ಸುದೀಪ್‌ 3 ತಾಸಿನ‌ ನಾಯಕ.. ದುಡ್ಡು ಕೊಟ್ಟು ನೋಡ್ತಿದ್ದ ಅವರನ್ನು ಪುಕ್ಕಟೆಯಾಗಿ ನೋಡ್ತಿದ್ದೇವೆ: ಸತೀಶ್ ಜಾರಕಿಹೊಳಿ

Karnataka Election 2023: ಸತೀಶ್ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಚಿತ್ರನಟ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿ, ಹಣ ಕೊಟ್ಟು ಅವರನ್ನು ನೋಡುತ್ತಿದ್ದೆವು, ಈಗ ಪುಕ್ಕಟ್ಟೆಯಾಗಿ ನೋಡುತ್ತಿದ್ದೇವೆ ಎಂದಿದ್ದಾರೆ.   

Written by - Chetana Devarmani | Last Updated : May 8, 2023, 04:23 PM IST
  • ನಟ ಸುದೀಪ್ ವಿರುದ್ಧ ಅಸಮಾಧಾನ
  • ಸುದೀಪ್‌ರ 3 ತಾಸಿನ‌ ನಾಯಕ
  • ಸತೀಶ್ ಜಾರಕಿಹೊಳಿ ಹೇಳಿಕೆ
ಸುದೀಪ್‌ 3 ತಾಸಿನ‌ ನಾಯಕ.. ದುಡ್ಡು ಕೊಟ್ಟು ನೋಡ್ತಿದ್ದ ಅವರನ್ನು ಪುಕ್ಕಟೆಯಾಗಿ ನೋಡ್ತಿದ್ದೇವೆ: ಸತೀಶ್ ಜಾರಕಿಹೊಳಿ  title=
Karnataka Election 2023

ಚಾಮರಾಜನಗರ: ಬಹಿರಂಗ ಪ್ರಚಾರದ ಕೊನೆದಿನವಾದ ಇಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕೈ ನಾಯಕರಾದ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸಿದರು. 

ಇದನ್ನೂ ಓದಿ: ಬಹಿರಂಗ ಪ್ರಚಾರಕ್ಕೆ ತೆರೆ: ಕೊನೆ ದಿನ ಸೋಮಣ್ಣ, ಸಿದ್ದು, ವಾಟಾಳ್ ಅಬ್ಬರ!!

ಇನ್ನು, ಸತೀಶ್ ಜಾರಕಿಹೊಳಿ ತಮ್ಮ ಭಾಷಣದಲ್ಲಿ ಚಿತ್ರನಟ ಸುದೀಪ್ ವಿರುದ್ಧ ಅಸಮಾಧಾನ ಹೊರಹಾಕಿ, ಹಣ ಕೊಟ್ಟು ಅವರನ್ನು ನೋಡುತ್ತಿದ್ದೆವು, ಈಗ ಪುಕ್ಕಟ್ಟೆಯಾಗಿ ನೋಡುತ್ತಿದ್ದೇವೆ, ಅಳಲು-ನಗಲು ದುಡ್ಡು ತೆಗೆದುಕೊಳ್ಳುವವರು ಅವರು, ಜನ ಸೇವೆ ಮಾಡುವವರಲ್ಲ‌, ಅವರು 3 ತಾಸಿನ ನಾಯಕರು ಎಂದು ಟೀಕಿಸಿದರು. 

ಇದನ್ನೂ ಓದಿ:  ಬಿಜೆಪಿ ಒಬ್ಬನೇ ವ್ಯಕ್ತಿಯ ಕೈಯಲ್ಲಿದೆ, ಗುಲಾಮಿ ಸಂಸ್ಕೃತಿಗೆ ಒಗ್ಗಿಕೊಳ್ಳೋರು ಮಾತ್ರ ಅಲ್ಲಿರಲು ಸಾಧ್ಯ: ಜಗದೀಶ್ ಶೆಟ್ಟರ್

ನಿರಂತರವಾಗಿ ಜೊತೆಗಿರುವ ನಾಯಕರು ನಾವು, ಮಳೆ-ಬಿಸಿಲಲ್ಲಿ ನಿಮ್ಮ ಸೇವೆ ಮಾಡುವವರು ನಾವು, ಅವರು ಬಂದರು ಎಂಬುದು ಪರಿಹಾರ ಅಲ್ಲ, ಗಣೇಶ್ ಪ್ರಸಾದ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇತ್ತೀಚಿಗಷ್ಟೇ ನಟ ಸುದೀಪ್ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿ ಧೂಳೆಬ್ಬಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News