ಇಂದು ತಮಿಳುನಾಡಿಗೆ Rahul Gandhi ಭೇಟಿ, ಜಲ್ಲಿಕಟ್ಟು ವೀಕ್ಷಣೆ

ರಾಹುಲ್ ಗಾಂಧಿ ಅವರು ಪ್ರಸಿದ್ಧ ಪೊಂಗಲ್ ಹಬ್ಬ ಮತ್ತು ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ಹಿನ್ನೆಲೆಯಲ್ಲಿ ಮಾತ್ರ ಭೇಟಿ ನೀಡುತ್ತಿದ್ದಾರೆ. ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ ತಿಳಿಸಿದ್ದಾರೆ.  

Written by - Yashaswini V | Last Updated : Jan 13, 2021, 10:50 AM IST
  • ಅಮಿತ್ ಶಾ, ಜೆ.ಪಿ. ನಡ್ಡ ಅವರಿಂದ ಹಬ್ಬದ ವೇಳೆ ರಾಜಕೀಯ ಕಾರ್ಯಕ್ರಮಗಳು
  • ಮಧುರೈನಲ್ಲಿ ಆಯೋಜಿಸಲಾಗಿರುವ ಜಲ್ಲಕಟ್ಟು ಕ್ರೀಡೆ ವೀಕ್ಷಿಸಲಿರುವ ರಾಹುಲ್ ಗಾಂಧಿ
  • ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿಯನ್ನು ರಾಹುಲ್‌ ಅವರ ತಮಿಳು ನಮಸ್ಕಾರಗಳು' ಎಂದಿರುವ ಕಾಂಗ್ರೆಸ್
ಇಂದು ತಮಿಳುನಾಡಿಗೆ Rahul Gandhi ಭೇಟಿ, ಜಲ್ಲಿಕಟ್ಟು ವೀಕ್ಷಣೆ title=
Rahul Gandhi visits Tamil Nadu

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ (Tamilnadu Assembly Election) ಹಿನ್ನೆಲೆಯಲ್ಲಿ ಬಿಜೆಪಿ (BJP) ನಾಯಕರಾದ ಅಮಿತ್ ಶಾ (Amith Sha) ಮತ್ತು ಜೆ.ಪಿ. ನಡ್ಡಾ (JP Nadda) ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ವೇಳೆ ರಾಜಕೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ಅವರು 'ಹಬ್ಬ ಆಚರಣೆಗಾಗಿ' ಮಾತ್ರ ಭೇಟಿ ನೀಡುತ್ತಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಅವರು ಪ್ರಸಿದ್ಧವಾದ ಪೊಂಗಲ್ (Pongal) ಹಬ್ಬದಲ್ಲಿ ಭಾಗವಹಿಸಲಿದ್ದಾರೆ ಮತ್ತು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು (Jallikattu) ಹಬ್ಬದ ಹಿನ್ನೆಲೆಯಲ್ಲಿ ಮಾತ್ರ ಭೇಟಿ ನೀಡುತ್ತಿದ್ದಾರೆ. ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್. ಅಳಗಿರಿ ತಿಳಿಸಿದ್ದಾರೆ.

ಮಧುರೈನಲ್ಲಿ ಆಯೋಜಿಸಲಾಗಿರುವ ಜಲ್ಲಕಟ್ಟು ಕ್ರೀಡೆ ವೀಕ್ಷಿಸುವ ಮೂಲಕ ರಾಹುಲ್ ಗಾಂಧಿ ಅವರು ಕೃಷಿ ಕಾನೂನುಗಳನ್ನು (Agriculture Laws) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡಲಿದ್ದಾರೆ. ಗೂಳಿ ರೈತರ ಸಂಕೇತ ಮತ್ತು ಅವರ ಜೀವನದ ಒಂದು ಭಾಗವಾಗಿದೆ. ಆದುದರಿಂದ ರಾಹುಲ್ ಗಾಂಧಿ ಅವರ ತಮಿಳುನಾಡು ಭೇಟಿಯು ಸುಗ್ಗಿಯ ಹಬ್ಬದ ದಿನದಂದು ರೈತರನ್ನು ಮತ್ತು ಶೌರ್ಯದ ತಮಿಳು ಸಂಸ್ಕೃತಿಗೆ ಸಲ್ಲಿಸುವ ಗೌರವ'ವಾಗಿದೆ. ರಾಹುಲ್ ಗಾಂಧಿ ಈ ಬಾರಿಯ ತಮಿಳುನಾಡು ಭೇಟಿ ಸಂದರ್ಭದಲ್ಲಿ ಚುನಾವಣಾ ಪ್ರಚಾರ ನಡೆಸುವುದಿಲ್ಲ ಎಂದು ಅಳಗಿರಿ ಹೇಳಿದ್ದಾರೆ.

ಇದನ್ನೂ ಓದಿ - Shiv Sena Party: 'ರಾಹುಲ್​ನ್ನು ಕಂಡರೆ ಕೇಂದ್ರದ ನಾಯಕರು ಹೆದರುತ್ತಾರೆ'

ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯ ಕಾಂಗ್ರೆಸ್ ಘಟಕವು ’ರಾಹುಲ್‌ ಅವರ ತಮಿಳು ನಮಸ್ಕಾರಗಳು’ ಎಂದು ಹೇಳುತ್ತಿದೆ. ಇದೇ ಏಪ್ರಿಲ್-ಮೇ ತಿಂಗಳಿನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.

ಜಲ್ಲಿಕಟ್ಟು ಕ್ರೀಡೆ ಮೂಲಕ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ ಎಂದು ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಮತ್ತು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಸುಪ್ರೀಂ ಕೋರ್ಟಿನಲ್ಲಿ ದೂರು ದಾಖಲಿಸಿತ್ತು.‌ 2014 ರಲ್ಲಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿತ್ತು. ಆಗ ತಮಿಳುನಾಡು ಸರ್ಕಾರ 'ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿ ಮತ್ತು ಅಸ್ಮಿತೆ' ಎಂದು ವಾದಿಸಿತ್ತು. ಚೆನ್ನೈನಲ್ಲಿ ಭಾರಿ ಪ್ರತಿಭಟನೆ ನಡೆದ ನಂತರ ಕಾನೂನಿನ ತಿದ್ದುಪಡಿಯೊಂದಿಗೆ 2017 ರಲ್ಲಿ ನಿಷೇಧವನ್ನು ತೆಗೆದುಹಾಕಲಾಗಿತ್ತು.

ಇದನ್ನೂ ಓದಿ - 'ದೆಹಲಿಯಲ್ಲಿನ ಕೆಲವು ಜನರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳಲು ಬಯಸುತ್ತಿದ್ದಾರೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News