ಪಟಾಕಿ ಕೂಡಾ ಹೃದಯಾಘಾತಕ್ಕೆ ಕಾರಣವಾಗಬಹುದು.! ಅಪಾಯ ತಪ್ಪಿಸಲು ಹೀಗೆ ಮಾಡಿ

Heart Care Tips:ಪಟಾಕಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುತ್ತದೆ.   ಕಲುಷಿತ ಗಾಳಿ ಹೃದ್ರೋಗಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು  ಹೆಚ್ಚಿಸುತ್ತದೆ. 

Written by - Ranjitha R K | Last Updated : Oct 24, 2022, 01:48 PM IST
  • ದೀಪಾವಳಿಯಂದು ಪಟಾಕಿ ಸಿಡಿಸುವುದೆಂದರೆ ಎಲ್ಲರಿಗೂ ಇಷ್ಟ.
  • ಬೆಳಕಿನ ಹಬ್ಬವನ್ನು ಪಟಾಕಿಗಳ ಹಬ್ಬವನ್ನಾಗಿ ಪರಿವರ್ತಿಸಿ ಬಿಡುತ್ತಾರೆ.
  • ಮೋಜಿನ ಭರದಲ್ಲಿ ಆರೋಗ್ಯ ಹಾಳಾಗುತ್ತದೆ
ಪಟಾಕಿ ಕೂಡಾ ಹೃದಯಾಘಾತಕ್ಕೆ ಕಾರಣವಾಗಬಹುದು.! ಅಪಾಯ ತಪ್ಪಿಸಲು ಹೀಗೆ ಮಾಡಿ  title=
Heart Care Tips on diwali

Heart Care Tips : ದೀಪಾವಳಿಯಂದು ಪಟಾಕಿ ಸಿಡಿಸುವುದೆಂದರೆ ಎಲ್ಲರಿಗೂ ಇಷ್ಟ. ಕೆಲವರಂತೂ ಬೆಳಕಿನ ಹಬ್ಬವನ್ನು ಪಟಾಕಿಗಳ ಹಬ್ಬವನ್ನಾಗಿ ಪರಿವರ್ತಿಸಿ ಬಿಡುತ್ತಾರೆ. ಆದರೆ, ಮೋಜಿನ ಭರದಲ್ಲಿ ಆರೋಗ್ಯ ಹಾಳಾಗುತ್ತದೆ ಎನ್ನುವುದನ್ನು ಮರೆತೇ ಬಿಡುತ್ತಾರೆ. ಪಟಾಕಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುತ್ತದೆ. ಕಲುಷಿತ ಗಾಳಿ ಹೃದ್ರೋಗಿಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು  ಹೆಚ್ಚಿಸುತ್ತದೆ. 

ಮುಂಜಾನೆ ಯೋಗ ಮಾಡಿ :
ಕಲುಷಿತ ಗಾಳಿ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಶ್ವಾಸಕೋಶದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇಲ್ಲದಿದ್ದರೆ ರಕ್ತ ಪರಿಚಲನೆಯಲ್ಲಿ ಸಮಸ್ಯೆ ಉಂಟಾಗಿ, ಹೃದಯಾಘಾತ ಸಂಭವಿಸಬಹುದು. ಶ್ವಾಸಕೋಶ ಮತ್ತು ಹೃದಯದ ಆರೋಗ್ಯ ಕಾಪಾಡುವ ಸಲುವಾಗಿ, ಪ್ರತಿದಿನ ಬೆಳಿಗ್ಗೆ ಯೋಗ ಮಾಡಿ. ಶುದ್ಧ ಗಾಳಿಯಲ್ಲಿ ಯೋಗ ಮಾಡುವುದರಿಂದ ಆರೋಗ್ಯಕ್ಕೆ ಪ್ರಯೋಜನವಾಗುತ್ತದೆ. 

ಇದನ್ನೂ ಓದಿ :  Hair Remedies: ಈ ರಸದಿಂದ ಕೂದಲಿನ ಸಮಸ್ಯೆ ಒಂದೇ ದಿನದಲ್ಲಿ ಮಾಯವಾಗುತ್ತೆ!

ಈ ವಿಧಾನಗಳನ್ನು ಅನುಸರಿಸಿ :
ಕೆಟ್ಟ ಗಾಳಿಯಿಂದಾಗಿ ಹೃದ್ರೋಗಿಗಳ ಆರೋಗ್ಯ ಸ್ಥಿತಿ ಹದಗೆಡಬಹುದು. ಆದ್ದರಿಂದ  ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ಔಷಧಿಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ. ಕಾಲಕಾಲಕ್ಕೆ ರಕ್ತದೊತ್ತಡವನ್ನು ಪರೀಕ್ಷಿಸುತ್ತಿರಿ. ಪ್ಯಾನಿಕ್ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. 

ಕಲುಷಿತ ಗಾಳಿ ಇದ್ದಾಗ ಮನೆಯಿಂದ ಹೊರಬರುವುದು ಸರಿಯಲ್ಲ. ಆದ್ದರಿಂದ ಹೊರಗೆ ಹೋಗುವುದನ್ನು ತಪ್ಪಿಸಿ. ತೀರಾ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಿ, ಮಾತ್ರವಲ್ಲ   ಹೊರಗೆ  ಹೋಗುವಾಗ ಮಾಸ್ಕ್ ಧರಿಸಿ. ಮಾಸ್ಕ್ ಕಲುಷಿತ ಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ಆದರೆ ಮಾಸ್ಕ್ ಉತ್ತಮ ಗುಣಮಟ್ಟದ್ದಾಗಿರಬೇಕು.  

ಇದನ್ನೂ ಓದಿ : Diwali celebrations: ಅಚಾನಕ್ ಪಟಾಕಿ ಸಿಡಿದು ಗಾಯವಾದರೆ ಹೇಗೆ ಎಚ್ಚರ ವಹಿಸಬೇಕು.?

ಈ ವಸ್ತುಗಳನ್ನು ತಿನ್ನಿರಿ :
ಮಾಲಿನ್ಯದ ಸಮಸ್ಯೆಯಿಂದ ಆಗುವ ಅಪಾಯವನ್ನು ತಪ್ಪಿಸುವ ಸಲುವಾಗಿ ಕೆಲವು ಆರೋಗ್ಯಕರ ವಸ್ತುಗಳನ್ನು ಸೇವಿಸಬಹುದು. ಹೆಚ್ಚು ನೀರು ಕುಡಿಯಿರಿ ಇದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಿ, ಹಣ್ಣುಗಳನ್ನು ತಿನ್ನಿರಿ. ನೆಲ್ಲಿಕಾಯಿ ಮುಂತಾದ ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸಿ. 

 

 ( ಸೂಚನೆ :  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News