Bihar Couple News: ಅದೊಂದು ಆಸೆ ಈಡೇರಿಸಿಕೊಳ್ಳಲು ಮನೆ ಬಿಟ್ಟು ಓಡಿ ಹೋದ ಭಾವಿ ಪತಿ-ಪತ್ನಿ! ಅಷ್ಟೊಂದು ಅವಸರವೇ?

Bihar Couple News: ನಿಶ್ಚಿತಾರ್ಥವಾದ ಬಳಿಕ ಯುವಕ-ಯುವತಿ ಓಡಿಹೋದ ಘಟನೆಯೊಂದು ನಡೆದಿದೆ. ಇದಕ್ಕೆ ಕಾರಣ ಏನೆಂದು ಕೇಳಿದ್ರೆ ಶಾಕ್ ಜೊತೆ ನಗು ಬರೋದು ಖಂಡಿತ. ಬಿಹಾರದ ಸರನ್ ಜಿಲ್ಲೆಯ ಪಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥದ ನಂತರ ಯುವಕ ಮತ್ತು ಯುವತಿ ದೂರವಿರಲು ಸಾಧ್ಯವಾಗದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಮತ್ತೆ ಹಚ್ಚಿ ಇದೀಗ ಮದುವೆ ಮಾಡಿಸಿದ್ದಾರೆ.

Written by - Bhavishya Shetty | Last Updated : Dec 5, 2022, 04:59 PM IST
    • ನಿಶ್ಚಿತಾರ್ಥವಾದ ಬಳಿಕ ಯುವಕ-ಯುವತಿ ಓಡಿಹೋದ ಘಟನೆಯೊಂದು ನಡೆದಿದೆ
    • ಕಾರಣ ಏನೆಂದು ಕೇಳಿದ್ರೆ ಶಾಕ್ ಜೊತೆ ನಗು ಬರೋದು ಖಂಡಿತ
    • ನಿಶ್ಚಿತಾರ್ಥದ ನಂತರ ಯುವಕ ಮತ್ತು ಯುವತಿ ಓಡಿಹೋಗಿದ್ದಾರೆ
Bihar Couple News: ಅದೊಂದು ಆಸೆ ಈಡೇರಿಸಿಕೊಳ್ಳಲು ಮನೆ ಬಿಟ್ಟು ಓಡಿ ಹೋದ ಭಾವಿ ಪತಿ-ಪತ್ನಿ! ಅಷ್ಟೊಂದು ಅವಸರವೇ? title=
Elopement

Bihar Couple News: ಪ್ರೇಮ ಪ್ರಕರಣಗಳಲ್ಲಿ ಎಂತೆಂತಹದ್ದೋ ಘಟನೆಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಇನ್ನೂ ಕೆಲವರು ಮನೆ ಬಿಟ್ಟು ತಮ್ಮ ಪ್ರೀತಿ ಪಾತ್ರರೊಡನೆ ಓಡಿಹೋಗುತ್ತಾರೆ. ಅದಕ್ಕೆ ಕಾರಣವೆಂದರೆ ಸಾಮಾನ್ಯವಾಗಿ ಮದುವೆ ಇಷ್ಟವಿಲ್ಲದಿರುವುದು. ಆದರೆ ಇಲ್ಲೊಂದು ಘಟನೆ ಮಾತ್ರ ನಿಮಗೆ ನಗು ತರಿಸದೆ ಇರದು.

ನಿಶ್ಚಿತಾರ್ಥವಾದ ಬಳಿಕ ಯುವಕ-ಯುವತಿ ಓಡಿಹೋದ ಘಟನೆಯೊಂದು ನಡೆದಿದೆ. ಇದಕ್ಕೆ ಕಾರಣ ಏನೆಂದು ಕೇಳಿದ್ರೆ ಶಾಕ್ ಜೊತೆ ನಗು ಬರೋದು ಖಂಡಿತ. ಬಿಹಾರದ ಸರನ್ ಜಿಲ್ಲೆಯ ಪಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಿಶ್ಚಿತಾರ್ಥದ ನಂತರ ಯುವಕ ಮತ್ತು ಯುವತಿ ದೂರವಿರಲು ಸಾಧ್ಯವಾಗದೆ ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಬಳಿಕ ಪೊಲೀಸರು ಅವರನ್ನು ಮತ್ತೆ ಹಚ್ಚಿ ಇದೀಗ ಮದುವೆ ಮಾಡಿಸಿದ್ದಾರೆ.

ಇದನ್ನೂ ಓದಿ: Viral Video: ತಮ್ಮ ಮದುವೆಗೆ ಸಂಬಂಧಿಕರಿಗಾಗಿ ಇಡೀ ವಿಮಾನವನ್ನೇ ಬುಕ್ ಮಾಡಿದ ನವದಂಪತಿ!

ಪೊಲೀಸರ ಪ್ರಕಾರ, ರಾಮ್ ರುದ್ರಪುರ ಗ್ರಾಮದ ಸಂಧ್ಯಾ ಎಂಬ ಹುಡುಗಿಯ ವಿವಾಹವು ದರಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಬರ್‌ಪುರ ಗ್ರಾಮದ ನಿವಾಸಿ ಬೊಲ್ಬಮ್ ಸಾಹ್ನಿಯೊಂದಿಗೆ ನಿಶ್ಚಯವಾಗಿತ್ತು. ಇತ್ತೀಚೆಗೆಯಷ್ಟೇ ನಿಶ್ಚಿತಾರ್ಥ ಕಾರ್ಯಕ್ರಮವೂ ನೆರವೇರಿತ್ತು. ಮುಂದಿನ ವರ್ಷಕ್ಕೆ ಮದುವೆ ನಿಶ್ಚಯವಾಗಿದ್ದು, ಎರಡೂ ಕಡೆಯವರು ಮದುವೆ ತಯಾರಿಯಲ್ಲಿ ತೊಡಗಿದ್ದರು. ಆದರೆ ಇದ್ದಕ್ಕಿಂದ್ದಂತೆ ವಧು ವರ ಇಬ್ಬರೂ ಓಡಿ ಹೋಗಿದ್ದಾರೆ.

ಇದೇ ವೇಳೆ ನಿಶ್ಚಿತಾರ್ಥದ ಬಳಿಕ ಯುವಕ ಹಾಗೂ ಯುವತಿಯ ನಡುವೆ ಫೋನ್ ಸಂಭಾಷಣೆ ಆರಂಭವಾಗಿತ್ತು. ಕ್ರಮೇಣ ಇವರ ಮಾತುಕತೆಯ ಸಮಯವೂ ಹೆಚ್ಚಾಗ ತೊಡಗಿತು. ಇಬ್ಬರ ನಡುವೆ ಪ್ರೀತಿ ಮತ್ತಷ್ಟು ಹೆಚ್ಚಾಗಿತ್ತು, ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ ಎಂಬಂತೆ ಇರಲು ಪ್ರಾರಂಭಿಸಿದರು.

ಹೀಗಾಗಿ ಮದುವೆಯವರೆಗೆ ದೂರವಿರಲು ಸಾಧ್ಯವಾಗದ ಭಾವಿ ಪತಿ-ಪತ್ನಿ ಮನೆಯಿಂದ ಓಡಿಹೋಗಲು ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರ ಗುರುವಾರ ಇಬ್ಬರೂ ಮನೆಯಿಂದ ಪರಾರಿಯಾಗಿದ್ದಾರೆ. ಇಲ್ಲಿ ಸಂಧ್ಯಾಳ ಮನೆಯಲ್ಲಿ ಇಲ್ಲ ಎಂದು ಎಲ್ಲಾ ಕಡೆ ಹುಡುಕಾಡಿದರೂ ಸಿಗಲಿಲ್ಲ. ಆಕೆ ಮನೆಯಿಂದ ಓಡಿ ಹೋಗಿರುವ ಘಟನೆಯಿಂದ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಬಾಲಕಿಯ ತಂದೆ ಪಾಣಾಪುರ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಪೊಲೀಸರು ಇಡೀ ಪ್ರಕರಣದ ತನಿಖೆಯಲ್ಲಿ ತೊಡಗಿದ್ದರು, ಪೊಲೀಸರ ತಂಡವು ಹುಡುಗಿಯನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಇಡೀ ವಿಷಯವನ್ನು ಹೇಳಿದ್ದಾಳೆ.

ಇದನ್ನೂ ಓದಿ: ಕೊಳಲಿನ ಮಧುರ ನಾದಕ್ಕೆ ತಲೆಯಾಡಿಸಿದ ಗೋಮಾತೆ : ಆಹಾ.. ಇದಲ್ಲವೇ ಅಪರೂಪ..!

ಇನ್ನು ಘಟನೆ ನಡೆದ ಬಳಿಕ ಪೊಲೀಸರು ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸಿದ್ದಾರೆ. ಅವರ ಸಂಬಂಧಿಕರ ಒಪ್ಪಿಗೆಯೊಂದಿಗೆ ಠಾಕೂರ್ಬರಿ ದೇವಸ್ಥಾನದಲ್ಲಿ ಪೊಲೀಸರ ಮೇಲ್ವಿಚಾರಣೆಯಲ್ಲಿ ಇಬ್ಬರೂ ವಿವಾಹವಾದರು ಎಂದು ಪಾಣಾಪುರ ಠಾಣೆ ಪ್ರಭಾರಿ ತಿಳಿಸಿದ್ದಾರೆ. ಮದುವೆಯ ನಂತರ ಎರಡೂ ಕುಟುಂಬಗಳು ಖುಷಿಯಾಗಿವೆ ಎಂದು ತಿಳಿದುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News