ಡಯಾಬಿಟಿಸ್ ಮತ್ತು ಹೃದ್ರೋಗಿಗಳಿಗೆ ರಾಮಬಾಣ ಈ ಬೆಟ್ಟದ ತರಕಾರಿ, ಒಮ್ಮೆ ಟ್ರೈ ಮಾಡಿ ನೋಡಿ!

Taming Diabetes: ತೆರ್ಮೆ ತೊಪ್ಪು ತರಕಾರಿ ಒಂದು  ಪೌಷ್ಟಿಕಾಂಶಗಳ ಆಗರವಾಗಿದ್ದು ಇದು ಸಾಕಷ್ಟು  ಔಷಧೀಯ ಗುಣಗಳನ್ನು ಹೊಂದಿದೆ. ಈ ತರಕಾರಿ ತಿನ್ನುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ (Health News In Kannada).  

Written by - Nitin Tabib | Last Updated : Aug 11, 2023, 07:18 PM IST
  • ಇಂದು ನಾವು ಬೆಟ್ಟಗಾಡು ಪ್ರದೇಶಗಳಲ್ಲಿ ಬೆಳೆಯುವ ಒಂದು ತರಕಾರಿಯ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು.
  • ಅದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ತರಕಾರಿ ಸಾಕಷ್ಟು ಪೌಷ್ಟಿಕಾಂಶಗಳಿಂದ ಕೂಡಿದ್ದು,
  • ಹಲವು ಔಷಧೀಯ ಗುಣಗಳು ಇದರಲ್ಲಿವೆ. ಈ ತರಕಾರಿಯನ್ನು ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ .
ಡಯಾಬಿಟಿಸ್ ಮತ್ತು ಹೃದ್ರೋಗಿಗಳಿಗೆ ರಾಮಬಾಣ ಈ ಬೆಟ್ಟದ ತರಕಾರಿ, ಒಮ್ಮೆ ಟ್ರೈ ಮಾಡಿ ನೋಡಿ! title=

ಬೆಂಗಳೂರು: ಸಾಮಾನ್ಯವಾಗಿ ತಜ್ಞರು  ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುವ ಹಸಿರು ತರಕಾರಿಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಈ ತರಕಾರಿಗಳಿಂದ ನಮ್ಮ ದೇಹವು ಅನೇಕ ಪ್ರಯೋಜನಗಳನ್ನು ಪಡೆಯುತ್ತದೆ. ಪಾಲಕ್, ಮೆಂತ್ಯ, ಚಂದನ್ ಬಟುವಾ, ಸಾಸಿವೆ ಸೊಪ್ಪು, ಹೆಸರುಬೇಳೆ, ಹೂಕೋಸು ಈ ಹಸಿರು ತರಕಾರಿಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ (Health News In Kannada). ಆದರೆ ಇಂದು ನಾವು ಬೆಟ್ಟಗಾಡು  ಪ್ರದೇಶಗಳಲ್ಲಿ ಬೆಳೆಯುವ ಒಂದು ತರಕಾರಿಯ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದು. ಅದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ತರಕಾರಿ ಸಾಕಷ್ಟು ಪೌಷ್ಟಿಕಾಂಶಗಳಿಂದ ಕೂಡಿದ್ದು, ಹಲವು ಔಷಧೀಯ ಗುಣಗಳು ಇದರಲ್ಲಿವೆ. ಈ ತರಕಾರಿಯನ್ನು ತಿನ್ನುವುದರಿಂದ ಅನೇಕ ರೋಗಗಳು ದೂರವಾಗುತ್ತವೆ . ಆದ್ದರಿಂದ, ಇಂದು ನಾವು ಈ ಪೌಷ್ಟಿಕಾಂಶದ ಮತ್ತು ಔಷಧೀಯ ಗುಣಗಳಿಂದ ತುಂಬಿರುವ ಬೆಟ್ಟದ ತರಕಾರಿ ತೆರ್ಮೆ ಸೊಪ್ಪು ಬಗ್ಗೆ ತಿಳಿದುಕೊಳ್ಳೋನ ಬನ್ನಿ, 

ತೆರ್ಮೆ ಸೊಪ್ಪು ಪಲ್ಯೆ
ಉತ್ತರಾಖಂಡ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಕರ್ನಾಟಕದ ಕುರಿತು ಹೇಳುವುದಾದರೆ ಕೂರ್ಗ್ ಪ್ರಾಂತದಲ್ಲಿ. ಮಳೆಗಾಲದಲ್ಲಿ ಈ ತರಕಾರಿ ಸಿಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ತಿನ್ನುವ ಈ ತರಕಾರಿ ಪೌಷ್ಟಿಕ ಮತ್ತು ಔಷಧೀಯ ಗುಣಗಳ ಆಗರವಾಗಿದೆ. ಇದು ಆಯುರ್ವೇದ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ವಿಟಮಿನ್ ಎ, ವಿಟಮಿನ್ ಬಿ, ಪೊಟ್ಯಾಸಿಯಮ್, ತಾಮ್ರ, ಕಬ್ಬಿಣ, ಕೊಬ್ಬಿನಾಮ್ಲಗಳು, ಸೋಡಿಯಂ, ರಂಜಕ, ಮೆಗ್ನೀಸಿಯಮ್ ಇತ್ಯಾದಿಗಳಲ್ಲಿ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಅನೇಕ ರೋಗಗಳನ್ನು ದೂರವಿಡಬಹುದು.

ತೆರ್ಮೆ ಸೊಪ್ಪಿನ ಪ್ರಯೋಜನಗಳು
ರಕ್ತದೊತ್ತಡ ನಿಯಂತ್ರಣ

ತೆರ್ಮೆ ಸೊಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೊಟ್ಯಾಸಿಯಮ್ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದನ್ನು ತಿನ್ನುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ-ಈ ಸೈಲೆಂಟ್ ಕಿಲ್ಲರ್ ಕಾಯಿಲೆಯ ಸೈಲೆಂಟ್ ಲಕ್ಷಣಗಳನ್ನು, ಮರೆತೂ ಕೂಡ ನಿರ್ಲಕ್ಷಿಸಬೇಡಿ!

ಪ್ರತಿರಕ್ಷಣಾ ವ್ಯವಸ್ಥೆ ಬಲವರ್ಧನೆ
ಪ್ರತಿರಕ್ಷಣಾ ವ್ಯವಸ್ಥೆಯ ಕ್ಷೀಣತೆಯಿಂದಾಗಿ, ದೇಹವು ಅನೇಕ ರೋಗಗಳಿಗೆ ಗುರಿಯಾಗುತ್ತದೆ. ತೆರ್ಮೆ ಸೊಪ್ಪು ತಿನ್ನುವುದರಿಂದ, ದೇಹವು ಅದರ ದೈನಂದಿನ ಅಗತ್ಯಕ್ಕೆ ಅನುಗುಣವಾಗಿ ಸಾಕಷ್ಟು ವಿಟಮಿನ್ ಸಿ ಪಡೆಯುತ್ತದೆ. ವಿಟಮಿನ್ ಸಿ ಸಹಾಯದಿಂದ, ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರುತ್ತದೆ.

ಇದನ್ನೂ ಓದಿ-ಚಿಕನ್ ತಿಂದ್ರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ? ತಿನ್ನುವ ಮೊದ್ಲು ಸತ್ಯ ಏನು ತಿಳಿದುಕೊಳ್ಳಿ!

ಉತ್ಕರ್ಷಣ ನಿರೋಧಕಗಳು ಮತ್ತು ಕೊಬ್ಬಿನಾಮ್ಲಗಳು
ತೆರ್ಮೆ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಕೊಬ್ಬಿನಾಮ್ಲಗಳು ಹೇರಳ ಪ್ರಮಾಣದಲ್ಲಿರುತ್ತವೆ. ಇದು ಸೂಪರ್‌ಫುಡ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸುವ ಕ್ಯಾಲ್ಸಿಯಂ ಸಹ ಇದರಲ್ಲಿ ಸಮೃದ್ಧವಾಗಿದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News