ಪವಿತ್ರಾಗೌಡ ನಟ ದರ್ಶನ್ 2ನೇ ಪತ್ನಿಯಲ್ಲ: ಪೊಲೀಸ್​​ ಕಮಿಷನರ್​ಗೆ ವಿಜಯಲಕ್ಷ್ಮೀ ಪತ್ರ!

Renukaswamy Murder Case: ಬೆಂಗಳೂರು ಪೊಲೀಸ್​​ ಕಮಿಷನರ್​ಗೆ ಬರೆದಿರುವ ಪತ್ರದಲ್ಲಿ ವಿಜಯಲಕ್ಷ್ಮೀ ಅವರು, ʼಪವಿತ್ರಾಗೌಡ ನಟ ದರ್ಶನ್‌ ಅವರ 2ನೇ ಪತ್ನಿಯಲ್ಲವೆಂದು ಹೇಳಿದ್ದಾರೆ. ಕಾನೂನಿನ ಪ್ರಕಾರ ನಾನು ಮಾತ್ರ ನಟ ದರ್ಶನ್​​ ಅವರ ಏಕೈಕ ಪತ್ನಿ. 2003ರಲ್ಲಿ ಧರ್ಮಸ್ಥಳದಲ್ಲಿ ನಾನು ಮತ್ತು ದರ್ಶನ್​ ಮದುವೆಯಾಗಿದ್ದೆವು ಎಂದು ಹೇಳಿದ್ದಾರೆ. 

Written by - Puttaraj K Alur | Last Updated : Jul 3, 2024, 11:23 PM IST
  • ಪವಿತ್ರಾಗೌಡ ನಟ ದರ್ಶನ್​​ ಅವರ 2ನೇ ಪತ್ನಿ ಎಂದಿದ್ದ ಪೊಲೀಸ್ ಕಮಿಷನರ್
  • ಪವಿತ್ರಾಗೌಡ ನಟ ದರ್ಶನ್ ಅವರ 2ನೇ ಪತ್ನಿಯಲ್ಲ ಎಂದು ಪತ್ರ
  • ಬೆಂಗಳೂರು ಪೊಲೀಸ್​​ ಕಮಿಷನರ್​ಗೆ ಪತ್ರ ಬರೆದ ದರ್ಶನ್​ ಪತ್ನಿ ವಿಜಯಲಕ್ಷ್ಮೀ
ಪವಿತ್ರಾಗೌಡ ನಟ ದರ್ಶನ್ 2ನೇ ಪತ್ನಿಯಲ್ಲ: ಪೊಲೀಸ್​​ ಕಮಿಷನರ್​ಗೆ ವಿಜಯಲಕ್ಷ್ಮೀ ಪತ್ರ! title=
ಪವಿತ್ರಾಗೌಡ ದರ್ಶನ್ ಅವರ 2ನೇ ಪತ್ನಿಯಲ್ಲ!

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ A2 ಆರೋಪಿ, ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಆತನ ಗೆಳತಿ, A1 ಆರೋಪಿ ಪವಿತ್ರಾಗೌಡ ಸೇರಿದಂತೆ 18 ಮಂದಿ ಆರೋಪಿಗಳು ಜೈಲುಪಾಲಾಗಿದ್ದಾರೆ. ಜೈಲುವಾಸದಿಂದ ದರ್ಶನ್‌ & ಪವಿತ್ರಾಗೌಡ ಬೇಸತ್ತು ಹೋಗಿದ್ದಾರೆ.

ಹೇಗೆದರೂ ಮಾಡಿ ಬೇಲ್‌ ಮೇಲೆ ಬರಬೇಕೆಂದು ದರ್ಶನ್‌ ಪ್ರಯತ್ನಿಸುತ್ತಿದ್ದಾರೆಂದು ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಪ್ರತಿದಿನ ಒಂದೊಂದು ಸುದ್ದಿಗಳು ಹೊರಬೀಳುತ್ತಿವೆ. ತನಿಖೆ ಕೈಗೊಂಡಿರುವ ಪೊಲೀಸರು ಹೊಸ ಹೊಸ ವಿಷಯಗಳನ್ನು ಬಹಿರಂಗಪಡಿಸುತ್ತಿದ್ದಾರೆ. 

ಇದನ್ನೂ ಓದಿ: ಸ್ಟಾರ್ ನಟಿಯನ್ನು ಹರಾಜು ಹಾಕಿದ ಪತಿ..! ಸ್ನೇಹಿತರ ಜೊತೆ ರಾತ್ರಿ ಕಳೆಯುವಂತೆ ಒತ್ತಾಯ..

ಇದರ ಎಲ್ಲದರ ನಡುವೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಪೊಲೀಸರಿಗೆ ಪತ್ರವನ್ನು ಬರೆದಿದ್ದಾರೆ. ಪವಿತ್ರಾಗೌಡ ನಟ ದರ್ಶನ್‌ ಪತ್ನಿಯಲ್ಲವೆಂದು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗೋಷ್ಠಿ ವೇಳೆ ಪೊಲೀಸ್ ಕಮಿಷನರ್ ಅವರು, ಪವಿತ್ರಾಗೌಡ ನಟ ದರ್ಶನ್‌ ಅವರ ಪತ್ನಿ ಎಂದಿದ್ದರಂತೆ. ಹೀಗಾಗಿ ಇದಕ್ಕೆ ಸ್ಪಷ್ಟನೆ ನೀಡುವ ಉದ್ದೇಶದಿಂದ ವಿಜಯಲಕ್ಷ್ಮೀ ಅವರು ಪತ್ರವನ್ನು ಬರೆದಿದ್ದಾರೆ.

ಬೆಂಗಳೂರು ಪೊಲೀಸ್​​ ಕಮಿಷನರ್​ಗೆ ಬರೆದಿರುವ ಪತ್ರದಲ್ಲಿ ವಿಜಯಲಕ್ಷ್ಮೀ ಅವರು, ʼಪವಿತ್ರಾಗೌಡ ನಟ ದರ್ಶನ್‌ ಅವರ 2ನೇ ಪತ್ನಿಯಲ್ಲವೆಂದು ಹೇಳಿದ್ದಾರೆ. ಕಾನೂನಿನ ಪ್ರಕಾರ ನಾನು ಮಾತ್ರ ನಟ ದರ್ಶನ್​​ ಅವರ ಏಕೈಕ ಪತ್ನಿ. 2003ರಲ್ಲಿ ಧರ್ಮಸ್ಥಳದಲ್ಲಿ ನಾನು ಮತ್ತು ದರ್ಶನ್​ ಮದುವೆಯಾಗಿದ್ದೆವು. ಪವಿತ್ರಾಗೌಡ ನನ್ನ ಪತಿ ದರ್ಶನ್​ ಸ್ನೇಹಿತೆ ಅಷ್ಟೇ ಎಂದು ಪೊಲೀಸ್​ ಆಯುಕ್ತರಿ​​ಗೆ ಬರೆದ ಪತ್ರದಲ್ಲಿ ವಿಜಯಲಕ್ಷ್ಮೀ ಅವರು ತಿಳಿಸಿದ್ದಾರೆಂದು ತಿಳಿದುಬಂದಿದೆ.    

ಇದನ್ನೂ ಓದಿ: ಆಸ್ಪತ್ರೆ ಬೆಡ್‌ ಮೇಲೆ ʼಬೇಬಿ ಶಾಮಿಲಿʼ..! ಏನಾಯ್ತು ನಟಿ ಆರೋಗ್ಯಕ್ಕೆ.?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News