vs ZIM: ರೋಹಿತ್‌ ಹಾಗೂ ಕೊಹ್ಲಿ ಕುರಿತು ಶುಭಮನ್‌ ಗಿಲ್‌ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್‌ ಹೀಗಂದಿದ್ದೇಕೆ..?

Shubman Gill: ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಮುರಿಯವುದು ಅವರಿಗೆ ಸಾಟಿಯಾಗಿ ನಿಲ್ಲುವುದು ನನಗೆ ಅಸಾಧ್ಯ ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ.   

Written by - Zee Kannada News Desk | Last Updated : Jul 6, 2024, 01:33 PM IST
  • ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ದಿಗ್ಗಜ ಆಟಗಾರರು. ಅವರಿಗೆ ಸರಿಸಾಟಿಯಾಗಿ ನಿಲ್ಲುವುದು ಎನ್ನುವುದು ನನಗೆ ಅಸಾಧ್ಯವಾದುದು.
  • ಟಿ20 ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾದ ಗಿಲ್ ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ಎರಡನೇ ಹಂತದ ತಂಡದ ನಾಯಕರಾಗಿ ಆಯ್ಕೆಯಾಗಿರುವುದು ಗೊತ್ತೇ ಇದೆ.
  • ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನೂತನ ನಾಯಕ ಶುಭಮನ್‌ ಗಿಲ್ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ.
IND vs ZIM: ರೋಹಿತ್‌ ಹಾಗೂ ಕೊಹ್ಲಿ ಕುರಿತು ಶುಭಮನ್‌ ಗಿಲ್‌ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್‌ ಹೀಗಂದಿದ್ದೇಕೆ..? title=

Shubman Gill: ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಮುರಿಯವುದು ಅವರಿಗೆ ಸಾಟಿಯಾಗಿ ನಿಲ್ಲುವುದು ನನಗೆ ಅಸಾಧ್ಯ ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ. 

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ದಿಗ್ಗಜ ಆಟಗಾರರು. ಈ ಇಬ್ಬರ ರೆಕಾರ್ಡ್‌ ಬ್ರೇಕ್‌ ಮಾಡಿ ಅವರಿಗೆ ಸರಿಸಾಟಿಯಾಗಿ ನಿಲ್ಲುವುದು ಎನ್ನುವುದು ನನಗೆ ಅಸಾಧ್ಯವಾದುದು. ಒಂದು ವೇಳೆ ಪ್ರಯತ್ನಿಸಿದರೂ ತೀವ್ರ ಒತ್ತಡ ಎದುರಿಸಬೇಕಾಗುತ್ತದೆ ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ. 

ಟಿ20 ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾದ ಗಿಲ್ ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ಎರಡನೇ ಹಂತದ ತಂಡದ ನಾಯಕರಾಗಿ ಆಯ್ಕೆಯಾಗಿರುವುದು ಗೊತ್ತೇ ಇದೆ. ಭಾರತವು ಜಿಂಬಾಬ್ವೆ ವಿರುದ್ಧ ಐದು ಟಿ20 ಸರಣಿಗಳನ್ನು ಆಡಲಿದೆ. ಮೊದಲ ಪಂದ್ಯ ಶನಿವಾರ ಸಂಜೆ 4.30ಕ್ಕೆ ಹರಾರೆಯಲ್ಲಿ ಆರಂಭವಾಗಲಿದೆ. 

ಇದನ್ನೂ ಓದಿ: "2007ರ ವಿಶ್ವಕಪ್‌ ಗೆಲುವಿಗಿಂತ 2024ರ ವಿಶ್ವಕಪ್‌ ಗೆಲುವು ತುಂಬಾ ವಿಶೇಷ"- ರೋಹಿತ್‌ ಶರ್ಮಾ

ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನೂತನ ನಾಯಕ ಶುಭಮನ್‌ ಗಿಲ್ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. "ನಿರೀಕ್ಷೆಗಳು ಮತ್ತು ಒತ್ತಡಗಳು ಇರುವುದು ಸಾಮಾನ್ಯ. ಆದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಾಧನೆಯನ್ನು ಸರಿಗಟ್ಟಲು ಪ್ರಯತ್ನಿಸಿದರೆ ಅದು ನನಗೆ ತುಂಬಾ ಕಷ್ಟಕರವಾಗಿರುತ್ತದೆ.ಪ್ರತಿಯೊಬ್ಬ ಆಟಗಾರನು ತಮ್ಮ ಗುರಿಗಳನ್ನು ಸಾಧಿಸಲು ಒತ್ತಡದಲ್ಲಿರುತ್ತಾರೆ, ಆದರೆ ಇತರ ಆಟಗಾರರು ಸಾಧಿಸಿದ್ದನ್ನು ಬ್ರೇಕ್‌ ಮಾಡಲು ಪ್ರಯತ್ನಿಸಿದರೆ  ಸಾಕಷ್ಟು ಒತ್ತಡ ಎದುರಿಸಬೇಕಾಗಿ ಬುರುತ್ತದೆ. ಕೊಹ್ಲಿ ಮತ್ತು ರೋಹಿತ್ ಭಾರತೀಯ ಕ್ರಿಕೆಟ್‌ನ ದಂತಕಥೆಗಳು. ಅವರು ದೇಶಕ್ಕಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಆದರೆ ಆಟಗಾರರಾಗಿ ಮತ್ತು ತಂಡವಾಗಿ ಗುರಿಗಳನ್ನು ಸಾಧಿಸಲು, ಒತ್ತಡ ಇರಬೇಕು. ಅದನ್ನು ಮೆಟ್ಟಿ ನಿಲ್ಲಬೇಕು," ಎಂದು ಶುಭಮನ್ ಗಿಲ್ ಹೇಳಿದ್ದಾರೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದು, ಯುವ ಆಟಗಾರರು ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದಾರೆ. ಈ ಯುವ ಆಟಗಾರರೇ ಭಾರತ ಕ್ರಿಕೆಟ್‌ನ ಭವಿಷ್ಯವನ್ನು ಮುನ್ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಎದುರಾಳಿ ಸಮವುಜ್ಜಿ ಅಲ್ಲದಿದ್ದರೂ ಸರಣಿಯಲ್ಲಿ ಆಸಕ್ತಿ ಹೆಚ್ಚಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News