ಅರಶಿನವನ್ನು ಈ ರೀತಿ ಬಳಸಿದರೆ ಒಲಿದು ಬರುವುದಂತೆ ಅದೃಷ್ಟ! ಎಂದೂ ಕಾಡುವುದಿಲ್ಲವಂತೆ ಹಣದ ಸಮಸ್ಯೆ

Turmeric For Good Luck:ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅರಿಶಿನದ ಉಂಡೆಯನ್ನು ಇಡುವುದು ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ಅರಿಶಿನವನ್ನು ಮನೆಯ ಯಾವ ಮೂಲೆಯಲ್ಲಿ ಇಟ್ಟರೆ ಅದು ಹೇಗೆ ಪ್ರಯೋಜನಕಾರಿ ಎನ್ನುವುದನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.    

Written by - Ranjitha R K | Last Updated : Feb 5, 2024, 01:34 PM IST
  • ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.
  • ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಅರಶಿನ ಸಹಾಯ ಮಾಡುತ್ತದೆ
  • ಅರಿಶಿನದ ಉಂಡೆಯನ್ನು ಇಡುವುದು ಮಂಗಳಕರ
 ಅರಶಿನವನ್ನು ಈ ರೀತಿ ಬಳಸಿದರೆ ಒಲಿದು ಬರುವುದಂತೆ ಅದೃಷ್ಟ! ಎಂದೂ ಕಾಡುವುದಿಲ್ಲವಂತೆ ಹಣದ ಸಮಸ್ಯೆ  title=

Turmeric For Good Luck : ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.ಧನಾತ್ಮಕ ಶಕ್ತಿಯನ್ನು ರವಾನಿಸಲು ಯಾವುದೇ ಧಾರ್ಮಿಕ ಕೆಲಸದಲ್ಲಿ ಇದನ್ನು ಬಳಸಲಾಗುತ್ತದೆ.ಅರಿಶಿನವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವುದು ಮಾತ್ರವಲ್ಲದೆ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸಲು ಕೂಡಾ ಸಹಾಯ ಮಾಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಅರಿಶಿನದ ಉಂಡೆಯನ್ನು ಇಡುವುದು ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ಅರಿಶಿನವನ್ನು ಮನೆಯ ಯಾವ ಮೂಲೆಯಲ್ಲಿ ಇಟ್ಟರೆ ಅದು ಹೇಗೆ ಪ್ರಯೋಜನಕಾರಿ ಎನ್ನುವುದನ್ನು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.  

ಇದನ್ನೂ ಓದಿ : ಗ್ರಹಣ ದಿನದಿಂದಲೇ ಬದಲಾಗುವುದು ಈ ರಾಶಿಯವರ ಜೀವನದ ದಿಕ್ಕು! ಸೂರ್ಯ ಗ್ರಹಣ ಇವರ ಪಾಲಿಗೆ ಹೊತ್ತು ತರುವುದು ಸುಖ ಸಮೃದ್ದಿ

ಅಡುಗೆಮನೆಯಲ್ಲಿ ಅರಿಶಿನವನ್ನು ಇಡುವುದರಿಂದ ಆಗುವ ಪ್ರಯೋಜನಗಳು:
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಡುಗೆಮನೆಯಲ್ಲಿ ಅರಿಶಿನದ ಉಂಡೆಯನ್ನು ಇಡುವುದು ತುಂಬಾ ಮಂಗಳಕರ.  ಯಾರ ಅಡುಗೆಮನೆಯಲ್ಲಿ ಡಬ್ಬ ಪೂರ್ತಿ ಅರಶಿನ  ತುಂಬಿರುತ್ತದೆಯೋ ಆ ಮನೆಯಲ್ಲಿ ಎಂದಿಗೂ  ಹಣದ ಕೊರತೆ ಇರುವುದಿಲ್ಲ.

ಮುಖ್ಯ ದ್ವಾರದಲ್ಲಿ ಅರಿಶಿನವನ್ನು ಇಡುವುದರಿಂದ ಆಗುವ ಪ್ರಯೋಜನಗಳು :
ಸಂತೋಷ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು, ಮನೆಯ ಮುಖ್ಯ ದ್ವಾರದಲ್ಲಿ ಅರಿಶಿನವನ್ನು ಇಡುವುದು ಮಂಗಳಕರವಾಗಿರುತ್ತದೆ. ಇದಕ್ಕಾಗಿ ಒಂದು ಪೆಟ್ಟಿಗೆಯಲ್ಲಿ ಅರಿಶಿನ ತುಂಬಿ ಅದನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡಬೇಕಂತೆ. 

ಮನೆಯ ದೇವರ ಕೋಣೆಯಲ್ಲಿ ಅರಿಶಿನವನ್ನು ಇಡುವುದರಿಂದ ಆಗುವ ಲಾಭಗಳು :
ಹಿಂದೂ ಧರ್ಮದಲ್ಲಿ, ಮನೆಯ ದೇವರ ಕೋಣೆಯಲ್ಲಿ ಅರಿಶಿನವನ್ನು ಇಡುವುದು ಮಂಗಳಕರವಾಗಿರುತ್ತದೆ. ದೇವರ ಕೋಣೆಯಲ್ಲಿ ಅರಶಿನ ಕೊಂಬು ಇಟ್ಟುಕೊಳ್ಳುವುದರಿಂದ  ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆಯಂತೆ. 

ಇದನ್ನೂ ಓದಿ : Astro Tips: ನಿಮ್ಮ ಈ ಕೆಟ್ಟ ಅಭ್ಯಾಸಗಳು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ..!

 ಮನೆಯ ತಿಜೋರಿಯಲ್ಲಿ ಇಡುವುದರಿಂದ ಆಗುವ ಪ್ರಯೋಜನಗಳು :
ಹಣದ ಹರಿವನ್ನು ಹೆಚ್ಚಿಸಲು, ವಾಸ್ತು ಶಾಸ್ತ್ರದಲ್ಲಿ ಅರಿಶಿನವನ್ನು ಮನೆಯ ತಿಜೋರಿಯಲ್ಲಿ ಇಡುವುದು ಮಂಗಳಕರವೆಂದು ಹೇಳಲಾಗಿದೆ. ಹಾಗಾಗಿ ತಿಜೋರಿಯಲ್ಲಿ ಹಣ ಇರುವ ಜಾಗದಲ್ಲಿ ಅರಿಶಿನದ  ಕೊಂಬನ್ನು ಇಟ್ಟುಕೊಳ್ಳಿ. 

ಅರಿಶಿನವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಆಗುವ ಪ್ರಯೋಜನಗಳು:
ಪರ್ಸ್‌ನಲ್ಲಿ ಅರಿಶಿನದ ಉಂಡೆಯನ್ನು ಇಟ್ಟುಕೊಂಡರೆ, ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ. ಹಣವನ್ನು ಆಕರ್ಷಿಸಲು ಇದು ಸಹಾಯ ಮಾಡುತ್ತದೆ. ಇದರಿಂದ ಪರ್ಸ್ ಎಂದಿಗೂ ಖಾಲಿಯಾಗುವುದಿಲ್ಲ.

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News